<p><strong>ಗದಗ:</strong> ರಂಜಾನ್ ತಿಂಗಳ ಕಠಿಣ ವ್ರತಕ್ಕೆ ತೆರೆ ಬೀಳುವ ಹಬ್ಬವೇ ಈದ್ ಉಲ್ ಫಿತ್ರ್. ಶನಿವಾರ ನಡೆಯುವ ಈದ್ ಆಚರಣೆಗಾಗಿ ಮುಸ್ಲಿಂ ಸಮುದಾಯದ ಜನರು ಗುರುವಾರ ಮತ್ತು ಶುಕ್ರವಾರ ಭರ್ಜರಿ ಸಿದ್ಧತೆ ನಡೆಸಿದರು.</p>.<p>ಗ್ರಾಮೀಣ ಭಾಗದ ಜನರು ಹಬ್ಬದ ಆಚರಣೆಗೆ ಬೇಕಿರುವ ಬಟ್ಟೆಗಳ ಖರೀದಿಗಾಗಿ ನಗರ ಪ್ರದೇಶಗಳಿಗೆ ಬಂದಿದ್ದರು. ಹಾಗಾಗಿ, ಇಲ್ಲಿನ ಬಟ್ಟೆ ಅಂಗಡಿಗಳು ಗಿಜಿಗುಡುತ್ತಿದ್ದವು. ಹಬ್ಬದ ತಿನಿಸುಗಳ ತಯಾರಿಕೆಗೆ ಬೇಕಿರುವ ದಿನಸಿ ಸಾಮಗ್ರಿಗಳ ಖರೀದಿ ಭರಾಟೆ ಕೂಡ ಜೋರಾಗಿತ್ತು. ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಣ ಹಣ್ಣುಗಳು, ದಿನಸಿ ಸಾಮಗ್ರಿ ಹೊಸ ಬಟ್ಟೆಗಳನ್ನು ಖರೀದಿಸಿದರು.</p>.<p>ನಗರದ ಗ್ರೇನ್ ಮಾರುಕಟ್ಟೆ, ಮಟನ್ ಮಾರುಕಟ್ಟೆ, ನಾಮಜೋಶಿ ರಸ್ತೆಯಲ್ಲಿ ಜನದಟ್ಟಣೆ ವಿಪರೀತವಾಗಿತ್ತು. ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.</p>.<p>‘ಈದ್ ಎಂದರೆ ಅರಬ್ಬಿಯಲ್ಲಿ ಸಂತೋಷ, ಆನಂದ ಮರಳಿ ಬರುವುದು ಎಂದು ಅರ್ಥ. ಫಿತ್ರ್ ಎಂದರೆ ದಾನ. ಈ ಹಬ್ಬದಲ್ಲಿ ಶ್ರೀಮಂತ, ಬಡವ, ಸಾಮಾನ್ಯ ಎಲ್ಲರೂ ತಮ್ಮ ಕೈಲಾದಷ್ಟು ದಾನ ಮಾಡಬೇಕು. ಸಾಮಾನ್ಯವಾಗಿ ಬಡವರಿಗೆ ವಿಶೇಷದಾನ ನೀಡಲಾಗುತ್ತದೆ. ಇದಕ್ಕೂ ಜಕಾತ್ ಎನ್ನುತ್ತಾರೆ. ವರ್ಷಕ್ಕೊಂದು ಬಾರಿ ಮುಸ್ಲಿಂ ಧರ್ಮೀಯರು ಕಡ್ಡಾಯವಾಗಿ ನೀಡಬೇಕಾದ ಜಕಾತ್ ದಾನಕ್ಕೆ ಹೊರತಾದುದು’ ಎನ್ನುತ್ತಾರೆ ಡಾ. ತಯಬಅಲಿ ಅ. ಹೊಂಬಳ.</p>.