<p>ಲಕ್ಷ್ಮೇಶ್ವರ: ‘ಇಂದು ಜಗತ್ತಿನ ಎಲ್ಲೆಡೆ ಕಾಡುತ್ತಿರುವ ಯುದ್ಧ, ಘರ್ಷಣೆ, ರಕ್ತಪಾತಗಳಿಗೆ ಭಗವಾನ್ ಮಹಾವೀರರ ತತ್ವ ಹಾಗೂ ಸಿದ್ದಾಂತಗಳೇ ಪರಿಹಾರ. ಸತ್ಯ, ಶಾಂತಿ, ಅಹಿಂಸೆ ಪರಮಧರ್ಮ ಆಗಬೇಕಾಗಿದೆ’ ಎಂದು ಸಾಹಿತಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಜಿನದತ್ತ ಹಡಗಲಿ ಹೇಳಿದರು.</p>.<p>ಲಕ್ಷ್ಮೇಶ್ವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಿಕ್ಷಕ ಎಲ್.ಆರ್.ಮಲ್ಲಸಮುದ್ರ ಅವರ ನಿವಾಸದಲ್ಲಿ ಸೋಮವಾರ ನಡೆದ ಮಾಸದ ಮಾತು ಕಾರ್ಯಕ್ರಮ ಸರಣಿಯ 31ನೇ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರ ಜಯಂತಿ ಕುರಿತು ಉಪನ್ಯಾಸ ನೀಡಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಕ ಎಲ್.ಆರ್.ಮಲ್ಲಸಮುದ್ರ ಮಾತನಾಡಿ, ‘ಭಗವಾನ್ ಮಹಾವೀರರ ವಿಚಾರಗಳನ್ನು ಅರಿತು ಆಚರಿಸಬೇಕಾಗಿದೆ’ ಎಂದರು.</p>.<p>ವಿಕಲಚೇತನ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎಂ.ಕುಂಬಾರ ಮಾತನಾಡಿದರು.</p>.<p>ಹಿರಿಯ ವಕೀಲ ಎ.ಬಿ. ಪಾಟೀಲ, ‘ಸದಾ ಅಹಿಂಸೆಯನ್ನೇ ಪ್ರತಿಪಾದಿಸುವ ಜೈನ ಧರ್ಮೀಯರು ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿದಾಗಲೂ ಹತ್ಯೆ ಮಾಡಿದವರನ್ನು ಕ್ಷಮಿಸಿದ್ದು ಜಗತ್ತಿಗೆ ಮಾದರಿ’ ಎಂದರು.</p>.<p>ಚಿಂತಕ ಅನಂತರಾಜ ಮಿಣಜಗಿ ‘ವರ್ಧಮಾನ ಮಹಾವೀರರ ತತ್ವಗಳು, ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು’ ಎಂದು ಹೇಳಿದರು.</p>.<p>ದಿಗಂಬರ ಜೈನ ಸಮಾಜದ ಅಧ್ಯಕ್ಷ ಸುರೇಂದ್ರಗೌಡ ಪಾಟೀಲ, ನಿವೃತ್ತ ಶಿಕ್ಷಕ ಎನ್.ಒ.ಹಡಗಲಿ, ಎ.ಎಂ.ಮಠದ, ಶ್ರಾವಕಿಯರಾದ ಸಾವಿತ್ರಮ್ಮ ಲಕ್ಷ್ಮಣ ಮಲ್ಲಸಮುದ್ರ, ಶಾಂತಾ ಮಹಾವೀರಗೌಡ್ರು ಪಾಟೀಲ, ಸೌಮ್ಯ ಪಂಡಿತ, ವನಮಾಲಾ ಪಾಟೀಲ, ಭಗವಾನ್ ಮಹಾವೀರರ ಗಾನಾಂಜಲಿ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಸಪ್ತಮಿ ಮಂಜುನಾಥ ಗೊರವರ ಸಿತಾರ್ ವಾದನ ನುಡಿಸಿದರು. ಲಕ್ಷ್ಮೇಶ್ವರ ತಾಲ್ಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಈರಣ್ಣ ಗಾಣಿಗೇರ, ಎಸ್.ಬಿ. ಅಣ್ಣಿಗೇರಿ, ಈರಣ್ಣ ಅಕ್ಕೂರ, ನಾಗರಾಜ ಮಜ್ಜಿಗುಡ್ಡ, ಐ.