<p><strong>ಗದಗ:</strong> ‘ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕನೇರಿ ಶ್ರೀಗಳು ಸಮಾಜದಲ್ಲಿ ಅಶಾಂತಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಕನೇರಿ ಶ್ರೀಗಳಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈಗಾಗಲೇ ಛೀಮಾರಿ ಹಾಕಿವೆ. ಅವರಾಡುವ ಮಾತುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಅನಾಗರಿಕರಂತೆ ವರ್ತಿಸುತ್ತಿರುವುದು ನೋವಿನ ಸಂಗತಿ’ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.</p>.<p>ಇತ್ತೀಚೆಗೆ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಕನೇರಿ ಕಾಡಸಿದ್ಧೇಶ್ವರಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಕೆಲವೊಂದು ಆರೋಪಗಳನ್ನು ಮಾಡಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದು, ಅವರ ಆರೋಪಕ್ಕೆ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ಒಬ್ಬ ಸ್ವಾಮಿ’ ಎಂಬ ಏಕವಚನದ ಶಬ್ದದಿಂದ ಪ್ರಾರಂಭವಾಗುವ ಅವರ ಮಾತುಗಳಲ್ಲಿ, ‘ನಾವು ಮರಾಠಿ ಭಾಷೆಯ ಕುರ್ಆನ್ನನ್ನು ಕನ್ನಡಕ್ಕೆ ಅನುವಾದಿಸಿ ನಮ್ಮ ಮಠದಿಂದಲೇ ಪ್ರಕಟಿಸಿ ಹಂಚಿರುವುದಾಗಿ ಮತ್ತು ಭಗವದ್ಗೀತೆಯನ್ನು ಬಯ್ದಿರುವುದಾಗಿ ಹೇಳಿರುವುದನ್ನು ಕೇಳಿದೆವು. ವಾಸ್ತವವಾಗಿ ನಾವು ಅನುವಾದಿಸಿರುವುದು ಹಿಂದೂಧರ್ಮದ ಶ್ರೇಷ್ಠ ಸಂತರಾದ ವಿನೋಬಾ ಭಾವೆ ಅವರ ‘ಇಸ್ಲಾಂ ಧರ್ಮ ಸಂದೇಶ’ ಎಂಬ ಹಿಂದಿ ಭಾಷೆಯ ಕೃತಿ. ಅದು ಕುರ್ಆನ್ ಅಲ್ಲ. ಮರಾಠಿ ಭಾಷೆಯ ಕೃತಿಯೂ ಅಲ್ಲ’ ಅದನ್ನು ನಮ್ಮ ಮಠದಿಂದ ನಾವು ಪ್ರಕಟಿಸಿಯೂ ಇಲ್ಲ. ಆದರೂ ಅವರು ಸುಳ್ಳು ಆರೋಪ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.</p>.<p>ಆಶ್ಚರ್ಯದ ಸಂಗತಿ ಎಂದರೆ ಈ ಕೃತಿಯನ್ನು ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಾಡಸಿದ್ಧೇಶ್ವರ ಸ್ವಾಮಿಗಳನ್ನೂ ಆಹ್ವಾನಿಸಲಾಗಿತ್ತು ಎಂಬುದು ವಾಸ್ತವ ಸಂಗತಿ ಎಂದು ತಿಳಿಸಿದ್ದಾರೆ.</p>.