ನರಗುಂದ: ಪಟ್ಟಣದಲ್ಲಿ ಗುರುವಾರ ನಡೆದ 42ನೇ ಹುತಾತ್ಮ ರೈತ ದಿನಾಚರಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರಾಜ್ಯ ಹಾಗೂ ಸ್ಥಳೀಯ ಸಂಘಟನೆಗಳ ಮುಖಂಡರು ರೈತ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ತಾ ಮುಂದು, ನಾ ಮುಂದು ಎಂದು ಮಾಲಾರ್ಪಣೆ ಮಾಡಿದರೇ ಹೊರತು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಮಾತು ಕೇಳಿಬರಲೇ ಇಲ್ಲ. ಇದನ್ನು ದೂರದಿಂದಲೇ ವೀಕ್ಷಿಸಿದ ಪ್ರಾಮಾಣಿಕ ರೈತರು ಬೇಸರ ವ್ಯಕ್ತಪಡಿಸಿದರು.