ಪ್ರತಿ ಶುಕ್ರವಾರ ಪಟ್ಟಣದಲ್ಲಿ ಜಾನುವಾರು ಸಂತೆ ನಡೆಯುತ್ತಿದ್ದು, ಸಾಕಷ್ಟು ರೈತರು ಎತ್ತುಗಳನ್ನು ಮಾರಾಟ ಮಾಡಲು ತಂದಿದ್ದರು. ಮುಂಗಾರಿನಲ್ಲಿ ಬೆಳೆಯು ಗೋವಿನ ಜೋಳ, ಹಿಂಗಾರು ಹಂಗಾಮಿನ ಬಿಳಿಜೋಳದ ದಂಟುಗಳು, ಶೇಂಗಾ ಹೊಟ್ಟು ಜಾನುವಾರುಗಳಿಗೆ ಪ್ರಮುಖ ಆಹಾರ. ಆದರೆ, ಈ ವರ್ಷ ಮಳೆ ಕೊರತೆಯಿಂದ ಬಿತ್ತನೆ ಆಗದ ಕಾರಣ, ಈ ಮೇವಿಗೂ ಕೊರತೆ ಎದುರಾಗಿದೆ.