<p>ಗದಗ: ‘ಶಿಸ್ತು, ಸೇವೆ, ಸಮರ್ಪಣಾ ಮನೋಭಾವ, ಸಕಾರಾತ್ಮಕತೆ, ಪರಿಶ್ರಮ, ತ್ಯಾಗ ಇದ್ದಾಗ ಮಾತ್ರ ಸಂಘಟನೆ ಸದೃಢವಾಗಿ ಬೆಳೆಯಲು ಸಾಧ್ಯ’ ಎಂದು ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಹೇಳಿದರು.</p>.<p>ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿಯ ವಿಂಗಡಣಾ ಕಚೇರಿಯಲ್ಲಿ ಭಾರತೀಯ ಅಂಚೆ ನೌಕರರ ಸಂಘಗಳ ಸಹಯೋಗದಲ್ಲಿ ಈಚೆಗೆ ನಡೆದ ದ್ವೈವಾರ್ಷಿಕ ಜಂಟಿ ವಿಭಾಗೀಯ ಸಮ್ಮೇಳನದಲ್ಲಿ ಮಾತನಾಡಿದರು.</p>.<p>‘ಅಂಚೆ ಇಲಾಖೆ ಪ್ರಗತಿ ಸಾಧಿಸಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ, ಸಹಕಾರ ಅಗತ್ಯ. ಸಿಬ್ಬಂದಿಯ ಯೋಗಕ್ಷೇಮ ಕಾಪಾಡಲು, ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.</p>.<p>ವೃತ್ತ ಕಾರ್ಯದರ್ಶಿ ವೀರೇಶ್ ಮಾತನಾಡಿ, ‘ನೌಕರರ ಮನಸ್ಥಿತಿ ಅರ್ಥ ಮಾಡಿಕೊಂಡರೆ ಸದೃಢ ಸಂಘಟನೆ ಕಟ್ಟಬಹುದು. ಅನ್ಯ ಸಂಘಟನೆಯೊಂದಿಗೆ ದ್ವೇಷ ಬೇಡ. ಸಹೋದ್ಯೋಗಿಗಳ ನಡುವೆ ಅನ್ಯೋನ್ಯತೆ ಇರಬೇಕು’ ಎಂದರು.</p>.<p>ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿ, ‘ಶಿಕ್ಷಣ, ಸಂಘಟನೆ, ಹೋರಾಟ ಅತ್ಯಗತ್ಯ. ಸಮಸ್ಯೆ ಪರಿಹರಿಸಲು ಸಂಘಟನೆಯು ಗಟ್ಟಿ ಧ್ವನಿಯಾಗುತ್ತದೆ. ಸಂಘಟನೆಯ ಹಿತವೇ ಮುಖ್ಯ ಎಂಬುದು ಎಲ್ಲರ ಧ್ಯೇಯ ಆಗಬೇಕು’ ಎಂದು ಸಲಹೆ ನೀಡಿದರು.</p>.<p>ಎಂ.ಐ. ಶೇಖ, ಡಿ.ಜಿ. ಮ್ಯಾಗೇರಿ, ನಾಗರಾಜ ಮಾತನಾಡಿದರು. ಬಸವರಾಜ ಬಳ್ಳೊಳ್ಳಿ, ಆನಂದರಾವ ಹೊದ್ಲೂರ, ನಿಜಲಿಂಗಪ್ಪ ತೋಟದ, ವಿಠೋಬ ಮಾಳೋದಕರ, ಸರೋಜಾ ಪಟ್ಟಣಶೆಟ್ಟಿ, ಶರಣಪ್ಪ ಬೇನಾಳ ಅವರನ್ನು ಸನ್ಮಾನಿಸಲಾಯಿತು.</p>.<p>ಪರಮೇಶ್ವರ ವಾಲಿ, ವಿಠ್ಠಲ್ ಮುತ್ತಲಗೇರಿ, ಎಸ್.ಎಫ್. ಹರಿಜನ, ವೆಂಕಟೇಶ ಆಕಳವಾಡಿ, ವೀರಣ್ಣ ಅಂಗಡಿ, ಎಂ.ಟಿ. ಕರಿಗಾರ, ಮನೋಹರ ಕಡಿಯವರ, ರವಿ ಜಾಧವ, ಮುತ್ತಣ್ಣ ಆನೆಗುಂದಿ ಇದ್ದರು. ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-23-504783580</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ‘ಶಿಸ್ತು, ಸೇವೆ, ಸಮರ್ಪಣಾ ಮನೋಭಾವ, ಸಕಾರಾತ್ಮಕತೆ, ಪರಿಶ್ರಮ, ತ್ಯಾಗ ಇದ್ದಾಗ ಮಾತ್ರ ಸಂಘಟನೆ ಸದೃಢವಾಗಿ ಬೆಳೆಯಲು ಸಾಧ್ಯ’ ಎಂದು ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಹೇಳಿದರು.</p>.<p>ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿಯ ವಿಂಗಡಣಾ ಕಚೇರಿಯಲ್ಲಿ ಭಾರತೀಯ ಅಂಚೆ ನೌಕರರ ಸಂಘಗಳ ಸಹಯೋಗದಲ್ಲಿ ಈಚೆಗೆ ನಡೆದ ದ್ವೈವಾರ್ಷಿಕ ಜಂಟಿ ವಿಭಾಗೀಯ ಸಮ್ಮೇಳನದಲ್ಲಿ ಮಾತನಾಡಿದರು.</p>.<p>‘ಅಂಚೆ ಇಲಾಖೆ ಪ್ರಗತಿ ಸಾಧಿಸಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ, ಸಹಕಾರ ಅಗತ್ಯ. ಸಿಬ್ಬಂದಿಯ ಯೋಗಕ್ಷೇಮ ಕಾಪಾಡಲು, ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.</p>.<p>ವೃತ್ತ ಕಾರ್ಯದರ್ಶಿ ವೀರೇಶ್ ಮಾತನಾಡಿ, ‘ನೌಕರರ ಮನಸ್ಥಿತಿ ಅರ್ಥ ಮಾಡಿಕೊಂಡರೆ ಸದೃಢ ಸಂಘಟನೆ ಕಟ್ಟಬಹುದು. ಅನ್ಯ ಸಂಘಟನೆಯೊಂದಿಗೆ ದ್ವೇಷ ಬೇಡ. ಸಹೋದ್ಯೋಗಿಗಳ ನಡುವೆ ಅನ್ಯೋನ್ಯತೆ ಇರಬೇಕು’ ಎಂದರು.</p>.<p>ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿ, ‘ಶಿಕ್ಷಣ, ಸಂಘಟನೆ, ಹೋರಾಟ ಅತ್ಯಗತ್ಯ. ಸಮಸ್ಯೆ ಪರಿಹರಿಸಲು ಸಂಘಟನೆಯು ಗಟ್ಟಿ ಧ್ವನಿಯಾಗುತ್ತದೆ. ಸಂಘಟನೆಯ ಹಿತವೇ ಮುಖ್ಯ ಎಂಬುದು ಎಲ್ಲರ ಧ್ಯೇಯ ಆಗಬೇಕು’ ಎಂದು ಸಲಹೆ ನೀಡಿದರು.</p>.<p>ಎಂ.ಐ. ಶೇಖ, ಡಿ.ಜಿ. ಮ್ಯಾಗೇರಿ, ನಾಗರಾಜ ಮಾತನಾಡಿದರು. ಬಸವರಾಜ ಬಳ್ಳೊಳ್ಳಿ, ಆನಂದರಾವ ಹೊದ್ಲೂರ, ನಿಜಲಿಂಗಪ್ಪ ತೋಟದ, ವಿಠೋಬ ಮಾಳೋದಕರ, ಸರೋಜಾ ಪಟ್ಟಣಶೆಟ್ಟಿ, ಶರಣಪ್ಪ ಬೇನಾಳ ಅವರನ್ನು ಸನ್ಮಾನಿಸಲಾಯಿತು.</p>.<p>ಪರಮೇಶ್ವರ ವಾಲಿ, ವಿಠ್ಠಲ್ ಮುತ್ತಲಗೇರಿ, ಎಸ್.ಎಫ್. ಹರಿಜನ, ವೆಂಕಟೇಶ ಆಕಳವಾಡಿ, ವೀರಣ್ಣ ಅಂಗಡಿ, ಎಂ.ಟಿ. ಕರಿಗಾರ, ಮನೋಹರ ಕಡಿಯವರ, ರವಿ ಜಾಧವ, ಮುತ್ತಣ್ಣ ಆನೆಗುಂದಿ ಇದ್ದರು. ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-23-504783580</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>