‘ಹುಡುಗಿ ಮನೆಬಿಟ್ಟು ಹೋದ ಸಂದರ್ಭದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಮೇಘಾ ಮತ್ತು ಕೀರ್ತಿನಾಥ ಇಬ್ಬರೂ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಮನೆಯವರಿಂದ ಪ್ರಾಣಭಯ ಇದೆ ಎಂದು ಮೇಘಾ ಹೇಳಿದ್ದರು. ಅವರ ತಂದೆ ತಾಯಿಯನ್ನು ಕರೆಯಿಸಿ ಮಾತನಾಡಲಾಗಿ, ತಾವು ಬೆದರಿಕೆ ಹಾಕಿಲ್ಲ ಎಂದು ತಿಳಿಸಿದ್ದಾರೆ’ ಎಂದು ಎಸ್ಪಿ ಯತೀಶ್ ಎನ್. ಹೇಳಿದರು.