<p><strong>ಲಕ್ಷ್ಮೇಶ್ವರ</strong>: ಶೇಂಗಾ, ಎಳ್ಳು, ಸೂರ್ಯಕಾಂತಿ ನಂತರ ಕುಸುಬೆ ಎಣ್ಣೆ ಬೆಳೆಗಳಲ್ಲಿ ಪ್ರಮುಖವಾಗಿದೆ. ಪ್ರತಿವರ್ಷ ನೂರಾರು ಹೆಕ್ಟೇರ್ಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಆದರೆ ಇದೀಗ ಅದರ ಬೆಲೆ ಕುಸಿದಿದ್ದು ಕಷ್ಟಪಟ್ಟು ಬೆಳೆದ ರೈತ ಕಂಗಲಾಗುವ ಸ್ಥಿತಿ ಎದುರಾಗಿದೆ.</p>.<p>ಎಣ್ಣೆ ಬೆಲೆ ಹೆಚ್ಚಳದಿಂದಾಗಿ ಎಣ್ಣೆಕಾಳು ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂಬ ಕಾರಣಕ್ಕಾಗಿ ರೈತರು ಹೆಚ್ಚಿನ ಕ್ಷೇತ್ರದಲ್ಲಿ ಕುಸುಬೆ ಬೆಳೆದಿದ್ದಾರೆ. ಆದರೆ ಬೆಳೆ ಮಾರುಕಟ್ಟೆಗೆ ಬರುತ್ತಲೇ ಬೆಲೆ ಕುಸಿತ ಆಗಿದ್ದು ರೈತರಿಗೆ ಸಂಕಷ್ಟ ತಂದಿದೆ.</p>.<p>ತಾಲ್ಲೂಕಿನ ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ಗೊಜನೂರು, ಶಿಗ್ಲಿ, ಅಡರಕಟ್ಟಿ, ರಾಮಗೇರಿ, ಬಸಾಪುರ, ದೊಡ್ಡೂರು, ಗೋವನಾಳ ಭಾಗದ ಕಪ್ಪು ಮಣ್ಣಿನ 1,150 ಹೆಕ್ಟೇರ್ನಲ್ಲಿ ಕುಸುಬೆ ಬೆಳೆಯಲಾಗಿದೆ. ಎಕರೆಗೆ ಕನಿಷ್ಠ 5 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಕುಸುಬೆ ಎಣ್ಣೆಗೆ ಯಾವಾಗಲೂ ಬೇಡಿಕೆ ಇರುತ್ತದೆ. ಹೀಗಾಗಿ ತಪ್ಪದೇ ಇದನ್ನು ರೈತರು ಬೆಳೆಯುತ್ತಾರೆ. ಫೆಬ್ರುವರಿಯಲ್ಲಿ ಕ್ವಿಂಟಲ್ಗೆ ₹8,000ಕ್ಕಿಂತ ಹೆಚ್ಚು ದರದಲ್ಲಿ ಕುಸುಬೆ ಮಾರಾಟ ಆಗಿತ್ತು. ಆದರೆ ಸದ್ಯ ಕ್ವಿಂಟಲ್ಗೆ ₹ 4,800ರಿಂದ ₹ 5,000ವರೆಗೆ ದರ ಇದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.</p>.<p>ಪ್ರತಿಕೂಲ ವಾತಾವರಣದಿಂದಾಗಿ ಈ ವರ್ಷ ಇಳುವರಿ ಕಡಿಮೆ ಬಂದಿದೆ. ಅದರೊಂದಿಗೆ ಬೆಲೆಯೂ ಕುಸಿದಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಾಗ ರೈತರು ಅನುಭವಿಸುವ ನಷ್ಟ ತಪ್ಪಿಸಲು ಸರ್ಕಾರ ಬೆಂಬಲ ಘೋಷಿಸುತ್ತದೆ. ಅದರಂತೆ ಈ ವರ್ಷ ಕೂಡ ಪ್ರತಿ ಕ್ವಿಂಟಲ್ಗೆ ₹ 6,540 ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಖರೀದಿ ಕೇಂದ್ರ ಮಾತ್ರ ಇನ್ನೂ ಆರಂಭವಾಗಿಲ್ಲ.</p>.<p>ಸಾಲ ಮಾಡಿ ಬೆಳೆ ಬೆಳೆದ ಅನ್ನದಾತ ಹಣದ ಅಡಚಣೆಗಾಗಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವ ಸ್ಥಿತಿ ಇದೆ. ರೈತರ ಹಿತ ಕಾಯುವ ಸಲುವಾಗಿಯೇ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಅವುಗಳಲ್ಲಿ ಬೆಂಬಲ ಖರೀದಿ ಕೇಂದ್ರವೂ ಒಂದು. ಆದರೆ ರೈತರ ಬೆಳೆ ಮಾರಾಟಕ್ಕೆ ಬಂದಾಗ ಕೇಂದ್ರ ಶುರು ಆಗುವುದಿಲ್ಲ. ಇದರಿಂದಾಗಿ ಕೇಂದ್ರದ ಲಾಭದಿಂದ ಅವರು ವಂಚಿತರಾಗಬೇಕಾದ ಪರಿಸ್ಥಿತಿ ಇದೆ.