ಲಕ್ಷ್ಮೇಶ್ವರ: ಇಲ್ಲಿನ ಪುರಸಭೆ ಉಮಾವಿದ್ಯಾಲಯ ಕ್ರೀಡಾಂಗಣದಲ್ಲಿ ಸೋಮೇಶ್ವರ ಮತ್ತು ದೂದನಾನಾ ಕ್ರಿಕೆಟ್ ಕ್ಲಬ್ನವರು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಕ್ರಿಕೆಟ್ ಟೂರ್ನಾಮೆಂಟ್ನಲ್ಲಿ ಲಕ್ಷ್ಮೇಶ್ವರದ ಇಲೆವನ್ ಕ್ರಿಕೆಟ್ ಕ್ಲಬ್ ಪ್ರಥಮ ಸ್ಥಾನ ಪಡೆದು ₹1.5 ಲಕ್ಷ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು.
ವಿಜಯಪುರದ ಕ್ರಿಕೆಟ್ ಕ್ಲಬ್ ದ್ವಿತೀಯ ₹75 ಸಾವಿರ ಹಾಗೂ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಎಫ್.ಎಂ. ಕ್ರಿಕೆಟ್ ಕ್ಲಬ್ ಮತ್ತು ಹಾವೇರಿ ಜಿಲ್ಲೆ ಯಳವಗಿ ಗ್ರಾಮದ ಇಂಡಿಯನ್ ಕ್ರಿಕೆಟ್ ಕ್ಲಬ್ ತೃತೀಯ ಬಹುಮಾನ ₹25 ಸಾವಿರ ರೂಪಾಯಿಗಳನ್ನು ಹಂಚಿಕೊಂಡರು.
ವಿಜೇತ ತಂಡಗಳಿಗೆ ಪಿಎಸ್ಐ ಶಿವಯೋಗಿ ಲೋಹಾರ ಭಾನುವಾರ ಬಹುಮಾನ ವಿತರಿಸಿ ‘ಮೊಬೈಲ್ ಹಾವಳಿ ಮಧ್ಯೆ ಯುವ ಜನತೆ ಆಟೋಟಗಳನ್ನೇ ಮರೆತಿದ್ದಾರೆ. ಆಟಗಳನ್ನು ಆಡುವುದರಿಂದ ನಮ್ಮಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಗೊಳ್ಳುತ್ತದೆ.
ಜೊತೆಗೆ ರೋಗ ನಿರೋಧಕತೆಯೂ ಹೆಚ್ಚುತ್ತದೆ. ಯುವ ಜನರು ಈ ನಿಜವನ್ನು ತಿಳಿದುಕೊಳ್ಳಬೇಕು’ ಎಂದು ಅವರು ಹೇಳಿದರು.
ಟೂರ್ನಾಮೆಂಟ್ನ ಆಯೋಜಕರಾದ ಶರಣು ಗೋಡಿ, ಇಸ್ಮಾಯಿಲ್ ಆಡೂರ, ಪುರಸಭೆ ಸದಸ್ಯ ಸಿಕಂದರ ಕಣಕೆ, ಬಿ.ಎಸ್. ಬಾಳೇಶ್ವರಮಠ ಇದ್ದರು.