<p><strong>ಗದಗ: ‘</strong>ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಗದಗ ಬೆಟಗೇರಿ ನಗರಸಭೆ ಚುನಾವಣೆ ನಡೆಸಿದ ಬಗ್ಗೆ ಜಿಲ್ಲಾ ಆಡಳಿತ ತಪ್ಪೊಪ್ಪಿಗೆ ಪತ್ರ ನೀಡಿ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆಯಿಂದ ಬಚಾವಾಗಿರಬಹುದು. ಆದರೆ, ಜಿಲ್ಲಾಡಳಿತವನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕಾಗಿ ಜನಾದೇಶವನ್ನೇ ಬಲಿಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಅವಳಿ ನಗರದ ಜನತೆಯ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.</p>.<p>‘2025ರ ಫೆಬ್ರುವರಿ 28ರಂದು ನಡೆದ ಚುನಾವಣಾ ಪ್ರಕ್ರಿಯೆ ಇನ್ನು ಪೂರ್ಣಗೊಳ್ಳುವ ಮುನ್ನವೇ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಅಡ್ವೊಕೇಟ್ ಜನರಲ್ ಅವರು ವಿಚಾರಣೆ ಸಭಾಂಗಣದಿಂದಲೇ ಸಂಪರ್ಕ ಸಾಧಿಸಿ, ಜಿಲ್ಲಾಡಳಿತಕ್ಕೆ ಆದೇಶದ ವಿಷಯ ತಲುಪಿಸಿದ್ದರು. ಆದರೆ ಜಿಲ್ಲಾಡಳಿತ ನಗರಸಭೆ ಆವರಣಕ್ಕೆ ಆ ಕೂಡಲೇ ಬರಲಿಲ್ಲ. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಸಿ.ಪಾಟೀಲ ಅವರು ಜಿಲ್ಲಾಧಿಕಾರಿಗೆ ಕರೆ ಮಾಡಿ, ಕಾನೂನು ಉಲ್ಲಂಘನೆ ಮಾಡುತ್ತಿದ್ದೀರಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ಆದರೆ, ಆ ವೇಳೆಗಾಗಲೇ ನಗರಸಭೆ ಆವರಣದ ಗೇಟು, ಕಟ್ಟಡದ ಬಾಗಿಲು, ಕಿಟಕಿ ಅಷ್ಟೇ ಅಲ್ಲದೇ ಸಂಪರ್ಕ ಸಾಧನವಾದ ಸ್ಥಿರ ದೂರವಾಣಿ, ಮೊಬೈಲ್, ಫ್ಯಾಕ್ಸ್ ಎಲ್ಲವನ್ನು ಬಂದ್ ಮಾಡಲಾಗಿತ್ತು. ಪೊಲೀಸರ ಸರ್ಪಗಾವಲು ರಚಿಸಿಕೊಂಡ ಚುನಾವಣಾಧಿಕಾರಿ ಹೈಕೋರ್ಟ್ ಆದೇಶ ತಂದ ಹೆಚ್ಚುವರಿ ಜಿಲ್ಲಾಧಿಕಾರಿಯನ್ನೂ ಒಳ ಬಿಟ್ಟುಕೊಳ್ಳದೆ ಚುನಾವಣೆ ನಡೆಸುತ್ತಾರೆ ಅಂದರೆ ಅದರ ಹಿಂದಿನ ಶಕ್ತಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಅಂದರೆ ತಪ್ಪಾಗಲಾರದು’ ಎಂದು ಆರೋಪಿಸಿದ್ದಾರೆ.</p>.<p>‘ಅಧಿಕಾರವನ್ನು ಜನರ ಆಶೀರ್ವಾದದಿಂದ ಪಡೆದುಕೊಳ್ಳಬೇಕೆ ಹೊರತು, ದುಂಡಾವರ್ತನೆ ಮಾಡಿ ಕಿತ್ತುಕೊಳ್ಳುವುದಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ನಡೆಸಿದ ಘಟನೆ ಕುರಿತು ಜಿಲ್ಲಾ ಆಡಳಿತವೇ ತನ್ನ ತಪ್ಪನ್ನು ಒಪ್ಪಿಕೊಂಡಿರುವುದು ಅತ್ಯಂತ ಗಂಭೀರ ಮತ್ತು ವಿಷಾದನೀಯ ಬೆಳವಣಿಗೆ’ ಎಂದು ತಿಳಿಸಿದ್ದಾರೆ.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶಗಳಿಗೆ ಗೌರವ ನೀಡುವುದು ಸರ್ಕಾರದ ಎಲ್ಲ ಅಂಗಗಳ ಮೂಲಭೂತ ಕರ್ತವ್ಯ. ಸಂವಿಧಾನಬದ್ಧವಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಇಂತಹ ಘಟನೆಗೆ ಕಾರಣರಾದ ಜಿಲ್ಲಾಡಳಿತದ ಅಧಿಕಾರಿಗಳನ್ನು ಕೂಡಲೇ ಬೇರೆ ಜಿಲ್ಲೆಗೆ ವರ್ಗಾಯಿಸಬೇಕು. ಇಲ್ಲವೇ ತಾವಾದರೂ ಈಗಿದ್ದ ಕಾನೂನು ಮಂತ್ರಿ ಪದವಿಯನ್ನು ಬದಲಾಯಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. </p>.<div><blockquote>ಜನರು ನೀಡಿದ ಮತದ ಆದೇಶವನ್ನು ಗೌರವಿಸುವುದು ರಾಜಕೀಯ ನಾಯಕರ ಮೊದಲ ಜವಾಬ್ದಾರಿ. ಈ ವಿಚಾರ ಸಚಿವ ಎಚ್.ಕೆ.ಪಾಟೀಲರು ನೈತಿಕ ಹೊಣೆ ಹೊತ್ತು ಅವಳಿ ನಗರದ ಜನತೆಯ ಕ್ಷಮೆ ಕೇಳಬೇಕು </blockquote><span class="attribution">ಲಿಂಗರಾಜ ಪಾಟೀಲ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: ‘</strong>ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಗದಗ ಬೆಟಗೇರಿ ನಗರಸಭೆ ಚುನಾವಣೆ ನಡೆಸಿದ ಬಗ್ಗೆ ಜಿಲ್ಲಾ ಆಡಳಿತ ತಪ್ಪೊಪ್ಪಿಗೆ ಪತ್ರ ನೀಡಿ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆಯಿಂದ ಬಚಾವಾಗಿರಬಹುದು. ಆದರೆ, ಜಿಲ್ಲಾಡಳಿತವನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕಾಗಿ ಜನಾದೇಶವನ್ನೇ ಬಲಿಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಅವಳಿ ನಗರದ ಜನತೆಯ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.</p>.<p>‘2025ರ ಫೆಬ್ರುವರಿ 28ರಂದು ನಡೆದ ಚುನಾವಣಾ ಪ್ರಕ್ರಿಯೆ ಇನ್ನು ಪೂರ್ಣಗೊಳ್ಳುವ ಮುನ್ನವೇ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಅಡ್ವೊಕೇಟ್ ಜನರಲ್ ಅವರು ವಿಚಾರಣೆ ಸಭಾಂಗಣದಿಂದಲೇ ಸಂಪರ್ಕ ಸಾಧಿಸಿ, ಜಿಲ್ಲಾಡಳಿತಕ್ಕೆ ಆದೇಶದ ವಿಷಯ ತಲುಪಿಸಿದ್ದರು. ಆದರೆ ಜಿಲ್ಲಾಡಳಿತ ನಗರಸಭೆ ಆವರಣಕ್ಕೆ ಆ ಕೂಡಲೇ ಬರಲಿಲ್ಲ. