ಗದಗ: ತೋಂಟದಾರ್ಯ ಮಠದಲ್ಲಿ ಈಚೆಗೆ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಹಿಂದಿ ಉಪನ್ಯಾಸಕಿ ಸಂಗೀತಾ ಭಂಡಾರಿ ಅವರಿಗೆ ಏಷ್ಯಾ ಸ್ಟಾರ್ ಐಕಾನ್ ಆರ್ಟ್ ಅಚೀವರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಕಲಾ ಗ್ಯಾಲರಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾರತದಾದ್ಯಂತ 30 ಕಲಾಕೃತಿಗಳಿಗೆ ಪ್ರಶಸ್ತಿ ಲಭಿಸಿದ್ದು, ಸಂಗೀತಾ ಅವರು ಕರ್ನಾಟಕದಿಂದ ಪ್ರಶಸ್ತಿ ಪಡೆದ ಏಕೈಕ ಕಲಾವಿದೆಯಾಗಿದ್ದಾರೆ.
ಆಧುನಿಕ ದಿನಗಳಲ್ಲಿ ಕುಸಿಯುತ್ತಿರುವ ತಂದೆ-ತಾಯಿಗಳ ಹಾಗೂ ಮಕ್ಕಳ ಸಂಬಂಧವನ್ನು ಚಿತ್ರಿಸಿದ್ದ ಇವರ ಕಲಾಕೃತಿಗೆ ಪ್ರಶಸ್ತಿ ದೊರೆತಿದೆ.
ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಶಸ್ತಿ ನೀಡಿ ಆಶೀರ್ವದಿಸಿದರು.
ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್ ಪಟ್ಟಣಶೆಟ್ಟರ, ತೋಂಟದ ಸಿದ್ಧೇಶ್ವರ ಪಿ.ಯು ಕಾಲೇಜು ಪ್ರಾಚಾರ್ಯ ಕೊಟ್ರೇಶ ಮೆಣಸಿನಕಾಯಿ, ಪ್ರೊ.ವೈ.ಎಸ್.ಮತ್ತೂರ ಅಭಿನಂದನೆ ಸಲ್ಲಿಸಿದ್ದಾರೆ.