<p>ಗಜೇಂದ್ರಗಡ: ‘ವ್ಯಕ್ತಿಗಿಂತ ಸಮಾಜ ದೊಡ್ಡದು. ನಾವು ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಬಡವರಿಗೆ ನೆರವು ನೀಡುವುದರಿಂದ ದೇವರ ಕೃಪೆಗೆ ಪ್ರಾತ್ರರಾಗುತ್ತೇವೆ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ದೇವಾಂಗ ಸಮಾಜದ ಮುಖಂಡ ಡಾ.ಎಂ.ಎಸ್.ಕಡ್ಡಿ ಹೇಳಿದರು.</p>.<p>ಪಟ್ಟಣದ ಕೆಳಗಲ ಪೇಟೆ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ದಿ.ಶಾಂತಮ್ಮ ಶಂಕ್ರಪ್ಪ ಕಡ್ಡಿ ಅವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಿರುವ ದೇವಾಂಗ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇವರು ನಮಗೆ ನೀಡಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ ದಾನ, ಧರ್ಮ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಹೀಗಾಗಿ ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬೇಕು’ಎಂದರು.</p>.<p>ರಾಘವೇಂದ್ರ ಹೋಳಗಿ ಮಾತನಾಡಿ, ‘ಕಡ್ಡಿ ಕುಟುಂಬದವರು ಹಿಂದಿನಿಂದಲೂ ದೇವಾಂಗ ಸಮಾಜ ಹಾಗೂ ಬನಶಂಕರಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೂ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಇಂದು ತಮ್ಮ ಸ್ವಂತ ಖರ್ಚಿನಲ್ಲಿ ದೇವಾಂಗ ಭವನ ನಿರ್ಮಿಸಿದ್ದು, ಸಮಾಜದ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.</p>.<p>ದೇವಾಂಗ ಭವನದ ಉದ್ಘಾಟನೆ ಅಂಗವಾಗಿ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭವನದಲ್ಲಿ ನವಗ್ರಹ, ವಾಸ್ತುಶಾಂತಿ, ಪಾರ್ವತಿ ಸ್ವಯಂವರ, ಗಣ ಹೋಮ ಹಾಗೂ ಹೋಮದ ಪೂರ್ಣಾಹುತಿ ಪೂಜಾ ಕೈಂಕರ್ಯಗಳು ನಡೆದವು.</p>.<p>ಗಜೇಂದ್ರಗಡದ ವಿವಿಧ ಸಮಾಜಗಳ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ದೇವಾಂಗ ಭವನಕ್ಕೆ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು.</p>.<p>ಇದೇ ಸಂದರ್ಭದಲ್ಲಿ ದಶರಥಗೌಡ ಸಿನ್ನೂರ ಅವರು ತಮ್ಮ ಪತ್ನಿ ದಿ.ಶಾಂತಾಬಾಯಿ ಸಿನ್ನೂರ ಅವರ ಸ್ಮರಣಾರ್ಥವಾಗಿ ದೇವಸ್ಥಾನದಲ್ಲಿ ನಿತ್ಯ ದೀಪಾರಾಧನೆಗೆ ₹3.50 ಲಕ್ಷ ದೇಣಿಗೆ ನೀಡಿದರು.</p>.<p>ಸಮಾಜದ ಅಧ್ಯಕ್ಷ ಸಂಕಣ್ಣ ಎಸ್.ಕಡ್ಡಿ, ಮುಖಂಡರಾದ ಪರಣ್ಣ ಕಡ್ಡಿ, ಶ್ರೀಧರ ಬಿದರಳ್ಳಿ, ಎನ್.ಡಿ.ಸಿನ್ನೂರ, ಶ್ರೀಧರ ಗಂಜಿಗೌಡ್ರ, ಎಸ್.ಜಿ.ಹಾದಿಮನಿ, ಅಶೋಕ ಕೊಳ್ಳಿ, ಪುಂಡಲಿಕ ಕಡ್ಡಿ, ಮಂಜುನಾಥ ಚಳ್ಳಮರದ, ಮಲ್ಲಿಕಾರ್ಜುನ ಇಂಜನಿ, ನಾರಾಯಣ ಪಪ್ತಿ, ಕೃಷ್ಣಾ ಹೋಳಗಿ, ಪ್ರಕಾಶ ಕೋಟಿ ಸೇರಿದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-23-1422455133</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಜೇಂದ್ರಗಡ: ‘ವ್ಯಕ್ತಿಗಿಂತ ಸಮಾಜ ದೊಡ್ಡದು. ನಾವು ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಬಡವರಿಗೆ ನೆರವು ನೀಡುವುದರಿಂದ ದೇವರ ಕೃಪೆಗೆ ಪ್ರಾತ್ರರಾಗುತ್ತೇವೆ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ದೇವಾಂಗ ಸಮಾಜದ ಮುಖಂಡ ಡಾ.