‘ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ’
ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮೀಕ್ಷೆಗೊಂಡಿದ್ದ ಗದಗ-ವಾಡಿಯನ್ನು ಹೈಜಾಕ್ ಮಾಡಿಕೊಳ್ಳಲಾಗಿದೆ. ಹೋರಾಟಗಾರರ ಹೋರಾಟಕ್ಕೆ ಮಣಿದು ಗದಗ-ಕೃಷ್ಣಾ ಹೊಸ ರೈಲಿನ ಭರವಸೆಯನ್ನು ಜನಪ್ರತಿನಿಧಿಗಳು ನೀಡಿ ವರ್ಷಗಳೇ ಕಳೆದಿವೆ. ಇದೀಗ ಸರ್ವೆ ಕಾರ್ಯಕ್ಕೆ ಕೇವಲ ₹54 ಲಕ್ಷ ಮೀಸಲಿಡುವ ಈ ಭಾಗದ ಜನರ ಮೂಗಿಗೆ ತುಪ್ಪ ಸವರುವ ಕಾರ್ಯವನ್ನು ಮಾಡಲಾಗುತ್ತಿದೆ. ಇದನ್ನು ಬಿಟ್ಟು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎನ್ನುತ್ತಾರೆ ನರೇಗಲ್ ರೈಲ್ವೆ ಹೋರಾಟಗಾರ ಅಶೋಕ ಬೇವಿನಕಟ್ಟಿ.