‘ಮೂಢನಂಬಿಕೆ, ಕಂದಾಚಾರಗಳನ್ನು ಅಲ್ಲಗಳೆದ ಬಸವೇಶ್ವರರು ಸಾತ್ವಿಕ ಭಕ್ತಿಗೆ ದೇವರು ಒಲಿಯುತ್ತಾನೆಯೇ ವಿನಹ ಅರ್ಥಹೀನ ಆಚರಣೆಗಳಿಂದ ಒಳಿತು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಅನಾಚಾರವನ್ನು ಬದಿಗೊತ್ತಿ ಸದಾಚಾರ, ಭಕ್ತಿ ಮಾರ್ಗ ತೋರಿಸಿದ ಬಸವೇಶ್ವರರು ಮಹತ್ವದ ಸಾಮಾಜಿಕ ಬದಲಾವಣೆಗೆ ಕಾರಣರಾದರು’ ಎಂದು ಹೇಳಿದರು.