ಎಂ.ಎಸ್.ಕಡ್ಡಿ ಹೇಳಿದರು.</p>.<p>ಪಟ್ಟಣದ ಕೆಳಗಲ ಪೇಟೆ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ದಿ.ಶಾಂತಮ್ಮ ಶಂಕ್ರಪ್ಪ ಕಡ್ಡಿ ಅವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಿರುವ ದೇವಾಂಗ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇವರು ನಮಗೆ ನೀಡಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ ದಾನ, ಧರ್ಮ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಹೀಗಾಗಿ ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬೇಕು’ಎಂದರು.</p>.<p>ರಾಘವೇಂದ್ರ ಹೋಳಗಿ ಮಾತನಾಡಿ, ‘ಕಡ್ಡಿ ಕುಟುಂಬದವರು ಹಿಂದಿನಿಂದಲೂ ದೇವಾಂಗ ಸಮಾಜ ಹಾಗೂ ಬನಶಂಕರಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೂ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಇಂದು ತಮ್ಮ ಸ್ವಂತ ಖರ್ಚಿನಲ್ಲಿ ದೇವಾಂಗ ಭವನ ನಿರ್ಮಿಸಿದ್ದು, ಸಮಾಜದ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.</p>.<p>ದೇವಾಂಗ ಭವನದ ಉದ್ಘಾಟನೆ ಅಂಗವಾಗಿ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭವನದಲ್ಲಿ ನವಗ್ರಹ, ವಾಸ್ತುಶಾಂತಿ, ಪಾರ್ವತಿ ಸ್ವಯಂವರ, ಗಣ ಹೋಮ ಹಾಗೂ ಹೋಮದ ಪೂರ್ಣಾಹುತಿ ಪೂಜಾ ಕೈಂಕರ್ಯಗಳು ನಡೆದವು.</p>.<p>ಗಜೇಂದ್ರಗಡದ ವಿವಿಧ ಸಮಾಜಗಳ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ದೇವಾಂಗ ಭವನಕ್ಕೆ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು.</p>.<p>ಇದೇ ಸಂದರ್ಭದಲ್ಲಿ ದಶರಥಗೌಡ ಸಿನ್ನೂರ ಅವರು ತಮ್ಮ ಪತ್ನಿ ದಿ.ಶಾಂತಾಬಾಯಿ ಸಿನ್ನೂರ ಅವರ ಸ್ಮರಣಾರ್ಥವಾಗಿ ದೇವಸ್ಥಾನದಲ್ಲಿ ನಿತ್ಯ ದೀಪಾರಾಧನೆಗೆ ₹3.50 ಲಕ್ಷ ದೇಣಿಗೆ ನೀಡಿದರು.</p>.<p>ಸಮಾಜದ ಅಧ್ಯಕ್ಷ ಸಂಕಣ್ಣ ಎಸ್.ಕಡ್ಡಿ, ಮುಖಂಡರಾದ ಪರಣ್ಣ ಕಡ್ಡಿ, ಶ್ರೀಧರ ಬಿದರಳ್ಳಿ, ಎನ್.ಡಿ.ಸಿನ್ನೂರ, ಶ್ರೀಧರ ಗಂಜಿಗೌಡ್ರ, ಎಸ್.ಜಿ.ಹಾದಿಮನಿ, ಅಶೋಕ ಕೊಳ್ಳಿ, ಪುಂಡಲಿಕ ಕಡ್ಡಿ, ಮಂಜುನಾಥ ಚಳ್ಳಮರದ, ಮಲ್ಲಿಕಾರ್ಜುನ ಇಂಜನಿ, ನಾರಾಯಣ ಪಪ್ತಿ, ಕೃಷ್ಣಾ ಹೋಳಗಿ, ಪ್ರಕಾಶ ಕೋಟಿ ಸೇರಿದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-23-1422455133</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>