<p>‘ಉಪವಾಸ ವ್ರತದ ಮೂಲ ಉದ್ದೇಶ ಆತ್ಮದ ಪರಿಶುದ್ಧತೆಯಾಗಿದೆ. ರಂಜಾನ್ ತಿಂಗಳ ಉಪವಾಸ ವ್ರತವು ಮೇಲ್ನೋಟಕ್ಕೆ ಆಹಾರ, ಪಾನೀಯ ಸೇವನೆಯಿಂದ ತಡೆದಿರಿಸಿಕೊಳ್ಳುವುದಾಗಿದೆ. ಆದರೆ, ಆಂತರಿಕವಾಗಿ ಉಪವಾಸವು ವ್ಯಕ್ತಿಗೆ ಆಕಾಂಕ್ಷೆಗಳ ನಿಯಂತ್ರಣ ಮತ್ತು ಧರ್ಮನಿಷ್ಠೆಯ ಜೀವನ ಲಭಿಸುವುದರ ಗುರುತಾಗಿದೆ’ ಎಂದು ತಿಳಿಸಿದರು.</p>.<p>‘ಇಲ್ಲಿ ಪ್ರತಿಯೊಬ್ಬ ಅನುಕೂಲವಂತ ಮುಸ್ಲಿಮನೂ ತನ್ನ ಹಾಗೂ ಕುಟುಂಬದ ಎಲ್ಲ ಸದಸ್ಯರ ಪರವಾಗಿ ದಾನವನ್ನು ಬಡವರಿಗೆ ನೀಡಬೇಕು. ಮನೆಯ ಪ್ರತಿ ಸದಸ್ಯನ ಪರವಾಗಿ ತಲಾ 2 ಕೆ.ಜಿ.ಯಿಂದ 5 ಕೆ.ಜಿ.ಯಷ್ಟು ಅಕ್ಕಿ, ಗೋಧಿ ಮತ್ತು ಬಟ್ಟೆಯನ್ನು ಬಡವರಿಗೆ ಹಂಚಬೇಕು. ಹಬ್ಬದ ವಿಶೇಷ ಪ್ರಾರ್ಥನೆ ಮುಂಚೆಯೇ ಈ ದಾನವನ್ನು ವಿತರಿಸಬೇಕು’ ಎಂದರು.</p>.<p>‘ರಂಜಾನ್ ತಿಂಗಳು ಮುಂಜಾನೆ ಊಟದೊಂದಿಗೆ (ಸೆಹರಿ) ಪ್ರಾರಂಭವಾಗಿ ಮತ್ತು ಸೂರ್ಯಾಸ್ತದ ಸಮಯದಲ್ಲಿ (ಇಫ್ತಾರ್) ಉಪವಾಸವನ್ನು ಮುರಿಯುವುದರೊಂದಿಗೆ ಕೊನೆಗೊಳ್ಳುತ್ತದೆ. ರಂಜಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳನ್ನು ಲೈಲತ್ ಉಲ್-ಕದ್ರ ಎನ್ನುತ್ತಾರೆ. ಇದನ್ನು ಅತ್ಯಂತ ಪವಿತ್ರ ರಾತ್ರಿ ಎಂದು ಪರಿಗಣಿಸಲಾಗಿದೆ. ಈದ್ ಉಲ್-ಫಿತ್ರ್ ಸಂತೋಷದಾಯಕ ಆಚರಣೆಯೊಂದಿಗೆ ರಂಜಾನ್ ತಿಂಗಳು ಮುಕ್ತಾಯವಾಗುತ್ತದೆ’ ಎನ್ನುತ್ತಾರೆ ವಕೀಲ ಎಂ.ಬಿ.ನದಾಫ್.</p>.<p>‘ಹೊಸ ಬಟ್ಟೆಗಳನ್ನು ಧರಿಸುವುದು, ಈದ್ಗಾ ಅಥವಾ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡುವುದು, ಮನೆಯಲ್ಲಿ ವಿಶೇಷ ರೀತಿಯ ಅಡುಗೆಗಳು ಹಾಗೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಹಬ್ಬ ಆಚರಿಸಲಾಗುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ರಂಜಾನ್ ತಿಂಗಳ ಕಠಿಣ ವ್ರತಕ್ಕೆ ತೆರೆ ಬೀಳುವ ಹಬ್ಬವೇ ಈದ್ ಉಲ್ ಫಿತ್ರ್. ಶನಿವಾರ ನಡೆಯುವ ಈದ್ ಆಚರಣೆಗಾಗಿ ಮುಸ್ಲಿಂ ಸಮುದಾಯದ ಜನರು ಗುರುವಾರ ಮತ್ತು ಶುಕ್ರವಾರ ಭರ್ಜರಿ ಸಿದ್ಧತೆ ನಡೆಸಿದರು.</p>.<p>ಗ್ರಾಮೀಣ ಭಾಗದ ಜನರು ಹಬ್ಬದ ಆಚರಣೆಗೆ ಬೇಕಿರುವ ಬಟ್ಟೆಗಳ ಖರೀದಿಗಾಗಿ ನಗರ ಪ್ರದೇಶಗಳಿಗೆ ಬಂದಿದ್ದರು. ಹಾಗಾಗಿ, ಇಲ್ಲಿನ ಬಟ್ಟೆ ಅಂಗಡಿಗಳು ಗಿಜಿಗುಡುತ್ತಿದ್ದವು. ಹಬ್ಬದ ತಿನಿಸುಗಳ ತಯಾರಿಕೆಗೆ ಬೇಕಿರುವ ದಿನಸಿ ಸಾಮಗ್ರಿಗಳ ಖರೀದಿ ಭರಾಟೆ ಕೂಡ ಜೋರಾಗಿತ್ತು. ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಣ ಹಣ್ಣುಗಳು, ದಿನಸಿ ಸಾಮಗ್ರಿ ಹೊಸ ಬಟ್ಟೆಗಳನ್ನು ಖರೀದಿಸಿದರು.</p>.<p>ನಗರದ ಗ್ರೇನ್ ಮಾರುಕಟ್ಟೆ, ಮಟನ್ ಮಾರುಕಟ್ಟೆ, ನಾಮಜೋಶಿ ರಸ್ತೆಯಲ್ಲಿ ಜನದಟ್ಟಣೆ ವಿಪರೀತವಾಗಿತ್ತು. ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.</p>.<p>‘ಈದ್ ಎಂದರೆ ಅರಬ್ಬಿಯಲ್ಲಿ ಸಂತೋಷ, ಆನಂದ ಮರಳಿ ಬರುವುದು ಎಂದು ಅರ್ಥ. ಫಿತ್ರ್ ಎಂದರೆ ದಾನ. ಈ ಹಬ್ಬದಲ್ಲಿ ಶ್ರೀಮಂತ, ಬಡವ, ಸಾಮಾನ್ಯ ಎಲ್ಲರೂ ತಮ್ಮ ಕೈಲಾದಷ್ಟು ದಾನ ಮಾಡಬೇಕು. ಸಾಮಾನ್ಯವಾಗಿ ಬಡವರಿಗೆ ವಿಶೇಷದಾನ ನೀಡಲಾಗುತ್ತದೆ. ಇದಕ್ಕೂ ಜಕಾತ್ ಎನ್ನುತ್ತಾರೆ. ವರ್ಷಕ್ಕೊಂದು ಬಾರಿ ಮುಸ್ಲಿಂ ಧರ್ಮೀಯರು ಕಡ್ಡಾಯವಾಗಿ ನೀಡಬೇಕಾದ ಜಕಾತ್ ದಾನಕ್ಕೆ ಹೊರತಾದುದು’ ಎನ್ನುತ್ತಾರೆ ಡಾ. ತಯಬಅಲಿ ಅ. ಹೊಂಬಳ.</p>.