</p>.<p>‘ಒಂದು ಎಕರೆಯಲ್ಲಿ ಕುಸುಬೆ ಬೆಳೆಯಲು ರೈತ ಬರೋಬ್ಬರಿ ₹ 10 ಸಾವಿರ ಖರ್ಚು ಮಾಡಿದ್ದಾನೆ. ಪ್ರತಿಕೂಲ ಹವಾಮಾನದಿಂದಾಗಿ ಈ ಬಾರಿ ಎಕರೆಗೆ 2 ಕ್ವಿಂಟಲ್ನಿಂದ 3 ಕ್ವಿಂಟಲ್ಗಳಷ್ಟು ಇಳುವರಿ ಮಾತ್ರ ಬಂದಿದೆ. ಈಗಿನ ದರದಲ್ಲಿ ಮಾರಾಟ ಮಾಡಿದರೆ ಮಾಡಿದ ಹಣವೂ ರೈತನಿಗೆ ಸಿಗುವುದಿಲ್ಲ. ಕಾರಣ ಬೆಂಬಲ ಬೆಲೆಯಲ್ಲಿ ಕುಸುಬೆಯನ್ನು ಖರೀದಿಸಬೇಕು’ ಎಂದು ತಾಲ್ಲೂಕಿನ ಅಡರಕಟ್ಟಿ ಗ್ರಾಮದ ರೈತ ಮೌನೇಶ ಹವಳದ ಹಾಗೂ ರಾಮಗೇರಿ ಗ್ರಾಮದ ಸೋಮಣ್ಣ ಬೆಟಗೇರಿ ಆಗ್ರಹಿಸಿದರು.</p>.<p><strong>ಖರೀದಿ ಕೇಂದ್ರಕ್ಕಾಗಿ ಪ್ರಸ್ತಾವ</strong></p><p>‘ಕುಸುಬೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ತಿಂಗಳ ಹಿಂದೆ ಜಲ್ಲಾಧಿಕಾರಿಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಇನ್ನು ಕೆಲ ದಿನಗಳಲ್ಲಿ ಆದೇಶ ಬರುವ ನಿರೀಕ್ಷೆ ಇದ್ದು ನಂತರ ಕೇಂದ್ರ ತೆರೆಯಲಾಗುವುದು’ ಎಂದು ಕೆಒಎಫ್ನ ಜಿಲ್ಲಾ ಸಹಾಯಕ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಮೇಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ</strong>: ಶೇಂಗಾ, ಎಳ್ಳು, ಸೂರ್ಯಕಾಂತಿ ನಂತರ ಕುಸುಬೆ ಎಣ್ಣೆ ಬೆಳೆಗಳಲ್ಲಿ ಪ್ರಮುಖವಾಗಿದೆ. ಪ್ರತಿವರ್ಷ ನೂರಾರು ಹೆಕ್ಟೇರ್ಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಆದರೆ ಇದೀಗ ಅದರ ಬೆಲೆ ಕುಸಿದಿದ್ದು ಕಷ್ಟಪಟ್ಟು ಬೆಳೆದ ರೈತ ಕಂಗಲಾಗುವ ಸ್ಥಿತಿ ಎದುರಾಗಿದೆ.</p>.<p>ಎಣ್ಣೆ ಬೆಲೆ ಹೆಚ್ಚಳದಿಂದಾಗಿ ಎಣ್ಣೆಕಾಳು ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂಬ ಕಾರಣಕ್ಕಾಗಿ ರೈತರು ಹೆಚ್ಚಿನ ಕ್ಷೇತ್ರದಲ್ಲಿ ಕುಸುಬೆ ಬೆಳೆದಿದ್ದಾರೆ. ಆದರೆ ಬೆಳೆ ಮಾರುಕಟ್ಟೆಗೆ ಬರುತ್ತಲೇ ಬೆಲೆ ಕುಸಿತ ಆಗಿದ್ದು ರೈತರಿಗೆ ಸಂಕಷ್ಟ ತಂದಿದೆ.</p>.<p>ತಾಲ್ಲೂಕಿನ ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ಗೊಜನೂರು, ಶಿಗ್ಲಿ, ಅಡರಕಟ್ಟಿ, ರಾಮಗೇರಿ, ಬಸಾಪುರ, ದೊಡ್ಡೂರು, ಗೋವನಾಳ ಭಾಗದ ಕಪ್ಪು ಮಣ್ಣಿನ 1,150 ಹೆಕ್ಟೇರ್ನಲ್ಲಿ ಕುಸುಬೆ ಬೆಳೆಯಲಾಗಿದೆ. ಎಕರೆಗೆ ಕನಿಷ್ಠ 5 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಕುಸುಬೆ ಎಣ್ಣೆಗೆ ಯಾವಾಗಲೂ ಬೇಡಿಕೆ ಇರುತ್ತದೆ. ಹೀಗಾಗಿ ತಪ್ಪದೇ ಇದನ್ನು ರೈತರು ಬೆಳೆಯುತ್ತಾರೆ. ಫೆಬ್ರುವರಿಯಲ್ಲಿ ಕ್ವಿಂಟಲ್ಗೆ ₹8,000ಕ್ಕಿಂತ ಹೆಚ್ಚು ದರದಲ್ಲಿ ಕುಸುಬೆ ಮಾರಾಟ ಆಗಿತ್ತು. ಆದರೆ ಸದ್ಯ ಕ್ವಿಂಟಲ್ಗೆ ₹ 4,800ರಿಂದ ₹ 5,000ವರೆಗೆ ದರ ಇದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.