ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನುಡಿ ತೇರು ಎಳೆಯಲು ಪೈಪೋಟಿ ನಡೆಸಿರುವ ನಿಕಟಪೂರ್ವ ಅಧ್ಯಕ್ಷ ಡಾ. ಶರಣು ಗೋಗೇರಿ, ಸಾಹಿತಿ, ಶಿಕ್ಷಕ ವಿವೇಕಾನಂದಗೌಡ ಪಾಟೀಲ, ಹಿರಿಯ ಸಾಹಿತಿ ಐ.ಕೆ.ಕಮ್ಮಾರ, ಶಿಕ್ಷಕ ಹಾಗೂ ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಚುನಾವಣಾ ಕಣದಲ್ಲಿ ಇದ್ದಾರೆ. ಮತದಾನ ಆರಂಭಗೊಳ್ಳುವ ಕೊನೆ ಕ್ಷಣದವರೆಗೆ ಬಿರುಸಿನ ಪ್ರಚಾರ ನಡೆಸಿರುವ ಅಭ್ಯರ್ಥಿಗಳು ಮತದಾರರ ಮನವೊಲಿಸಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ.ಜಿಲ್ಲೆಯಲ್ಲಿ ಒಟ್ಟು 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು , 5,999 ಮತದಾರರು ಇದ್ದಾರೆ. ಗದಗ ಹೋಬಳಿಯಲ್ಲಿ 1,000, ಬೆಟಗೇರಿ 901, ಶಿರಹಟ್ಟಿ 298, ಲಕ್ಷ್ಮೇಶ್ವರ 613, ರೋಣ 453, ನರೇಗಲ್ 196, ಹೊಳೆಆಲೂರ 300, ಗಜೇಂದ್ರಗಡ 794 ಹಾಗೂ ನರಗುಂದ 662 ಹಾಗೂ ಮುಂಡರಗಿ ತಾಲ್ಲೂಕಿನಲ್ಲಿ 782 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.