<p><strong>ಗದಗ:</strong> ‘ವೇಗದ ಜಗತ್ತಿನಲ್ಲಿ ಮನುಷ್ಯ ಒತ್ತಡದಲ್ಲಿ ಬದುಕುತ್ತಿದ್ದಾನೆ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು’ ಎಂದು ಹಿರಿಯ ಪತ್ರಕರ್ತ ಮಂಜುನಾಥ ಅಬ್ಬಿಗೇರಿ ಹೇಳಿದರು.</p>.<p>ಅಖಿಲ ಕರ್ನಾಟಕ ಕಬ್ಬಿಗರ ಕೂಟದ ವತಿಯಿಂದ ನಗರದ ವಿಜಯಕುಮಾರ ಶೆಟ್ಟರ ನಿವಾಸದಲ್ಲಿ ಏರ್ಪಡಿಸಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಚಿಂತಕ ಪ್ರೊ. ಕೆ.ಎಚ್.ಬೇಲೂರ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜ್ಞಾನ ನೀಡುವ ಪುಸ್ತಕಗಳನ್ನು ಓದುವುದು ರೂಢಿ ಮಾಡಿಕೊಂಡರೆ ಮನೆಯೇ ಗ್ರಂಥಾಲಯವಾಗುವುದು’ ಎಂದರು.</p>.<p>ಕಬ್ಬಿಗರ ಕೂಟದ ಅಧ್ಯಕ್ಷ ಡಿ.ವಿ.ಬಡಿಗೇರ ಮಾತನಾಡಿ, ‘ಅಖಿಲ ಕರ್ನಾಟಕ ಕಬ್ಬಿಗರ ಕೂಟದಿಂದ ಗದಗ ನಗರದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಸಂತಸ ವಿಷಯ’ ಎಂದು ಹೇಳಿದರು.</p>.<p>ವಿಜಯಕುಮಾರ ರಾಜೇಶ್ವರಿ ಶೆಟ್ಟರ್ ದಂಪತಿ, ವಿಶ್ವಕುಮಾರ ಶೆಟ್ಟರಿಗೆ ಕಬ್ಬಿಗರ ಕೂಟದಿಂದ ಪುಸ್ತಕಗಳನ್ನು ವಿತರಿಸಲಾಯಿತು.</p>.<p>ಹಿರಿಯರಾದ ವಿಜಯಕುಮಾರ ಶೆಟ್ಟರ, ನಗರಸಭೆ ಸದಸ್ಯ ಮುತ್ತು ಮುಶಿಗೇರಿ, ಬಸವರಾಜ ಗಣಪ್ಪನವರ, ಬಸವರಾಜ ವಾರಿ, ನಾರಾಯಣಪುರ, ನಜೀರ ಸಂಶಿ, ವಿರುಪಾಕ್ಷಪ್ಪ ಗೊಜನೂರ, ಅಂದಾನಪ್ಪ ವಿಭೂತಿ, ರಾಮಚಂದ್ರ ಮೋನೆ, ಬಸವರಾಜ ಕೊಟ್ಟೂರ ವೇದಿಕೆಯಲ್ಲಿದ್ದರು.</p>.<p>ವಿನೋದ ರೇಖಾ ನೀಲಕಾರಿ, ಕೆ.ವಿ.ಕುಷ್ಟಗಿ, ಸುವರ್ಣಾ ಕೊಣ್ಣೂರ, ರೇಣುಕಾ ಶೆಟ್ಟರ್, ಉಷಾ, ಸುಮಂಗಲಾ ಶೆಟ್ಟರ್, ಮಂಗಳಾ ಗಾಳಪ್ಪನವರ, ಡಾ. ಶಿಲ್ಪಾ ಕುಷ್ಟಗಿ, ಅನ್ನಪೂರ್ಣ ಯಲಬುರ್ಗಿ, ಶ್ವೇತಾ ಗುಜಮಾಗಡಿ, ಗೋಪಾಲ ಮಳಗಿ ಸೇರಿದಂತೆ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-23-86787953</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ‘ವೇಗದ ಜಗತ್ತಿನಲ್ಲಿ ಮನುಷ್ಯ ಒತ್ತಡದಲ್ಲಿ ಬದುಕುತ್ತಿದ್ದಾನೆ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು’ ಎಂದು ಹಿರಿಯ ಪತ್ರಕರ್ತ ಮಂಜುನಾಥ ಅಬ್ಬಿಗೇರಿ ಹೇಳಿದರು.