<p>‘ಕನೇರಿ ಶ್ರೀಗಳು ಇದೇ ಸಂದರ್ಭದಲ್ಲಿ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿಯೂ ತಿಳಿಸಿದ್ದಾರೆ. ನಾವು ಬಯ್ದಿರುವುದಕ್ಕೆ ಅವರಲ್ಲಿ ಏನಾದರೂ ಆಧಾರಗಳಿದ್ದರೆ ತಿಳಿಸಲಿ. ಈ ರೀತಿ ನಿರರ್ಥಕವಾಗಿ ಆರೋಪ ಮಾಡುವುದರ ಉದ್ದೇಶ ಎಂದರೆ ಒಬ್ಬ ವ್ಯಕ್ತಿಯ ಚಾರಿತ್ರ್ಯಹನನ ಮಾಡುವುದು ಮತ್ತು ಒಂದು ಧರ್ಮದವರನ್ನು ವ್ಯಕ್ತಿಯ ವಿರುದ್ಧ ಎತ್ತಿಕಟ್ಟುವ ಮೂಲಕ ದ್ವೇಷವನ್ನು ಹರಡುವುದೇ ಆಗಿದೆ’ ಎಂದು ತಿಳಿಸಿದ್ದಾರೆ.</p>.<p>‘ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಂಡಿರುವ ನಾವು ಯಾವುದೇ ಧರ್ಮ-ದೇವರು ಮತ್ತು ಭಗವದ್ಗೀತೆಯನ್ನು ಎಂದೂ ನಿಂದಿಸಿರುವುದಿಲ್ಲ. ನಿಂದಿಸಿದ್ದೇವೆ ಎಂಬುದು ಕುತ್ಸಿತ ಬುದ್ಧಿಯ ಸುಳ್ಳು ಆರೋಪ. ಬದಲಾಗಿ ನಾವು ಭಾರತೀಯ ತತ್ತ್ವಶಾಸ್ತ್ರ ಕೃತಿಯಲ್ಲಿ ಚಂದ್ರಧರ ಶರ್ಮಾ ಅವರ ಭಗವದ್ಗೀತೆಯ ಭಾಗವನ್ನು ಸುಂದರವಾಗಿ ಅನುವಾದಿಸಿ ಕೊಟ್ಟಿದ್ದೇವೆ. ಇದೂ ಅಲ್ಲದೆ ಸಿದ್ಧೇಶ್ವರ ಶ್ರೀಗಳು ರಚಿಸಿದ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿಕೊಟ್ಟಿದ್ದೇವೆ. ಇಷ್ಟಾದರೂ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿ ಕನೇರಿ ಶ್ರೀಗಳು ಹೇಳಿರುವುದರ ಉದ್ದೇಶವೇನು’ ಎಂದು ಪ್ರಶ್ನಿಸಿದ್ದಾರೆ.</p>.<p>‘ಪದೇ ಪದೇ ಇಂಥ ಆಧಾರರಹಿತ ಆರೋಪ ಮಾಡುವ ಮತ್ತು ಅನಾಗರಿಕ ಭಾಷೆಯಲ್ಲಿ ಎಲ್ಲ ಸ್ವಾಮಿಗಳನ್ನು ಸಾಮೂಹಿಕವಾಗಿ ನಿಂದಿಸುವ ಮೂಲಕ ಅವರು ಏನು ಸಾಧಿಸಲಿದ್ದಾರೆ ಎಂಬುದು ಅರ್ಥವಾಗದ ಮಾತು. ಅವರು ಮಾಡಿದ ಸುಳ್ಳು ಆರೋಪಗಳನ್ನೇ ಜನರು ನಿಜವೆಂದು ಭಾವಿಸಬಾರದು ಎಂಬ ಕಾರಣಕ್ಕೆ ಮತ್ತು ಮಠದ ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ’ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><blockquote>ಕನೇರಿ ಶ್ರೀಗಳು ಈ ರೀತಿ ಸುಳ್ಳು ಆರೋಪಗಳ ಮೂಲಕ ನಮ್ಮ ಚಾರಿತ್ರ್ಯಹನನಕ್ಕೆ ಪ್ರಯತ್ನಿಸುತ್ತಿರುವುದು ಇದು ಮೂರನೇ ಬಾರಿಯಾಗಿದ್ದು ಜನರು ಇದೆಲ್ಲವನ್ನು ಗಮನಿಸುತ್ತಿದ್ದಾರೆ</blockquote><span class="attribution"> ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ‘ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕನೇರಿ ಶ್ರೀಗಳು ಸಮಾಜದಲ್ಲಿ ಅಶಾಂತಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಕನೇರಿ ಶ್ರೀಗಳಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈಗಾಗಲೇ ಛೀಮಾರಿ ಹಾಕಿವೆ. ಅವರಾಡುವ ಮಾತುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಅನಾಗರಿಕರಂತೆ ವರ್ತಿಸುತ್ತಿರುವುದು ನೋವಿನ ಸಂಗತಿ’ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.</p>.<p>ಇತ್ತೀಚೆಗೆ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಕನೇರಿ ಕಾಡಸಿದ್ಧೇಶ್ವರಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಕೆಲವೊಂದು ಆರೋಪಗಳನ್ನು ಮಾಡಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದು, ಅವರ ಆರೋಪಕ್ಕೆ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ಒಬ್ಬ ಸ್ವಾಮಿ’ ಎಂಬ ಏಕವಚನದ ಶಬ್ದದಿಂದ ಪ್ರಾರಂಭವಾಗುವ ಅವರ ಮಾತುಗಳಲ್ಲಿ, ‘ನಾವು ಮರಾಠಿ ಭಾಷೆಯ ಕುರ್ಆನ್ನನ್ನು ಕನ್ನಡಕ್ಕೆ ಅನುವಾದಿಸಿ ನಮ್ಮ ಮಠದಿಂದಲೇ ಪ್ರಕಟಿಸಿ ಹಂಚಿರುವುದಾಗಿ ಮತ್ತು ಭಗವದ್ಗೀತೆಯನ್ನು ಬಯ್ದಿರುವುದಾಗಿ ಹೇಳಿರುವುದನ್ನು ಕೇಳಿದೆವು. ವಾಸ್ತವವಾಗಿ ನಾವು ಅನುವಾದಿಸಿರುವುದು ಹಿಂದೂಧರ್ಮದ ಶ್ರೇಷ್ಠ ಸಂತರಾದ ವಿನೋಬಾ ಭಾವೆ ಅವರ ‘ಇಸ್ಲಾಂ ಧರ್ಮ ಸಂದೇಶ’ ಎಂಬ ಹಿಂದಿ ಭಾಷೆಯ ಕೃತಿ. ಅದು ಕುರ್ಆನ್ ಅಲ್ಲ. ಮರಾಠಿ ಭಾಷೆಯ ಕೃತಿಯೂ ಅಲ್ಲ’ ಅದನ್ನು ನಮ್ಮ ಮಠದಿಂದ ನಾವು ಪ್ರಕಟಿಸಿಯೂ ಇಲ್ಲ. ಆದರೂ ಅವರು ಸುಳ್ಳು ಆರೋಪ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.</p>.<p>ಆಶ್ಚರ್ಯದ ಸಂಗತಿ ಎಂದರೆ ಈ ಕೃತಿಯನ್ನು ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಾಡಸಿದ್ಧೇಶ್ವರ ಸ್ವಾಮಿಗಳನ್ನೂ ಆಹ್ವಾನಿಸಲಾಗಿತ್ತು ಎಂಬುದು ವಾಸ್ತವ ಸಂಗತಿ ಎಂದು ತಿಳಿಸಿದ್ದಾರೆ.</p>.