ಚಿಂಚಲಿ– ಮುಳಗುಂದ ಮುಖ್ಯರಸ್ತೆಯಿಂದ ನೀಲಗುಂದ ಗ್ರಾಮದವರೆಗೆ ಸುಮಾರು 5 ಕಿ.ಮೀ ರಸ್ತೆ ಹಾಳಾಗಿದೆ. ರಸ್ತೆ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮಾಡಿದರೂ ಸ್ಪಂದಿಸಿಲ್ಲ
– ವಿನಯ್ ಬಂಗಾರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ನೀಲಗುಂದ
ರಸ್ತೆಗಳು ನಿರ್ಮಿಸಿದ ಕೆಲವೇ ವರ್ಷಗಳಲ್ಲಿ ಹಾಳಾಗಿರುವುದು ಕಾಮಗಾರಿ ಗುಣಮಟ್ಟ, ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸಬೇಕು
– ಗುಡುಸಾಬ ಗಾಡಿ, ರೈತ ಸಂಘದ ಸದಸ್ಯ, ಮುಳಗುಂದ
ಶಿರಂದ ರಸ್ತೆಗೆ ಅಡ್ಡವಾಗಿ ಹರಿದಿರುವ ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ ಮಳೆಯಾದರೆ ಹಳ್ಳ ಕಟ್ಟುತ್ತಿದೆ. ಇದರಿಂದ ಈ ಭಾಗದ ರೈತರು ಹಳ್ಳ ದಾಟಲು ರಾತ್ರಿಯಿಡಿ ಕಾಯುವ ಸ್ಥಿತಿ ಇದೆ. ರಸ್ತೆ ಅಭಿವೃದ್ದಿ ಜೊತೆಗೆ ಸೇತುವೆ ನಿಮಾರ್ಣ ಕೈಗೊಳ್ಳಬೇಕು
– ಅಕ್ಷಯ ಬಟ್ಟೂರ್, ರೈತ, ಮುಳಗುಂದ
ಗ್ರಾಮೀಣ ಭಾಗದಲ್ಲಿ ಹಾಳಾದ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲು ಕ್ರಿಯಾಯೋಜನೆ ಮಾಡಿದ್ದು, ಅನುಮೋದನೆ ಹಂತದಲ್ಲಿವೆ. ಆದಷ್ಟು ಬೇಘ ಕಾಮಗಾರಿ ಕೈಗೊಳ್ಳಲಾಗುವುದು
– ಗೋಪಾಲ ನಾಯಕ್, ಇಂಜಿನಿಯರ್, ಗದಗ ತಾಲ್ಲೂಕು ಪಂಚಾಯತ್ರಾಜ್ ಇಲಾಖೆ