<p>ಗದಗ: ‘ತೋಂಟದಾರ್ಯ ಮಠದ ಜಾತ್ರೆಯನ್ನು ಆರು ದಿನಗಳಿಗೆ ಸೀಮಿತಗೊಳಿಸಿ ಎನ್ನುವುದು ರಾಜು ಖಾನಪ್ಪನವರ ಮೂರ್ಖತನ ತೋರಿಸುತ್ತದೆ’ ಎಂದು ರೈತ ಮುಖಂಡ ಶಿವಲಿಂಗಪ್ಪ ಬೋಪಳಾಪುರ ಟೀಕಿಸಿದರು.</p>.<p>‘ಗದಗ ಮೊದಲಿನಿಂದಲೂ ಶಾಂತಿಗೆ ಹೆಸರಾದ ಜಿಲ್ಲೆ. ಇಲ್ಲಿನ ಜಗದ್ಗುರು ತೋಂಟದಾರ್ಯ ಶ್ರೀಗಳು, ಪಂಡಿತ್ ಪಂಚಾಕ್ಷರಿ ಗವಾಯಿಗಳು, ಶಿವಾನಂದ ಮಠದ ಶ್ರೀಗಳ ಆಶೀರ್ವಾದ, ಮಾರ್ಗದರ್ಶನದಿಂದ ಇಲ್ಲಿ ಶಾಂತಿ ನೆಲೆಸಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಆದರೆ, ರಾಜು ಖಾನಪ್ಪನವರ ಮಾಹಿತಿ ಕೊರತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಹರಿಹಾಯ್ದರು.</p>.<p>‘ಭಾರತೀಯ ಸಂಸ್ಕೃತಿ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಹಸಿದವರಿಗೆ ಅನ್ನ ಕೊಡಿ ಎಂದು ಬೋಧಿಸಿದೆ. ಜಾತ್ರೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ವ್ಯಾಪಾರಿಗಳು ಬಂದು ಭಾಗವಹಿಸಿದರೆ ತಪ್ಪೇನಿದೆ’ ಎಂದು ಪ್ರಶ್ನಿಸಿದರು.</p>.<p>‘ತೋಂಟದಾರ್ಯ ಜಾತ್ರೆಯ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಇದು ಸಾವಿರಾರು ಮಂದಿಗೆ ಬದುಕು ನೀಡುತ್ತಿದೆ. ಜಾತ್ರೆಯನ್ನು ಆರು ದಿನಕ್ಕೆ ಸೀಮಿತಗೊಳಿಸಬೇಕು ಎಂಬುದು ತಪ್ಪು. ಬೇರೆ ರಾಜ್ಯದವರು ಬಂದು ಇಲ್ಲಿ ವ್ಯಾಪಾರ ಮಾಡಿದರೆ ಸಂಕಟ ಪಡಬಾರದು’ ಎಂದರು.</p>.<p>‘ಕೆಟ್ಟ ಸಂಪ್ರದಾಯದ ವಿರುದ್ಧ ಧ್ವನಿ ಎತ್ತಿದರೆ ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಜಾತ್ರೆ ವಿಷಯದಲ್ಲಿ ಕೊಂಕು ಮಾತನಾಡುವುದು ಸರಿಯಲ್ಲ. ರಾಜು ಖಾನಪ್ಪನವರ ತನ್ನ ಮನಸ್ಥಿತಿ ಬದಲಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ರೈತ ಮುಖಂಡ ಸಂಗಣ್ಣ ದಂಡಿನ ಮಾತನಾಡಿ, ‘ಗದಗ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದೆ. ಆದರೆ, ಇತ್ತೀಚೆಗೆ ಕೆಲವರು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಖಂಡಿಸುತ್ತೇವೆ’ ಎಂದು ಹೇಳಿದರು</p>.