ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆ: ಕೇವಲ ಸರ್ಕಾರದ ಕರ್ತವ್ಯವಲ್ಲ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿಕೆ
Last Updated 6 ಜೂನ್ 2018, 11:58 IST
ಅಕ್ಷರ ಗಾತ್ರ

ಅಜ್ಜಂಪುರ: ಶುದ್ಧ ಪರಿಸರ ನಿರ್ಮಾಣ ನಮ್ಮೆಲರ ಹೊಣೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿದರು. ಪಟ್ಟಣ ಸಮೀಪ ಬುಕ್ಕಾಂಬುಧಿಯ ಉಜ್ಜಯಿನಿ ಜಗದ್ಗುರು ಪ್ರೌಢ ಶಾಲಾ ಆವರಣದಲ್ಲಿ ಮಂಗಳವಾರ ನಡೆದ ‘ವಿಶ್ವ ಪರಿಸರ ದಿನಾಚರಣೆ’ಯಲ್ಲಿ ಪಾಲ್ಗೂಂಡು ಅವರು ಮಾತನಾಡಿದರು.

ಚಿಕ್ಕ ಹಳ್ಳಿ ಅಥವಾ ದೊಡ್ಡ ನಗರ ಎಲ್ಲಿಯೇ ಪರಿಸರ ಕಲುಷಿತಗೊಂಡರೂ ಅದರ ಪರಿಣಾಮ ಎಲ್ಲೆಡೆ ಹಾಗೂ ಎಲ್ಲರಿಗೂ ಬೀರುತ್ತದೆ. ಪರಿಸರ ರಕ್ಷಣೆ ಕೇವಲ ಸರ್ಕಾರ, ಇಲಾಖೆ, ಅಧಿಕಾರಿಯ ಜವಾಬ್ದಾರಿಯಲ್ಲ. ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಪ್ರತಿಯೊಬ್ಬರೂ ನಿರ್ವಹಿಸಬೇಕಾದ ಕರ್ತವ್ಯ ಎಂದರು.

ಸರ್ಕಾರದ ವಿವಿಧ ಯೋಜನೆಗಳು ಹಾಗೂ ಪ್ರಕೃತಿ ವಿಕೋಪದಿಂದಲೂ ಗಿಡ-ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನಗಳಿಂದ ಪರಿಸರ ಮಾಲಿನ್ಯವೂ ಅಧಿಕಗೊಳ್ಳು ತ್ತಿದೆ. ಶುದ್ಧ ಗಾಳಿ ಮತ್ತು ವಾತಾವರ
ಣಕ್ಕಾಗಿ ಗಿಡ ನೆಡುವುದು ಮತ್ತು ಅವುಗಳ ರಕ್ಷಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ನಡೆಯುವಂತೆ ಮನವಿ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್, ‘ಮರಗಳು ಮಳೆಗಾಲದಲ್ಲಿ ಬೇರಿನ ಮೂಲಕ ನೀರನ್ನು ಆಳಕ್ಕೆ ಕೊಂಡೊಯ್ದು ಅಂತ ರ್ಜಲ ಮಟ್ಟವನ್ನೂ ಅಧಿಕಗೊಳಿಸುತ್ತವೆ. ಹೀಗಾಗಿ, ಮರಗಳನ್ನು ಉಳಿಸಿ, ಬೆಳೆಸಿ’ ಎಂದು ಕರೆ ನೀಡಿದರು.

ಪ್ಲಾಸ್ಟಿಕ್ ವಿಷಯುಕ್ತ ವಸ್ತು. ಅದು ಜೈವಿಕವಾಗಿ ವಿಘಟನೆ ಹೊಂದದಿದ್ದರೂ ಹತ್ತಾರು ವರ್ಷ ಮಣ್ಣು ನೀರಿನೊಂದಿಗೆ ವರ್ತಿಸಿ ಪರಿಸರವನ್ನು ಕಲುಶಿತಗೊಳಿಸುತ್ತದೆ. ಹಾಗೆಯೇ ತಿಳಿದೋ, ತಿಳಿಯದೇ ತಿನ್ನುವ ಪ್ರಾಣಿ- ಪಕ್ಷಿ ಸಂಕುಲವೂ ಜೀವ ಕಳೆದುಕೊಂಡಿವೆ. ಅದರ ಬಳಕೆಯಿಂದ ದೂರ ಉಳಿಯುವಂತೆ ಸಲಹೆ ನೀಡಿದರು.