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಸಿ.ಪಾಟೀಲ ಅವರು ಜಿಲ್ಲಾಧಿಕಾರಿಗೆ ಕರೆ ಮಾಡಿ, ಕಾನೂನು ಉಲ್ಲಂಘನೆ ಮಾಡುತ್ತಿದ್ದೀರಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ಆದರೆ, ಆ ವೇಳೆಗಾಗಲೇ ನಗರಸಭೆ ಆವರಣದ ಗೇಟು, ಕಟ್ಟಡದ ಬಾಗಿಲು, ಕಿಟಕಿ ಅಷ್ಟೇ ಅಲ್ಲದೇ ಸಂಪರ್ಕ ಸಾಧನವಾದ ಸ್ಥಿರ ದೂರವಾಣಿ, ಮೊಬೈಲ್, ಫ್ಯಾಕ್ಸ್ ಎಲ್ಲವನ್ನು ಬಂದ್ ಮಾಡಲಾಗಿತ್ತು. ಪೊಲೀಸರ ಸರ್ಪಗಾವಲು ರಚಿಸಿಕೊಂಡ ಚುನಾವಣಾಧಿಕಾರಿ ಹೈಕೋರ್ಟ್ ಆದೇಶ ತಂದ ಹೆಚ್ಚುವರಿ ಜಿಲ್ಲಾಧಿಕಾರಿಯನ್ನೂ ಒಳ ಬಿಟ್ಟುಕೊಳ್ಳದೆ ಚುನಾವಣೆ ನಡೆಸುತ್ತಾರೆ ಅಂದರೆ ಅದರ ಹಿಂದಿನ ಶಕ್ತಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಅಂದರೆ ತಪ್ಪಾಗಲಾರದು’ ಎಂದು ಆರೋಪಿಸಿದ್ದಾರೆ.</p>.<p>‘ಅಧಿಕಾರವನ್ನು ಜನರ ಆಶೀರ್ವಾದದಿಂದ ಪಡೆದುಕೊಳ್ಳಬೇಕೆ ಹೊರತು, ದುಂಡಾವರ್ತನೆ ಮಾಡಿ ಕಿತ್ತುಕೊಳ್ಳುವುದಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ನಡೆಸಿದ ಘಟನೆ ಕುರಿತು ಜಿಲ್ಲಾ ಆಡಳಿತವೇ ತನ್ನ ತಪ್ಪನ್ನು ಒಪ್ಪಿಕೊಂಡಿರುವುದು ಅತ್ಯಂತ ಗಂಭೀರ ಮತ್ತು ವಿಷಾದನೀಯ ಬೆಳವಣಿಗೆ’ ಎಂದು ತಿಳಿಸಿದ್ದಾರೆ.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶಗಳಿಗೆ ಗೌರವ ನೀಡುವುದು ಸರ್ಕಾರದ ಎಲ್ಲ ಅಂಗಗಳ ಮೂಲಭೂತ ಕರ್ತವ್ಯ. ಸಂವಿಧಾನಬದ್ಧವಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಇಂತಹ ಘಟನೆಗೆ ಕಾರಣರಾದ ಜಿಲ್ಲಾಡಳಿತದ ಅಧಿಕಾರಿಗಳನ್ನು ಕೂಡಲೇ ಬೇರೆ ಜಿಲ್ಲೆಗೆ ವರ್ಗಾಯಿಸಬೇಕು. ಇಲ್ಲವೇ ತಾವಾದರೂ ಈಗಿದ್ದ ಕಾನೂನು ಮಂತ್ರಿ ಪದವಿಯನ್ನು ಬದಲಾಯಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. </p>.<div><blockquote>ಜನರು ನೀಡಿದ ಮತದ ಆದೇಶವನ್ನು ಗೌರವಿಸುವುದು ರಾಜಕೀಯ ನಾಯಕರ ಮೊದಲ ಜವಾಬ್ದಾರಿ. ಈ ವಿಚಾರ ಸಚಿವ ಎಚ್.ಕೆ.ಪಾಟೀಲರು ನೈತಿಕ ಹೊಣೆ ಹೊತ್ತು ಅವಳಿ ನಗರದ ಜನತೆಯ ಕ್ಷಮೆ ಕೇಳಬೇಕು </blockquote><span class="attribution">ಲಿಂಗರಾಜ ಪಾಟೀಲ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>