ಗದಗ: 11ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಶ್ವೇತಾ ದಂಡಿನ ಅವರು ಈಶ್ವರ ದೇವಸ್ಥಾನ, ಇರಾನಿ ಕಾಲೊನಿ, ನಿಸರ್ಗ ಬಡಾವಣೆ, ಕರೆಯಮ್ಮಕಲ್ಲ ಬಡಾವಣೆ ಗಲ್ಲಿ, ಹಮಾಲರ ಕಾಲೊನಿ ಸೇರಿದಂತೆ 16ನೇ ಶಾಲೆಯ ಭಾಗದಲ್ಲಿ ಭಾನುವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
‘ವಾರ್ಡ್ ನಂ.11ರಲ್ಲಿ ಮೂಲಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ, ರಸ್ತೆ, ಸ್ವಚ್ಛತೆಗಾಗಿ ಶ್ರಮಿಸಲಾಗುವುದು. ವಾರ್ಡ್ನಲ್ಲಿರುವ ಬಡ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿರುವುದು ಅಗತ್ಯ. ಆದ್ದರಿಂದಈ ಬಾರಿ ಬಿಜೆಪಿಗೆ ಮತ ನೀಡಿ ವಾರ್ಡ್ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಶ್ವೇತಾ ಮತದಾರರಲ್ಲಿ ಮನವಿ ಮಾಡಿದರು.
ಶಂಕ್ರಪ್ಪ ಇಂಡಿ, ಸುದರ್ಶನ ಹಾನಗಲ್ಲ, ನಾಮದೇವ ಚಕ್ರಣ್ಣವರ, ಕೆ.ಎಸ್.ಕಾಶಪ್ಪನವರ, ರವಿ ದಂಡಿನ, ಸುಮಾ ನಾರಪ್ಪನವರ, ಶರಣಪ್ಪ ಕುರಿ, ಸತೀಶ ಮುದಗಲ್ಲ, ಡಾ.ಸೂರಿ, ಪ್ರೊ.ಕಾಮನಹಳ್ಳಿ, ಅಂದಪ್ಪನವರ, ಸೇರಿದಂತೆ ಹಾಗೂ ವಾರ್ಡಿನ ಹಿರಿಯರು, ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.