<p>ತಡಸ: ಪ್ರವಾಸಿಗರಿಗೆ ಕೇವಲ ಮನೋರಂಜನೆ ಅಷ್ಟೆ ಅಲ್ಲದೆ ಅವರಿಗೆ ಊಟ ಉಪಹಾರ ನೀಡಿ ಸಂತೃಪ್ತಿಗೊಳಿಸುವ ಕಾರ್ಯವನ್ನು ಅಗಡಿ ತೋಟದ ಜಯದೇವ ಅಗಡಿ ಅವರು ಮಾಡುತ್ತಿದ್ದಾರೆ ಎಂದು ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.</p>.<p>ಕುನ್ನೂರ ಗ್ರಾಮದ ಅಗಡಿ ತೋಟಕ್ಕೆ ಶುಕ್ರವಾರ ಆಗಮಿಸಿದ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.</p>.<p>‘ನಾನು ಮೂರನೇ ಭಾರಿಗೆ ಅಗಡಿ ತೋಟಕ್ಕೆ ಬರುತ್ತಿರುವುದು. ಪ್ರತಿ ಭಾರಿ ಬಂದಾಗಲೂ ಕೂಡ ಜಯದೇವ ಅಗಡಿ ಹಾಗೂ ಇಲ್ಲಿರುವ ಸಿಬ್ಬಂದಿ ನನ್ನನ್ನು ಬಹಳ ಭಕ್ತಿ ಭಾವದಿಂದ ಸ್ವಾಗತಿಸಿ ಆತಿಥ್ಯ ನೀಡುತ್ತಾರೆ’ ಎಂದರು.</p>.<p>‘ಜಯದೇವ ಅಗಡಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ತೋಟ ನಿರ್ಮಿಸಿ ಬಂದಿರುವಂತ ಪ್ರವಾಸಿಗರ ಮನ ತಣಿಸುವ ಕೆಲಸ ಮಾಡುತ್ತಿದ್ದಾರೆ. ಜೀವಂತವಾದ ಪ್ರಾಣಿ ಪಕ್ಷಿಗಳನ್ನು ಸಾಕಿ ಪ್ರವಾಸಿಗರಿಗೆ ಸಂತೋಷಪಡಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ’ ಎಂದು ಹೇಳಿದರು.</p>.<p>‘ಇದರ ಜೊತೆಗೆ ಬಡಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಅವರಿಗೂ ಸಹ ಆಶ್ರಯದಾತರಾಗಿದ್ದಾರೆ. ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಜಯದೇವ ಅಗಡಿ ಅವರಿಗೂ ಅವರ ಕುಟುಂಬಕ್ಕೆ ಭಗವಂತ ಆಯುಷ್ಯ ಅರೋಗ್ಯ ನೀಡಲಿ’ ಎಂದು ಆಶೀರ್ವದಿಸಿದರು.</p>.<p>ಕುನ್ನೂರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಲವನಗೌಡ ಪಾಟೀಲ್, ಬಸಯ್ಯ ಹಿರೇಮಠ, ಬಸನಗೌಡ ಬ್ಯಾಹಟ್ಟಿ, ಈರಣ್ಣ ವಾಲೀಕಾರ, ವಿಠ್ಠಲ್ ದುಂಡಪ್ಪನವರ, ಮೈಲಾರಿ ಅಗಸರ, ಜೀಲಾನಿ ಮತ್ತೇಖಾನ್ ಹಲವಾರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-22-142426420</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಡಸ: ಪ್ರವಾಸಿಗರಿಗೆ ಕೇವಲ ಮನೋರಂಜನೆ ಅಷ್ಟೆ ಅಲ್ಲದೆ ಅವರಿಗೆ ಊಟ ಉಪಹಾರ ನೀಡಿ ಸಂತೃಪ್ತಿಗೊಳಿಸುವ ಕಾರ್ಯವನ್ನು ಅಗಡಿ ತೋಟದ ಜಯದೇವ ಅಗಡಿ ಅವರು ಮಾಡುತ್ತಿದ್ದಾರೆ ಎಂದು ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.</p>.<p>ಕುನ್ನೂರ ಗ್ರಾಮದ ಅಗಡಿ ತೋಟಕ್ಕೆ ಶುಕ್ರವಾರ ಆಗಮಿಸಿದ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.</p>.<p>‘ನಾನು ಮೂರನೇ ಭಾರಿಗೆ ಅಗಡಿ ತೋಟಕ್ಕೆ ಬರುತ್ತಿರುವುದು. ಪ್ರತಿ ಭಾರಿ ಬಂದಾಗಲೂ ಕೂಡ ಜಯದೇವ ಅಗಡಿ ಹಾಗೂ ಇಲ್ಲಿರುವ ಸಿಬ್ಬಂದಿ ನನ್ನನ್ನು ಬಹಳ ಭಕ್ತಿ ಭಾವದಿಂದ ಸ್ವಾಗತಿಸಿ ಆತಿಥ್ಯ ನೀಡುತ್ತಾರೆ’ ಎಂದರು.</p>.<p>‘ಜಯದೇವ ಅಗಡಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ತೋಟ ನಿರ್ಮಿಸಿ ಬಂದಿರುವಂತ ಪ್ರವಾಸಿಗರ ಮನ ತಣಿಸುವ ಕೆಲಸ ಮಾಡುತ್ತಿದ್ದಾರೆ. ಜೀವಂತವಾದ ಪ್ರಾಣಿ ಪಕ್ಷಿಗಳನ್ನು ಸಾಕಿ ಪ್ರವಾಸಿಗರಿಗೆ ಸಂತೋಷಪಡಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ’ ಎಂದು ಹೇಳಿದರು.</p>.<p>‘ಇದರ ಜೊತೆಗೆ ಬಡಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಅವರಿಗೂ ಸಹ ಆಶ್ರಯದಾತರಾಗಿದ್ದಾರೆ. ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಜಯದೇವ ಅಗಡಿ ಅವರಿಗೂ ಅವರ ಕುಟುಂಬಕ್ಕೆ ಭಗವಂತ ಆಯುಷ್ಯ ಅರೋಗ್ಯ ನೀಡಲಿ’ ಎಂದು ಆಶೀರ್ವದಿಸಿದರು.</p>.<p>ಕುನ್ನೂರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಲವನಗೌಡ ಪಾಟೀಲ್, ಬಸಯ್ಯ ಹಿರೇಮಠ, ಬಸನಗೌಡ ಬ್ಯಾಹಟ್ಟಿ, ಈರಣ್ಣ ವಾಲೀಕಾರ, ವಿಠ್ಠಲ್ ದುಂಡಪ್ಪನವರ, ಮೈಲಾರಿ ಅಗಸರ, ಜೀಲಾನಿ ಮತ್ತೇಖಾನ್ ಹಲವಾರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-22-142426420</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>