<p>‘ಕನೇರಿ ಶ್ರೀಗಳು ಇದೇ ಸಂದರ್ಭದಲ್ಲಿ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿಯೂ ತಿಳಿಸಿದ್ದಾರೆ. ನಾವು ಬಯ್ದಿರುವುದಕ್ಕೆ ಅವರಲ್ಲಿ ಏನಾದರೂ ಆಧಾರಗಳಿದ್ದರೆ ತಿಳಿಸಲಿ. ಈ ರೀತಿ ನಿರರ್ಥಕವಾಗಿ ಆರೋಪ ಮಾಡುವುದರ ಉದ್ದೇಶ ಎಂದರೆ ಒಬ್ಬ ವ್ಯಕ್ತಿಯ ಚಾರಿತ್ರ್ಯಹನನ ಮಾಡುವುದು ಮತ್ತು ಒಂದು ಧರ್ಮದವರನ್ನು ವ್ಯಕ್ತಿಯ ವಿರುದ್ಧ ಎತ್ತಿಕಟ್ಟುವ ಮೂಲಕ ದ್ವೇಷವನ್ನು ಹರಡುವುದೇ ಆಗಿದೆ’ ಎಂದು ತಿಳಿಸಿದ್ದಾರೆ.</p>.<p>‘ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಂಡಿರುವ ನಾವು ಯಾವುದೇ ಧರ್ಮ-ದೇವರು ಮತ್ತು ಭಗವದ್ಗೀತೆಯನ್ನು ಎಂದೂ ನಿಂದಿಸಿರುವುದಿಲ್ಲ. ನಿಂದಿಸಿದ್ದೇವೆ ಎಂಬುದು ಕುತ್ಸಿತ ಬುದ್ಧಿಯ ಸುಳ್ಳು ಆರೋಪ. ಬದಲಾಗಿ ನಾವು ಭಾರತೀಯ ತತ್ತ್ವಶಾಸ್ತ್ರ ಕೃತಿಯಲ್ಲಿ ಚಂದ್ರಧರ ಶರ್ಮಾ ಅವರ ಭಗವದ್ಗೀತೆಯ ಭಾಗವನ್ನು ಸುಂದರವಾಗಿ ಅನುವಾದಿಸಿ ಕೊಟ್ಟಿದ್ದೇವೆ. ಇದೂ ಅಲ್ಲದೆ ಸಿದ್ಧೇಶ್ವರ ಶ್ರೀಗಳು ರಚಿಸಿದ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿಕೊಟ್ಟಿದ್ದೇವೆ. ಇಷ್ಟಾದರೂ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿ ಕನೇರಿ ಶ್ರೀಗಳು ಹೇಳಿರುವುದರ ಉದ್ದೇಶವೇನು’ ಎಂದು ಪ್ರಶ್ನಿಸಿದ್ದಾರೆ.</p>.<p>‘ಪದೇ ಪದೇ ಇಂಥ ಆಧಾರರಹಿತ ಆರೋಪ ಮಾಡುವ ಮತ್ತು ಅನಾಗರಿಕ ಭಾಷೆಯಲ್ಲಿ ಎಲ್ಲ ಸ್ವಾಮಿಗಳನ್ನು ಸಾಮೂಹಿಕವಾಗಿ ನಿಂದಿಸುವ ಮೂಲಕ ಅವರು ಏನು ಸಾಧಿಸಲಿದ್ದಾರೆ ಎಂಬುದು ಅರ್ಥವಾಗದ ಮಾತು. ಅವರು ಮಾಡಿದ ಸುಳ್ಳು ಆರೋಪಗಳನ್ನೇ ಜನರು ನಿಜವೆಂದು ಭಾವಿಸಬಾರದು ಎಂಬ ಕಾರಣಕ್ಕೆ ಮತ್ತು ಮಠದ ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ’ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><blockquote>ಕನೇರಿ ಶ್ರೀಗಳು ಈ ರೀತಿ ಸುಳ್ಳು ಆರೋಪಗಳ ಮೂಲಕ ನಮ್ಮ ಚಾರಿತ್ರ್ಯಹನನಕ್ಕೆ ಪ್ರಯತ್ನಿಸುತ್ತಿರುವುದು ಇದು ಮೂರನೇ ಬಾರಿಯಾಗಿದ್ದು ಜನರು ಇದೆಲ್ಲವನ್ನು ಗಮನಿಸುತ್ತಿದ್ದಾರೆ</blockquote><span class="attribution"> ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>