ಕೊರೊನಾ ಲಾಕ್ಡೌನ್ ಘೋಷಣೆಯಾದ ಬೆನ್ನಲ್ಲೇ, ರಾಜ್ಯದ ಉಳಿದ ಕಡೆ ಇಂದಿರಾ ಕ್ಯಾಂಟೀನ್ಗಳಲ್ಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ, ನಿರ್ಗತಿಕರಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಗದುಗಿನಲ್ಲೂ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳು ಇಲ್ಲಿಂದ ಹಸಿವು ನೀಗಿಸಿಕೊಳ್ಳುತ್ತಿದ್ದರು. ಆದರೆ, ಲಾಕ್ಡೌನ್ ಬೆನ್ನಲ್ಲೇ, ಉಳಿದ ಹೋಟೆಲ್ಗಳು ಬಾಗಿಲು ಹಾಕಿದಾಗ, ಸಾರ್ವಜನಿಕರು ಆಹಾರ ಸೇವಿಸಲು ಗುಂಪು ಗುಂಪಾಗಿ ಇಲ್ಲಿಗೆ ಮುಗಿಬೀಳಲು ಆರಂಭಿಸಿದರು. ಎಷ್ಟೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರೂ, ಸಾರ್ವಜನಿಕ ಅಂತರ ಪಾಲಿಸಲಿಲ್ಲ.ಇದರಿಂದ ಅಧಿಕಾರಿಗಳು ಮಾರ್ಚ್ 28ರಿಂದ ಕ್ಯಾಂಟೀನ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.