<p><strong>ಗಜೇಂದ್ರಗಡ:</strong> ಸಮೀಪದ ಸೂಡಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿಲ್ಲವೆಂದು ಆರೋಪಿಸಿ ದಲಿತ ಬಹುಜನ ಚಳವಳಿ ಸಂಘಟನೆ ವತಿಯಿಂದ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.</p>.<p>‘ನರೇಗಾ ಯೋಜನೆಯಡಿ ಕೆಲಸ ನೀಡದ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಕರೆಯನ್ನೂ ಸ್ವೀಕರಿಸುವುದಿಲ್ಲ. ಕೆಲಸಕ್ಕೆ ಹೋಗದಿದ್ದರೂ ಜಾಬ್ ಕಾರ್ಡ್ ಇರುವವರ ಖಾತೆಗೆ ಕೂಲಿ ಹಣ ಪಾವತಿಸಿದ್ದಾರೆ. ಈ ವರ್ಷವಾದರೂ ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.</p>.<p>ಕಚೇರಿ ಮುಂದೆ ಒಲೆ ಹೂಡಿ, ಅಡುಗೆ ಮಾಡಿ ಊಟ ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಸ್ಥಳಕ್ಕೆ ಆಗಮಿಸಿ ಪ್ರತಿಭನಕಾರರ ಮನವಿ ಆಲಿಸಿ, ಕೆಲಸ ನೀಡುವ ಭರವಸೆ ನೀಡಿದರು.</p>.<p>ರವಿ ಗುಳೇದಗುಡ್ಡ, ರಾಮಣ್ಣ ಕೋಳೂರ, ಸಣ್ಣಪ್ಪ ಗುಳೇದಗುಡ್ಡ, ಬಸವರಾಜ ಶಿರೋಳ, ಹನಮಂತಪ್ಪ ಭಜಂತ್ರಿ, ಶಂಕ್ರಪ್ಪ ಭಜಂತ್ರಿ, ಬಸವರಾಜ ಕಂಬಳಿ, ಶ್ರೀಶೈಲಪ್ಪ ಕುಬಸದ, ಬಸಪ್ಪ ಹಂಡಿ, ಪಂಚಾಕ್ಷರಿ ಭಜಂತ್ರಿ, ಶ್ರೀಕಾಂತ ಮಾರನಬಸರಿ, ಬಸವರಾಜ ಬಾರಕೇರ, ವೀರೇಶ ಭಜಂತ್ರಿ, ವೀರಣ್ಣ ನರಗುಂದ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-23-847420551</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ:</strong> ಸಮೀಪದ ಸೂಡಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿಲ್ಲವೆಂದು ಆರೋಪಿಸಿ ದಲಿತ ಬಹುಜನ ಚಳವಳಿ ಸಂಘಟನೆ ವತಿಯಿಂದ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.</p>.<p>‘ನರೇಗಾ ಯೋಜನೆಯಡಿ ಕೆಲಸ ನೀಡದ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಕರೆಯನ್ನೂ ಸ್ವೀಕರಿಸುವುದಿಲ್ಲ. ಕೆಲಸಕ್ಕೆ ಹೋಗದಿದ್ದರೂ ಜಾಬ್ ಕಾರ್ಡ್ ಇರುವವರ ಖಾತೆಗೆ ಕೂಲಿ ಹಣ ಪಾವತಿಸಿದ್ದಾರೆ. ಈ ವರ್ಷವಾದರೂ ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.</p>.<p>ಕಚೇರಿ ಮುಂದೆ ಒಲೆ ಹೂಡಿ, ಅಡುಗೆ ಮಾಡಿ ಊಟ ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಸ್ಥಳಕ್ಕೆ ಆಗಮಿಸಿ ಪ್ರತಿಭನಕಾರರ ಮನವಿ ಆಲಿಸಿ, ಕೆಲಸ ನೀಡುವ ಭರವಸೆ ನೀಡಿದರು.</p>.<p>ರವಿ ಗುಳೇದಗುಡ್ಡ, ರಾಮಣ್ಣ ಕೋಳೂರ, ಸಣ್ಣಪ್ಪ ಗುಳೇದಗುಡ್ಡ, ಬಸವರಾಜ ಶಿರೋಳ, ಹನಮಂತಪ್ಪ ಭಜಂತ್ರಿ, ಶಂಕ್ರಪ್ಪ ಭಜಂತ್ರಿ, ಬಸವರಾಜ ಕಂಬಳಿ, ಶ್ರೀಶೈಲಪ್ಪ ಕುಬಸದ, ಬಸಪ್ಪ ಹಂಡಿ, ಪಂಚಾಕ್ಷರಿ ಭಜಂತ್ರಿ, ಶ್ರೀಕಾಂತ ಮಾರನಬಸರಿ, ಬಸವರಾಜ ಬಾರಕೇರ, ವೀರೇಶ ಭಜಂತ್ರಿ, ವೀರಣ್ಣ ನರಗುಂದ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-23-847420551</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>