</p>.<p>ಪ್ರತಿಕೂಲ ವಾತಾವರಣದಿಂದಾಗಿ ಈ ವರ್ಷ ಇಳುವರಿ ಕಡಿಮೆ ಬಂದಿದೆ. ಅದರೊಂದಿಗೆ ಬೆಲೆಯೂ ಕುಸಿದಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಾಗ ರೈತರು ಅನುಭವಿಸುವ ನಷ್ಟ ತಪ್ಪಿಸಲು ಸರ್ಕಾರ ಬೆಂಬಲ ಘೋಷಿಸುತ್ತದೆ. ಅದರಂತೆ ಈ ವರ್ಷ ಕೂಡ ಪ್ರತಿ ಕ್ವಿಂಟಲ್ಗೆ ₹ 6,540 ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಖರೀದಿ ಕೇಂದ್ರ ಮಾತ್ರ ಇನ್ನೂ ಆರಂಭವಾಗಿಲ್ಲ.</p>.<p>ಸಾಲ ಮಾಡಿ ಬೆಳೆ ಬೆಳೆದ ಅನ್ನದಾತ ಹಣದ ಅಡಚಣೆಗಾಗಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವ ಸ್ಥಿತಿ ಇದೆ. ರೈತರ ಹಿತ ಕಾಯುವ ಸಲುವಾಗಿಯೇ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಅವುಗಳಲ್ಲಿ ಬೆಂಬಲ ಖರೀದಿ ಕೇಂದ್ರವೂ ಒಂದು. ಆದರೆ ರೈತರ ಬೆಳೆ ಮಾರಾಟಕ್ಕೆ ಬಂದಾಗ ಕೇಂದ್ರ ಶುರು ಆಗುವುದಿಲ್ಲ. ಇದರಿಂದಾಗಿ ಕೇಂದ್ರದ ಲಾಭದಿಂದ ಅವರು ವಂಚಿತರಾಗಬೇಕಾದ ಪರಿಸ್ಥಿತಿ ಇದೆ.</p>.<p>‘ಒಂದು ಎಕರೆಯಲ್ಲಿ ಕುಸುಬೆ ಬೆಳೆಯಲು ರೈತ ಬರೋಬ್ಬರಿ ₹ 10 ಸಾವಿರ ಖರ್ಚು ಮಾಡಿದ್ದಾನೆ. ಪ್ರತಿಕೂಲ ಹವಾಮಾನದಿಂದಾಗಿ ಈ ಬಾರಿ ಎಕರೆಗೆ 2 ಕ್ವಿಂಟಲ್ನಿಂದ 3 ಕ್ವಿಂಟಲ್ಗಳಷ್ಟು ಇಳುವರಿ ಮಾತ್ರ ಬಂದಿದೆ. ಈಗಿನ ದರದಲ್ಲಿ ಮಾರಾಟ ಮಾಡಿದರೆ ಮಾಡಿದ ಹಣವೂ ರೈತನಿಗೆ ಸಿಗುವುದಿಲ್ಲ. ಕಾರಣ ಬೆಂಬಲ ಬೆಲೆಯಲ್ಲಿ ಕುಸುಬೆಯನ್ನು ಖರೀದಿಸಬೇಕು’ ಎಂದು ತಾಲ್ಲೂಕಿನ ಅಡರಕಟ್ಟಿ ಗ್ರಾಮದ ರೈತ ಮೌನೇಶ ಹವಳದ ಹಾಗೂ ರಾಮಗೇರಿ ಗ್ರಾಮದ ಸೋಮಣ್ಣ ಬೆಟಗೇರಿ ಆಗ್ರಹಿಸಿದರು.</p>.<p><strong>ಖರೀದಿ ಕೇಂದ್ರಕ್ಕಾಗಿ ಪ್ರಸ್ತಾವ</strong></p><p>‘ಕುಸುಬೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ತಿಂಗಳ ಹಿಂದೆ ಜಲ್ಲಾಧಿಕಾರಿಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಇನ್ನು ಕೆಲ ದಿನಗಳಲ್ಲಿ ಆದೇಶ ಬರುವ ನಿರೀಕ್ಷೆ ಇದ್ದು ನಂತರ ಕೇಂದ್ರ ತೆರೆಯಲಾಗುವುದು’ ಎಂದು ಕೆಒಎಫ್ನ ಜಿಲ್ಲಾ ಸಹಾಯಕ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಮೇಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>