2 ತಿಂಗಳಲ್ಲಿ ಹಕ್ಕುಪತ್ರ: ‘ವಾರ್ಡ್ ನಂ.1,2,30 ಸೇರಿ ವಿವಿಧೆಡೆ ಇರುವ ಕಾಲೊನಿಗಳಲ್ಲಿ 20 ವರ್ಷಗಳಿಂದ ವಾಸಿಸುವ ಜನರಿಗೆ ಹಕ್ಕು ಪತ್ರಗಳನ್ನು ನೀಡುವಲ್ಲಿ ನಗರಸಭೆ ಆಡಳಿತ ಹಾಗೂ ಕಾಂಗ್ರೆಸ್ನ ನಾಯಕತ್ವ ವಿಫಲವಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಹಕ್ಕುಪತ್ರ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿ, ವಿಶೇಷ ಅನುದಾನ ತಂದು, ಅವಳಿ ನಗರದ ಅಭಿವೃದ್ಧಿ ಮುಂದಾಗುತ್ತೇವೆ’ ಎಂದು ಭರವಸೆ ನೀಡಿದರು.