<p>‘ಉಪವಾಸ ವ್ರತದ ಮೂಲ ಉದ್ದೇಶ ಆತ್ಮದ ಪರಿಶುದ್ಧತೆಯಾಗಿದೆ. ರಂಜಾನ್ ತಿಂಗಳ ಉಪವಾಸ ವ್ರತವು ಮೇಲ್ನೋಟಕ್ಕೆ ಆಹಾರ, ಪಾನೀಯ ಸೇವನೆಯಿಂದ ತಡೆದಿರಿಸಿಕೊಳ್ಳುವುದಾಗಿದೆ. ಆದರೆ, ಆಂತರಿಕವಾಗಿ ಉಪವಾಸವು ವ್ಯಕ್ತಿಗೆ ಆಕಾಂಕ್ಷೆಗಳ ನಿಯಂತ್ರಣ ಮತ್ತು ಧರ್ಮನಿಷ್ಠೆಯ ಜೀವನ ಲಭಿಸುವುದರ ಗುರುತಾಗಿದೆ’ ಎಂದು ತಿಳಿಸಿದರು.</p>.<p>‘ಇಲ್ಲಿ ಪ್ರತಿಯೊಬ್ಬ ಅನುಕೂಲವಂತ ಮುಸ್ಲಿಮನೂ ತನ್ನ ಹಾಗೂ ಕುಟುಂಬದ ಎಲ್ಲ ಸದಸ್ಯರ ಪರವಾಗಿ ದಾನವನ್ನು ಬಡವರಿಗೆ ನೀಡಬೇಕು. ಮನೆಯ ಪ್ರತಿ ಸದಸ್ಯನ ಪರವಾಗಿ ತಲಾ 2 ಕೆ.ಜಿ.ಯಿಂದ 5 ಕೆ.ಜಿ.ಯಷ್ಟು ಅಕ್ಕಿ, ಗೋಧಿ ಮತ್ತು ಬಟ್ಟೆಯನ್ನು ಬಡವರಿಗೆ ಹಂಚಬೇಕು. ಹಬ್ಬದ ವಿಶೇಷ ಪ್ರಾರ್ಥನೆ ಮುಂಚೆಯೇ ಈ ದಾನವನ್ನು ವಿತರಿಸಬೇಕು’ ಎಂದರು.</p>.<p>‘ರಂಜಾನ್ ತಿಂಗಳು ಮುಂಜಾನೆ ಊಟದೊಂದಿಗೆ (ಸೆಹರಿ) ಪ್ರಾರಂಭವಾಗಿ ಮತ್ತು ಸೂರ್ಯಾಸ್ತದ ಸಮಯದಲ್ಲಿ (ಇಫ್ತಾರ್) ಉಪವಾಸವನ್ನು ಮುರಿಯುವುದರೊಂದಿಗೆ ಕೊನೆಗೊಳ್ಳುತ್ತದೆ. ರಂಜಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳನ್ನು ಲೈಲತ್ ಉಲ್-ಕದ್ರ ಎನ್ನುತ್ತಾರೆ. ಇದನ್ನು ಅತ್ಯಂತ ಪವಿತ್ರ ರಾತ್ರಿ ಎಂದು ಪರಿಗಣಿಸಲಾಗಿದೆ. ಈದ್ ಉಲ್-ಫಿತ್ರ್ ಸಂತೋಷದಾಯಕ ಆಚರಣೆಯೊಂದಿಗೆ ರಂಜಾನ್ ತಿಂಗಳು ಮುಕ್ತಾಯವಾಗುತ್ತದೆ’ ಎನ್ನುತ್ತಾರೆ ವಕೀಲ ಎಂ.ಬಿ.ನದಾಫ್.</p>.<p>‘ಹೊಸ ಬಟ್ಟೆಗಳನ್ನು ಧರಿಸುವುದು, ಈದ್ಗಾ ಅಥವಾ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡುವುದು, ಮನೆಯಲ್ಲಿ ವಿಶೇಷ ರೀತಿಯ ಅಡುಗೆಗಳು ಹಾಗೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಹಬ್ಬ ಆಚರಿಸಲಾಗುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>