ಪಿಡಿಒ ಸಂಕನಗೌಡ್ರ ಅವರು ಸಂತ್ರಸ್ತೆಗೆ ಮನೆ ಕೊಡಲು ಇರುವ ತಾಂತ್ರಿಕ ಸಮಸ್ಯೆಯನ್ನು ವಿವರಿಸಲು ಮುಂದಾದರು. ಇದನ್ನು ಅರ್ಧದಲ್ಲೇ ತಡೆದ ಸಚಿವರು, ‘ಯಾವುದೇ ಸಮಸ್ಯೆ ಹೇಳಬೇಡ, ಅವಳು ಮೊದಲೇ ವಿಧವೆ ಅದಾಳ, ಆಕೆ ಏನು ಮಾಡಬೇಕು, ಆಧಾರ ಕಾರ್ಡ್ ಐತಲ್ಲೋ, ಅದರ ಮೂಲಕ ಮನೆ ಕೊಡಬೇಕು ಅಷ್ಟೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲರ ಎದುರೇ ತಾಕೀತು ಮಾಡಿದರು.