<p>ಲಕ್ಷ್ಮೇಶ್ವರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿಯ ಪರಮ ಭಕ್ತರು. ಸ್ವಾಮೀಜಿ ತಪಸ್ಸು ಮಾಡಿದ ಕ್ಷೇತ್ರವಾದ ತಾಲ್ಲೂಕಿನ ಮುಕ್ತಿಮಂದಿರದ ಜೊತೆ ಅವರದ್ದು ನಿರಂತರ ಒಡನಾಟವಿದೆ.</p>.<p>ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಏಪ್ರಿಲ್ನಲ್ಲಿ ಮುಕ್ತಿಮಂದಿರ ಧರ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಸ್ವಾಮೀಜಿ ಗದ್ದುಗೆಗೆ ಸಂಕಲ್ಪ ಸಹಿತ ವಿಶೇಷ ಪೂಜೆ ಸಲ್ಲಿಸಿದ್ದರು. ‘ನಾನು ಬಹುವಾಗಿ ನಂಬಿರುವ ವೀರ ಗಂಗಾಧರ ಅಜ್ಜಯ್ಯ ನೆಲೆಸಿದ ಜಾಗವಿದು. ಎಲ್ಲದಕ್ಕೂ ಸಮಯವೇ ಉತ್ತರಿಸುತ್ತದೆ’ ಎಂದಿದ್ದರು.</p>.<p>ಅಜ್ಜಯ್ಯನ ಮಹಿಮೆ: ವೀರಗಂಗಾಧರ ಶಿವಾಚಾರ್ಯರನ್ನು ಅಜ್ಜಯ್ಯ ಎಂದು ಭಕ್ತಿಪೂರ್ವಕವಾಗಿ ಕರೆಯಲಾಗುತ್ತದೆ. ಬಾಳೆಹೊನ್ನೂರು ರಂಭಾಪುರಿ ಪೀಠದ ಅಧ್ಯಕ್ಷರಾಗಿದ್ದ ಅವರು ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮುಕ್ತಿಮಂದಿರ ಸ್ಥಾಪಿಸಿದರು.</p>.<p>ಹುಬ್ಬಳ್ಳಿ ತಾಲ್ಲೂಕಿನ ಪಾಲಿಕೊಪ್ಪದಲ್ಲಿ ಜನಿಸಿದ ಶ್ರೀಗಳು, ಲಕ್ಷ್ಮೇಶ್ವರ ತಾಲ್ಲೂಕಿನ ಬೆಟ್ಟ–ಗುಡ್ಡಗಳಿಂದ ಕೂಡಿದ್ದ ಪ್ರದೇಶಕ್ಕೆ ಬಂದಿದ್ದರು. ಹಲವು ವರ್ಷಗಳವರೆಗೆ ಕಠಿಣ ತಪಸ್ಸು ಮಾಡಿ, ಮುಕ್ತಿಮಂದಿರ ಧರ್ಮಕ್ಷೇತ್ರ ಸ್ಥಾಪಿಸಿದರು.</p>.<p>ಡಿ.ಕೆ. ಶಿವಕುಮಾರ್ ಭೇಟಿ: ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾಗ ಅವರಿಗೆ ವಿಶೇಷ ಪೂಜೆ ನೆರವೇರಿಸಿ, ಪಲ್ಲಕ್ಕಿ ಉತ್ಸವ ಮಾಡಲಾಗಿತ್ತು. ಆಗ ಡಿ.ಕೆ. ಶಿವಕುಮಾರ್ ಅವರ ತಾಯಿ, ಶ್ರೀಗಳ ಆಶೀರ್ವಾದ ಪಡೆದಿದ್ದರು. ಬಾಲಕ ಶಿವಕುಮಾರ್ ಅವರನ್ನು ತೋರಿಸಿ, ಆಶೀರ್ವಾದ ಮಾಡುವಂತೆ ಪ್ರಾರ್ಥಿಸಿದ್ದರು. ಡಿ.ಕೆ. ಶಿವಕುಮಾರ್ ದೊಡ್ಡ ವ್ಯಕ್ತಿಯಾಗಲೆಂದು ಶ್ರೀಗಳು ಆಶೀರ್ವಾದ ಮಾಡಿದರು. ಎಷ್ಟೇ ಒತ್ತಡವಿದ್ದರೂ ಡಿ.ಕೆ.ಶಿವಕುಮಾರ್ ಅವರು ಆಗಾಗ್ಗೆ ಮುಕ್ತಿಮಂದಿರಕ್ಕೆ ಬಂದು, ಅಜ್ಜಯ್ಯನ ಆಶೀರ್ವಾದ ಪಡೆಯುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.</p>.<div><blockquote>ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ವೀರಗಂಗಾಧರ ಶಿವಾಚಾರ್ಯರ ಆಶೀರ್ವಾದವೂ ಕಾರಣ. ತ್ರಿಕೋಟಿ ಶಿವಲಿಂಗ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು </blockquote><span class="attribution">ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಪೀಠಾಧ್ಯಕ್ಷ, ಮುಕ್ತಿ ಮಂದಿರ ಧರ್ಮಕ್ಷೇತ್ರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಕ್ಷ್ಮೇಶ್ವರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿಯ ಪರಮ ಭಕ್ತರು. ಸ್ವಾಮೀಜಿ ತಪಸ್ಸು ಮಾಡಿದ ಕ್ಷೇತ್ರವಾದ ತಾಲ್ಲೂಕಿನ ಮುಕ್ತಿಮಂದಿರದ ಜೊತೆ ಅವರದ್ದು ನಿರಂತರ ಒಡನಾಟವಿದೆ.