</p>.<p>ಅಖಿಲ ಕರ್ನಾಟಕ ಕಬ್ಬಿಗರ ಕೂಟದ ವತಿಯಿಂದ ನಗರದ ವಿಜಯಕುಮಾರ ಶೆಟ್ಟರ ನಿವಾಸದಲ್ಲಿ ಏರ್ಪಡಿಸಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಚಿಂತಕ ಪ್ರೊ. ಕೆ.ಎಚ್.ಬೇಲೂರ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜ್ಞಾನ ನೀಡುವ ಪುಸ್ತಕಗಳನ್ನು ಓದುವುದು ರೂಢಿ ಮಾಡಿಕೊಂಡರೆ ಮನೆಯೇ ಗ್ರಂಥಾಲಯವಾಗುವುದು’ ಎಂದರು.</p>.<p>ಕಬ್ಬಿಗರ ಕೂಟದ ಅಧ್ಯಕ್ಷ ಡಿ.ವಿ.ಬಡಿಗೇರ ಮಾತನಾಡಿ, ‘ಅಖಿಲ ಕರ್ನಾಟಕ ಕಬ್ಬಿಗರ ಕೂಟದಿಂದ ಗದಗ ನಗರದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಸಂತಸ ವಿಷಯ’ ಎಂದು ಹೇಳಿದರು.</p>.<p>ವಿಜಯಕುಮಾರ ರಾಜೇಶ್ವರಿ ಶೆಟ್ಟರ್ ದಂಪತಿ, ವಿಶ್ವಕುಮಾರ ಶೆಟ್ಟರಿಗೆ ಕಬ್ಬಿಗರ ಕೂಟದಿಂದ ಪುಸ್ತಕಗಳನ್ನು ವಿತರಿಸಲಾಯಿತು.</p>.<p>ಹಿರಿಯರಾದ ವಿಜಯಕುಮಾರ ಶೆಟ್ಟರ, ನಗರಸಭೆ ಸದಸ್ಯ ಮುತ್ತು ಮುಶಿಗೇರಿ, ಬಸವರಾಜ ಗಣಪ್ಪನವರ, ಬಸವರಾಜ ವಾರಿ, ನಾರಾಯಣಪುರ, ನಜೀರ ಸಂಶಿ, ವಿರುಪಾಕ್ಷಪ್ಪ ಗೊಜನೂರ, ಅಂದಾನಪ್ಪ ವಿಭೂತಿ, ರಾಮಚಂದ್ರ ಮೋನೆ, ಬಸವರಾಜ ಕೊಟ್ಟೂರ ವೇದಿಕೆಯಲ್ಲಿದ್ದರು.</p>.<p>ವಿನೋದ ರೇಖಾ ನೀಲಕಾರಿ, ಕೆ.ವಿ.ಕುಷ್ಟಗಿ, ಸುವರ್ಣಾ ಕೊಣ್ಣೂರ, ರೇಣುಕಾ ಶೆಟ್ಟರ್, ಉಷಾ, ಸುಮಂಗಲಾ ಶೆಟ್ಟರ್, ಮಂಗಳಾ ಗಾಳಪ್ಪನವರ, ಡಾ. ಶಿಲ್ಪಾ ಕುಷ್ಟಗಿ, ಅನ್ನಪೂರ್ಣ ಯಲಬುರ್ಗಿ, ಶ್ವೇತಾ ಗುಜಮಾಗಡಿ, ಗೋಪಾಲ ಮಳಗಿ ಸೇರಿದಂತೆ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-23-86787953</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>