<p>‘ಈಗ ಜಾತ್ರೆಯನ್ನು ಆರು ದಿನ ಮಾಡಿ ಅಂತ ಹೇಳುತ್ತಾರೆ. ಮುಂದೊಂದು ದಿನ ಜಾತ್ರೆಯೇ ಬೇಡ ಎನ್ನುತ್ತಾರೆ. ಇವರಿಗೆ ಸಂಸ್ಕೃತಿ ಅಂದರೇನು ಎಂಬುದೇ ಗೊತ್ತಿಲ್ಲ. ಇವರು ಹೇಳಿದಂತೆ ಕೇಳಬೇಕೇ’ ಎಂದು ಪ್ರಶ್ನಿಸಿದರು.</p>.<p>‘ಪತ್ರಿಕಾ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ಮೂಡಿಸುವುದು ಅಕ್ಷಮ್ಯ. ಎಲ್ಲರೂ ಕೂಡಿ ಜಾತ್ರೆ ಮಾಡಬೇಕು. ಇಲ್ಲ ಚಳವಳಿ ಮಾಡುತ್ತೇವೆ ಅಂದರೆ ಅದು ನಮಗೂ ಗೊತ್ತಿದೆ. ಅವನು ಬೇಡ ಇವನು ಬೇಡ ಅಂದರೆ ಜಾತ್ರೆ ಆಗುವುದಿಲ್ಲ. ಎಲ್ಲರೂ ಕೂಡಿ ಮಾಡಿದರೆ ಮಾತ್ರ ಅದು ಜಾತ್ರೆ ಎನಿಸಿಕೊಳ್ಳುತ್ತದೆ’ ಎಂದರು.</p>.<p>ರೈತ ಮುಖಂಡರಾದ ಮಲ್ಲಪ್ಪ ಚಳಗೇರಿ, ಬಸವರಾಜ ಶಲವಡಿ, ವಿಜಯಕುಮಾರ ಸುಂಕದ, ಕಾವ್ಯ ಸೋಮನಕಟ್ಟಿ, ವಸಂತ ಮಾರನಬಸರಿ, ವೀರೇಶ ಕಾಗಹಾಳ, ರುದ್ರಯ್ಯ ಸಾಲಿಮಠ, ಯಮನೂರ ಸಾಬ್, ಬಸವರಾಜ, ರಾಮಣ್ಣ ಸೂಡಿ ಸೇರಿದಂತೆ ಹಲವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-23-779979314</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ‘ತೋಂಟದಾರ್ಯ ಮಠದ ಜಾತ್ರೆಯನ್ನು ಆರು ದಿನಗಳಿಗೆ ಸೀಮಿತಗೊಳಿಸಿ ಎನ್ನುವುದು ರಾಜು ಖಾನಪ್ಪನವರ ಮೂರ್ಖತನ ತೋರಿಸುತ್ತದೆ’ ಎಂದು ರೈತ ಮುಖಂಡ ಶಿವಲಿಂಗಪ್ಪ ಬೋಪಳಾಪುರ ಟೀಕಿಸಿದರು.</p>.<p>‘ಗದಗ ಮೊದಲಿನಿಂದಲೂ ಶಾಂತಿಗೆ ಹೆಸರಾದ ಜಿಲ್ಲೆ. ಇಲ್ಲಿನ ಜಗದ್ಗುರು ತೋಂಟದಾರ್ಯ ಶ್ರೀಗಳು, ಪಂಡಿತ್ ಪಂಚಾಕ್ಷರಿ ಗವಾಯಿಗಳು, ಶಿವಾನಂದ ಮಠದ ಶ್ರೀಗಳ ಆಶೀರ್ವಾದ, ಮಾರ್ಗದರ್ಶನದಿಂದ ಇಲ್ಲಿ ಶಾಂತಿ ನೆಲೆಸಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಆದರೆ, ರಾಜು ಖಾನಪ್ಪನವರ ಮಾಹಿತಿ ಕೊರತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಹರಿಹಾಯ್ದರು.</p>.<p>‘ಭಾರತೀಯ ಸಂಸ್ಕೃತಿ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಹಸಿದವರಿಗೆ ಅನ್ನ ಕೊಡಿ ಎಂದು ಬೋಧಿಸಿದೆ. ಜಾತ್ರೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ವ್ಯಾಪಾರಿಗಳು ಬಂದು ಭಾಗವಹಿಸಿದರೆ ತಪ್ಪೇನಿದೆ’ ಎಂದು ಪ್ರಶ್ನಿಸಿದರು.