‘ಸಂಘ ಪರಿವಾರದ ಮತೀಯ ಮನಸುಗಳು ಎಷ್ಟೇ ಪ್ರಯತ್ನ ನಡೆಸಿದರೂ ರಾಜ್ಯವನ್ನು ಕೋಮುವಾದದ ಪ್ರಯೋಗಾಲಯ ಮಾಡುವುದಕ್ಕೆ ರಾಜ್ಯದ ಜನ ಅವಕಾಶ ನೀಡಲಾರರು ಎಂಬುದನ್ನು ಸರ್ಕಾರ ನಡೆಸುವ ಮಂತ್ರಿಗಳು ಅರ್ಥಮಾಡಿಕೊಳ್ಳಬೇಕಿದೆ’ ಎಂದು ವೇದಿಕೆಯ ಮುತ್ತು ಬಿಳಿಯಲಿ, ಮುತ್ತು ಹಾಳಕೇರಿ, ಅನಂತ ಕಟ್ಟೀಮನಿ, ಶರೀಫ ಬಿಳಿಯಲಿ, ಆನಂದ ಶಿಂಗಾಡಿ, ರಮೇಶ ಬಾಳಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.