</p>.<p>ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಏಪ್ರಿಲ್ನಲ್ಲಿ ಮುಕ್ತಿಮಂದಿರ ಧರ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಸ್ವಾಮೀಜಿ ಗದ್ದುಗೆಗೆ ಸಂಕಲ್ಪ ಸಹಿತ ವಿಶೇಷ ಪೂಜೆ ಸಲ್ಲಿಸಿದ್ದರು. ‘ನಾನು ಬಹುವಾಗಿ ನಂಬಿರುವ ವೀರ ಗಂಗಾಧರ ಅಜ್ಜಯ್ಯ ನೆಲೆಸಿದ ಜಾಗವಿದು. ಎಲ್ಲದಕ್ಕೂ ಸಮಯವೇ ಉತ್ತರಿಸುತ್ತದೆ’ ಎಂದಿದ್ದರು.</p>.<p>ಅಜ್ಜಯ್ಯನ ಮಹಿಮೆ: ವೀರಗಂಗಾಧರ ಶಿವಾಚಾರ್ಯರನ್ನು ಅಜ್ಜಯ್ಯ ಎಂದು ಭಕ್ತಿಪೂರ್ವಕವಾಗಿ ಕರೆಯಲಾಗುತ್ತದೆ. ಬಾಳೆಹೊನ್ನೂರು ರಂಭಾಪುರಿ ಪೀಠದ ಅಧ್ಯಕ್ಷರಾಗಿದ್ದ ಅವರು ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮುಕ್ತಿಮಂದಿರ ಸ್ಥಾಪಿಸಿದರು.</p>.<p>ಹುಬ್ಬಳ್ಳಿ ತಾಲ್ಲೂಕಿನ ಪಾಲಿಕೊಪ್ಪದಲ್ಲಿ ಜನಿಸಿದ ಶ್ರೀಗಳು, ಲಕ್ಷ್ಮೇಶ್ವರ ತಾಲ್ಲೂಕಿನ ಬೆಟ್ಟ–ಗುಡ್ಡಗಳಿಂದ ಕೂಡಿದ್ದ ಪ್ರದೇಶಕ್ಕೆ ಬಂದಿದ್ದರು. ಹಲವು ವರ್ಷಗಳವರೆಗೆ ಕಠಿಣ ತಪಸ್ಸು ಮಾಡಿ, ಮುಕ್ತಿಮಂದಿರ ಧರ್ಮಕ್ಷೇತ್ರ ಸ್ಥಾಪಿಸಿದರು.</p>.<p>ಡಿ.ಕೆ. ಶಿವಕುಮಾರ್ ಭೇಟಿ: ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾಗ ಅವರಿಗೆ ವಿಶೇಷ ಪೂಜೆ ನೆರವೇರಿಸಿ, ಪಲ್ಲಕ್ಕಿ ಉತ್ಸವ ಮಾಡಲಾಗಿತ್ತು. ಆಗ ಡಿ.ಕೆ. ಶಿವಕುಮಾರ್ ಅವರ ತಾಯಿ, ಶ್ರೀಗಳ ಆಶೀರ್ವಾದ ಪಡೆದಿದ್ದರು. ಬಾಲಕ ಶಿವಕುಮಾರ್ ಅವರನ್ನು ತೋರಿಸಿ, ಆಶೀರ್ವಾದ ಮಾಡುವಂತೆ ಪ್ರಾರ್ಥಿಸಿದ್ದರು. ಡಿ.ಕೆ. ಶಿವಕುಮಾರ್ ದೊಡ್ಡ ವ್ಯಕ್ತಿಯಾಗಲೆಂದು ಶ್ರೀಗಳು ಆಶೀರ್ವಾದ ಮಾಡಿದರು. ಎಷ್ಟೇ ಒತ್ತಡವಿದ್ದರೂ ಡಿ.ಕೆ.ಶಿವಕುಮಾರ್ ಅವರು ಆಗಾಗ್ಗೆ ಮುಕ್ತಿಮಂದಿರಕ್ಕೆ ಬಂದು, ಅಜ್ಜಯ್ಯನ ಆಶೀರ್ವಾದ ಪಡೆಯುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.</p>.<div><blockquote>ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ವೀರಗಂಗಾಧರ ಶಿವಾಚಾರ್ಯರ ಆಶೀರ್ವಾದವೂ ಕಾರಣ. ತ್ರಿಕೋಟಿ ಶಿವಲಿಂಗ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು </blockquote><span class="attribution">ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಪೀಠಾಧ್ಯಕ್ಷ, ಮುಕ್ತಿ ಮಂದಿರ ಧರ್ಮಕ್ಷೇತ್ರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>