ಪಟ್ಟಣದ 1ನೇ ವಾರ್ಡಿನಲ್ಲಿರುವ ಸರ್ಕಾರಿ ಉರ್ದುಶಾಲೆ ಆವರಣಕ್ಕೆ ನೀರು ನುಗ್ಗಿದ್ದರಿಂದ ಶಾಲೆಯ ಆವರಣವು ಸಂಪೂರ್ಣ ಕೆರೆಯಂತಾಗಿದೆ. ಅಲ್ಲದೇ, ಈ ಶಾಲೆಯ ಅಡುಗೆ ಕೋಣೆಗೆ ನೀರು ನುಗ್ಗಿದ್ದರಿಂದ ಕೊಠಡಿಯಲ್ಲಿದ್ದ ಅಕ್ಕಿ, ಬೇಳೆ, ಇನ್ನಿತರ ಬಿಸಿಯೂಟದ ಆಹಾರ ಸಾಮಗ್ರಿಗಳು ನೀರಿನಲ್ಲಿ ಸಿಕ್ಕು ನಾಶವಾಯಿತು. ಆವರಣದಲ್ಲಿನ ನೀರು ಹೊರಹಾಕಲು ಶಾಲೆಯ ಶಿಕ್ಷಕರು, ಸಿಬ್ಬಂದಿ ಹರಸಾಹಸ ಪಟ್ಟರು.