ಹೆಚ್ಚುವರಿ ಎಸ್ಪಿ ಕೃಷ್ಣಕುಮಾರ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಬುಕ್ಕರಾಯ ಯುವಸೇನೆ ಅಧ್ಯಕ್ಷ ಬಿ.ಜಿ.ವಿಕಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಮಹೇಶ್ವರಪ್ಪ, ಮುಖ್ಯಶಿಕ್ಷಕಿ ತನುಜಾ, ಎಸೈ ಅನಂತ ಪದ್ಮನಾಭ್ ಇದ್ದರು.

ಸಮಸ್ಯೆ ಪರಿಹರಿಸಲು ಎಸ್ಪಿಗೆ ಮನವಿ

ಅಜ್ಜಂಪುರ: ಕೆಲವು ಸಮಸ್ಯೆಗಳನ್ನು ಪರಿಹರಿಸಿ, ಅನುಕೂಲ ಮಾಡಿಕೊಡುವಂತೆ ಬುಕ್ಕಾಂಬುಧಿ ಗ್ರಾಮಸ್ಥರು ಎಸ್ಪಿ ಅಣ್ಣಾಮಲೈ ಅವರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ವಿಶ್ವ ಪರಿಸರ ಕಾರ್ಯಕ್ರಮಕ್ಕಾಗಿ ಎಸ್ಪಿ ಗ್ರಾಮಕ್ಕೆ ಬಂದಿದ್ದರು. ಬಂದಿದ್ದ ಅವರಿಗೆ ಗ್ರಾಮಸ್ಥರು ನೀಡಿದ್ದ ಮನವಿಯಲ್ಲಿ, ರೈತಾಪಿ ಸೇರಿದಂತೆ ಇತರೆ ಜನರಿಗೆ ಸಾಲ ನೀಡಿಕೆಯಲ್ಲಿ ಅಸಡ್ಡೆ ತೋರುತ್ತಿರುವ ಬುಕ್ಕಾಂಬುಧಿ ಕಾರ್ಪೊರೇಶನ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಕ್ತ ಸೂಚನೆ ನೀಡುವಂತೆ, ಗ್ರಾಮದ ಕೆರೆ ಮತ್ತು ಶಾಲಾ ಮೈದಾನಗಳಲ್ಲಿ ಆಗಿರುವ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವಂತೆ, ಉತ್ತಮ ರಸ್ತೆಯಿಂದಾಗಿ ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಯಲು ಆಯಕಟ್ಟಿನ ಸ್ಥಳಕ್ಕೆ ರಸ್ತೆಉಬ್ಬು ನಿರ್ಮಿಸಲು ಕ್ರಮವಹಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.

ಜಿಲ್ಲಾ ಕೇಂದ್ರದಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದ ಎಸ್ಪಿ, ‘ಗ್ರಾಮೀಣ ಪ್ರದೇಶದ ಜನರ ಬಡತನದ ಹಿನ್ನೆಲೆಯಲ್ಲಿ ಹೆಲ್ಮೆಟ್ ಇಲ್ಲದವರಿಗೆ ದಂಡ ವಿಧಿಸುವುದನ್ನು ಕಡಿಮೆಗೊಳಿಸಿದ್ದೇವೆ. ಆದರೆ ಇದನ್ನೇ ನಮ್ಮ ಬಲಹೀನತೆ ಎಂದು ತಿಳಿಯಬೇಡಿ. ನಿಮ್ಮ ಜೀವ ರಕ್ಷಣೆಗೆ ಹಾಗೂ ನಿಮ್ಮ ಕುಟುಂಭದ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT