ಗಾಂಧಿ ಜಯಂತಿ ಮತ್ತು ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ, ಬಟ್ಟೆಯ ಚೀಲ ಹೆಗಲಿಗೆ ಹಾಕಿಕೊಂಡು, ಪೌರಕಾರ್ಮಿಕರು ಮತ್ತು ವಿದ್ಯಾರ್ಥಿಗಳ ತಂಡದೊಂದಿಗೆ ನಗರ ಸುತ್ತಿದ ಈ ಅಧಿಕಾರಿಗಳು ಅಂಗಡಿಗಳು ಮತ್ತು ಮನೆಗಳ ಮುಂದೆ ನಿಂತು, ಜನರ ಮನವೊಲಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡರು. ಒಮ್ಮೆ ಬಳಸಿ ಬಿಸಾಕಬಹುದಾದ ಪ್ಲಾಸ್ಟಿಕ್ ಉತ್ಪನ್ನಗಳು ಅ.2ರಿಂದ ನಿಷೇಧಗೊಂಡಿದ್ದು, ಪ್ಲಾಸ್ಟಿಕ್ ಕವರ್ಗಳ ಬದಲು ಬಟ್ಟೆಯ ಚೀಲಗಳನ್ನು ಬಳಸುವಂತೆ ಜಾಗೃತಿ ಮೂಡಿಸಿದರು.