<p>ಗದಗ: ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಟ್ಟಿಹಳ್ಳದಲ್ಲಿ ಸೋಮವಾರ ಚಾಲುಕ್ಯರ ರಾಜ ಎರಡನೇ ಜಗದೇಕಮಲ್ಲನ ಆಳ್ವಿಕೆ ಅವಧಿಯ 13 ಸಾಲುಗಳುಳ್ಳ ಶಾಸನ ಪತ್ತೆಯಾಗಿದೆ.</p>.<p>ಪ್ರಾಚ್ಯ ಅವಶೇಷಗಳ ಅನ್ವೇಷಣೆ ವೇಳೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಬಟ್ಟೂರು ಮತ್ತು ಕವಲೂರ ಅವರಿಗೆ ಸೇರಿದ ಜಮೀನಿನ ಹತ್ತಿರದ ಕಟ್ಟಿಹಳ್ಳದ ಪಕ್ಕದಲ್ಲಿ ಈ ಶಾಸನ ಪತ್ತೆಯಾಗಿದೆ.</p>.<p>‘ಶಾಸನದ ಆರಂಭದಲ್ಲಿ ಶಿವಸ್ತುತಿ ಇದೆ. ಇದು ಶಿವಾಲಯಕ್ಕೆ ಭೂದಾನ ಕೊಟ್ಟ ಶಾಸನವಾಗಿರಬಹುದು. ಶಾಸನದ ಸ್ಪಷ್ಟವಾದ ಕಾಲ ಲಭ್ಯವಿಲ್ಲ. ಜಗದೇಕಮಲ್ಲನ ಆಳ್ವಿಕೆಯ ಕಾಲ ಕ್ರಿಶ 1139-1149. ಜಗದೇಕ ಮಲ್ಲನ 10 ವರ್ಷದ ಆಡಳಿತದ ಅವಧಿಯಲ್ಲಿ ಈ ಶಾಸನ ರಚನೆ ಆಗಿರಬಹುದು. ಲಿಪಿದೃಷ್ಟಿಯಿಂದ ಶಾಸನದ ಕಾಲವನ್ನು 12ನೇ ಶತಮಾನದ ರಚನೆ ಎಂದೂ ಹೇಳಬಹುದು’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-51-1996039146</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಟ್ಟಿಹಳ್ಳದಲ್ಲಿ ಸೋಮವಾರ ಚಾಲುಕ್ಯರ ರಾಜ ಎರಡನೇ ಜಗದೇಕಮಲ್ಲನ ಆಳ್ವಿಕೆ ಅವಧಿಯ 13 ಸಾಲುಗಳುಳ್ಳ ಶಾಸನ ಪತ್ತೆಯಾಗಿದೆ.</p>.<p>ಪ್ರಾಚ್ಯ ಅವಶೇಷಗಳ ಅನ್ವೇಷಣೆ ವೇಳೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಬಟ್ಟೂರು ಮತ್ತು ಕವಲೂರ ಅವರಿಗೆ ಸೇರಿದ ಜಮೀನಿನ ಹತ್ತಿರದ ಕಟ್ಟಿಹಳ್ಳದ ಪಕ್ಕದಲ್ಲಿ ಈ ಶಾಸನ ಪತ್ತೆಯಾಗಿದೆ.</p>.<p>‘ಶಾಸನದ ಆರಂಭದಲ್ಲಿ ಶಿವಸ್ತುತಿ ಇದೆ. ಇದು ಶಿವಾಲಯಕ್ಕೆ ಭೂದಾನ ಕೊಟ್ಟ ಶಾಸನವಾಗಿರಬಹುದು. ಶಾಸನದ ಸ್ಪಷ್ಟವಾದ ಕಾಲ ಲಭ್ಯವಿಲ್ಲ. ಜಗದೇಕಮಲ್ಲನ ಆಳ್ವಿಕೆಯ ಕಾಲ ಕ್ರಿಶ 1139-1149. ಜಗದೇಕ ಮಲ್ಲನ 10 ವರ್ಷದ ಆಡಳಿತದ ಅವಧಿಯಲ್ಲಿ ಈ ಶಾಸನ ರಚನೆ ಆಗಿರಬಹುದು. ಲಿಪಿದೃಷ್ಟಿಯಿಂದ ಶಾಸನದ ಕಾಲವನ್ನು 12ನೇ ಶತಮಾನದ ರಚನೆ ಎಂದೂ ಹೇಳಬಹುದು’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-51-1996039146</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>