ಎ. ಬಳಿಗಾರ ಸೇರಿದಂತೆ ಅನೇಕರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-23-80650116</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಕ್ಷ್ಮೇಶ್ವರ: ‘ಇಂದು ಜಗತ್ತಿನ ಎಲ್ಲೆಡೆ ಕಾಡುತ್ತಿರುವ ಯುದ್ಧ, ಘರ್ಷಣೆ, ರಕ್ತಪಾತಗಳಿಗೆ ಭಗವಾನ್ ಮಹಾವೀರರ ತತ್ವ ಹಾಗೂ ಸಿದ್ದಾಂತಗಳೇ ಪರಿಹಾರ. ಸತ್ಯ, ಶಾಂತಿ, ಅಹಿಂಸೆ ಪರಮಧರ್ಮ ಆಗಬೇಕಾಗಿದೆ’ ಎಂದು ಸಾಹಿತಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಜಿನದತ್ತ ಹಡಗಲಿ ಹೇಳಿದರು.</p>.<p>ಲಕ್ಷ್ಮೇಶ್ವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಿಕ್ಷಕ ಎಲ್.ಆರ್.ಮಲ್ಲಸಮುದ್ರ ಅವರ ನಿವಾಸದಲ್ಲಿ ಸೋಮವಾರ ನಡೆದ ಮಾಸದ ಮಾತು ಕಾರ್ಯಕ್ರಮ ಸರಣಿಯ 31ನೇ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರ ಜಯಂತಿ ಕುರಿತು ಉಪನ್ಯಾಸ ನೀಡಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಕ ಎಲ್.ಆರ್.ಮಲ್ಲಸಮುದ್ರ ಮಾತನಾಡಿ, ‘ಭಗವಾನ್ ಮಹಾವೀರರ ವಿಚಾರಗಳನ್ನು ಅರಿತು ಆಚರಿಸಬೇಕಾಗಿದೆ’ ಎಂದರು.</p>.<p>ವಿಕಲಚೇತನ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎಂ.ಕುಂಬಾರ ಮಾತನಾಡಿದರು.</p>.<p>ಹಿರಿಯ ವಕೀಲ ಎ.ಬಿ. ಪಾಟೀಲ, ‘ಸದಾ ಅಹಿಂಸೆಯನ್ನೇ ಪ್ರತಿಪಾದಿಸುವ ಜೈನ ಧರ್ಮೀಯರು ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿದಾಗಲೂ ಹತ್ಯೆ ಮಾಡಿದವರನ್ನು ಕ್ಷಮಿಸಿದ್ದು ಜಗತ್ತಿಗೆ ಮಾದರಿ’ ಎಂದರು.</p>.<p>ಚಿಂತಕ ಅನಂತರಾಜ ಮಿಣಜಗಿ ‘ವರ್ಧಮಾನ ಮಹಾವೀರರ ತತ್ವಗಳು, ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು’ ಎಂದು ಹೇಳಿದರು.</p>.<p>ದಿಗಂಬರ ಜೈನ ಸಮಾಜದ ಅಧ್ಯಕ್ಷ ಸುರೇಂದ್ರಗೌಡ ಪಾಟೀಲ, ನಿವೃತ್ತ ಶಿಕ್ಷಕ ಎನ್.ಒ.ಹಡಗಲಿ, ಎ.ಎಂ.ಮಠದ, ಶ್ರಾವಕಿಯರಾದ ಸಾವಿತ್ರಮ್ಮ ಲಕ್ಷ್ಮಣ ಮಲ್ಲಸಮುದ್ರ, ಶಾಂತಾ ಮಹಾವೀರಗೌಡ್ರು ಪಾಟೀಲ, ಸೌಮ್ಯ ಪಂಡಿತ, ವನಮಾಲಾ ಪಾಟೀಲ, ಭಗವಾನ್ ಮಹಾವೀರರ ಗಾನಾಂಜಲಿ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಸಪ್ತಮಿ ಮಂಜುನಾಥ ಗೊರವರ ಸಿತಾರ್ ವಾದನ ನುಡಿಸಿದರು. ಲಕ್ಷ್ಮೇಶ್ವರ ತಾಲ್ಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಈರಣ್ಣ ಗಾಣಿಗೇರ, ಎಸ್.ಬಿ. ಅಣ್ಣಿಗೇರಿ, ಈರಣ್ಣ ಅಕ್ಕೂರ, ನಾಗರಾಜ ಮಜ್ಜಿಗುಡ್ಡ, ಐ.ಎ. ಬಳಿಗಾರ ಸೇರಿದಂತೆ ಅನೇಕರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-23-80650116</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>