</p>.<p>‘ತೋಂಟದಾರ್ಯ ಜಾತ್ರೆಯ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಇದು ಸಾವಿರಾರು ಮಂದಿಗೆ ಬದುಕು ನೀಡುತ್ತಿದೆ. ಜಾತ್ರೆಯನ್ನು ಆರು ದಿನಕ್ಕೆ ಸೀಮಿತಗೊಳಿಸಬೇಕು ಎಂಬುದು ತಪ್ಪು. ಬೇರೆ ರಾಜ್ಯದವರು ಬಂದು ಇಲ್ಲಿ ವ್ಯಾಪಾರ ಮಾಡಿದರೆ ಸಂಕಟ ಪಡಬಾರದು’ ಎಂದರು.</p>.<p>‘ಕೆಟ್ಟ ಸಂಪ್ರದಾಯದ ವಿರುದ್ಧ ಧ್ವನಿ ಎತ್ತಿದರೆ ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಜಾತ್ರೆ ವಿಷಯದಲ್ಲಿ ಕೊಂಕು ಮಾತನಾಡುವುದು ಸರಿಯಲ್ಲ. ರಾಜು ಖಾನಪ್ಪನವರ ತನ್ನ ಮನಸ್ಥಿತಿ ಬದಲಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ರೈತ ಮುಖಂಡ ಸಂಗಣ್ಣ ದಂಡಿನ ಮಾತನಾಡಿ, ‘ಗದಗ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದೆ. ಆದರೆ, ಇತ್ತೀಚೆಗೆ ಕೆಲವರು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಖಂಡಿಸುತ್ತೇವೆ’ ಎಂದು ಹೇಳಿದರು</p>.<p>‘ಈಗ ಜಾತ್ರೆಯನ್ನು ಆರು ದಿನ ಮಾಡಿ ಅಂತ ಹೇಳುತ್ತಾರೆ. ಮುಂದೊಂದು ದಿನ ಜಾತ್ರೆಯೇ ಬೇಡ ಎನ್ನುತ್ತಾರೆ. ಇವರಿಗೆ ಸಂಸ್ಕೃತಿ ಅಂದರೇನು ಎಂಬುದೇ ಗೊತ್ತಿಲ್ಲ. ಇವರು ಹೇಳಿದಂತೆ ಕೇಳಬೇಕೇ’ ಎಂದು ಪ್ರಶ್ನಿಸಿದರು.</p>.<p>‘ಪತ್ರಿಕಾ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ಮೂಡಿಸುವುದು ಅಕ್ಷಮ್ಯ. ಎಲ್ಲರೂ ಕೂಡಿ ಜಾತ್ರೆ ಮಾಡಬೇಕು. ಇಲ್ಲ ಚಳವಳಿ ಮಾಡುತ್ತೇವೆ ಅಂದರೆ ಅದು ನಮಗೂ ಗೊತ್ತಿದೆ. ಅವನು ಬೇಡ ಇವನು ಬೇಡ ಅಂದರೆ ಜಾತ್ರೆ ಆಗುವುದಿಲ್ಲ. ಎಲ್ಲರೂ ಕೂಡಿ ಮಾಡಿದರೆ ಮಾತ್ರ ಅದು ಜಾತ್ರೆ ಎನಿಸಿಕೊಳ್ಳುತ್ತದೆ’ ಎಂದರು.</p>.<p>ರೈತ ಮುಖಂಡರಾದ ಮಲ್ಲಪ್ಪ ಚಳಗೇರಿ, ಬಸವರಾಜ ಶಲವಡಿ, ವಿಜಯಕುಮಾರ ಸುಂಕದ, ಕಾವ್ಯ ಸೋಮನಕಟ್ಟಿ, ವಸಂತ ಮಾರನಬಸರಿ, ವೀರೇಶ ಕಾಗಹಾಳ, ರುದ್ರಯ್ಯ ಸಾಲಿಮಠ, ಯಮನೂರ ಸಾಬ್, ಬಸವರಾಜ, ರಾಮಣ್ಣ ಸೂಡಿ ಸೇರಿದಂತೆ ಹಲವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-23-779979314</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>