ಶ್ರಾವಣ ಮಾಸದಲ್ಲಿ ಕಪ್ಪತಮಲ್ಲೇಶ್ವರ ಜಾತ್ರೆಗೆ ಬರುವ ಸಾವಿರಾರು ಭಕ್ತರು,ಇರುವೆಯ ಸಾಲಿನಂತೆ ಗುಡ್ಡ ಹತ್ತುವುದನ್ನು ನೋಡುವುದೇ ಕಣ್ಣಿಗೆ ಸೊಗಸು. ಗುಡ್ಡದ ತುತ್ತತುದಿಯಲ್ಲಿರುವ ಗಾಳಿ ಗುಂಡಿ ಬಸಪ್ಪನ ಸನ್ನಿಧಿಗೆ ಹೋಗಿ ಬಂದರೆ, ಬದುಕಿನ ಎಲ್ಲ ಕಷ್ಟಗಳು ಕಳೆಯುತ್ತವೆ ಎನ್ನುವ ಬಲವಾದ ನಂಬಿಕೆ ಈ ಭಾಗದ ಭಕ್ತರಲ್ಲಿದೆ. ಧಾರವಾಡ, ದಾವಣಗೆರೆ, ಕೊಪ್ಪಳ,ಬಳ್ಳಾರಿ, ರಾಯಚೂರ, ಹಾವೇರಿ ಜಿಲ್ಲೆಗಳಿಂದಲೂ ಜಾತ್ರೆಗೆ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.