<p>[Photo: ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಬದಿ ಭತ್ತದ ಒಕ್ಕಲಿನಲ್ಲಿ ನಿರತರಾಗಿರುವ ರೈತರು]</p><p>--------------------------------</p><p>ಮುಂಡರಗಿ: ತಾಲ್ಲೂಕಿನಾದ್ಯಂತ ಬೇಸಿಗೆ ಹಂಗಾಮಿನ ಭತ್ತದ ಕೊಯ್ಲು ಹಾಗೂ ಒಕ್ಕಲು ಭರದಿಂದ ಸಾಗಿದ್ದು, ಇಳುವರಿ ಕುಸಿತ ಹಾಗೂ ನಿರೀಕ್ಷಿತ ಬೆಲೆ ದೊರೆಯದೆ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.</p><p>ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಶಿಂಗಟಾಲೂರ, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ, ಮುಂಡವಾಡ ಸೇರಿದಂತೆ ಮೊದಲಾದ ಗ್ರಾಮಗಳ ರೈತರು ಸುಮಾರು 1,200 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಗಳ ಭತ್ತ ಬೆಳೆದಿದ್ದಾರೆ.</p><p>ಸಾಮಾನ್ಯವಾಗಿ ಬೇಸಿಗೆಯಲ್ಲಿ ತುಂಗಭದ್ರಾ ನದಿ ಬತ್ತಿ ಹೋಗುತ್ತದೆ. ಜೊತೆಗೆ ಈ ವರ್ಷ ಹೊಸಪೇಟೆ ಬಳಿಯ ಟಿಬಿ ಡ್ಯಾಂಗೆ ನೂತನ ಕ್ರೆಸ್ಟ್ ಗೇಟುಗಳ ಅಳವಡಿಕೆ ಕಾರ್ಯ ಕೈಗೊಂಡಿದ್ದರಿಂದ ನದಿಯಲ್ಲಿ ನೀರಿನ ಆಭಾವ ಉಂಟಾಗಬಹುದು ಎಂದು ರೈತರು ಭಾವಿಸಿದ್ದರು. ಆದರೆ ನದಿಯಲ್ಲಿ ಭತ್ತದ ಪೈರಿಗಾಗುವಷ್ಟು ನೀರು ನಿರಂತರವಾಗಿ ಹರಿದಿದ್ದರಿಂದ ರೈತರು ನಿರಾಯಾಸವಾಗಿ ಭತ್ತ ಬೆಳೆಯುವಂತಾಯಿತು.</p><p>ಪ್ರಸ್ತುತ ಬೇಸಿಗೆ ಹಂಗಾಮಿನ ಆರಂಭದಲ್ಲಿಯೇ ತಾಲ್ಲೂಕಿನಾದ್ಯಂತ ಭತ್ತದ ಪೈರಿಗೆ ಬಿಳಿತೆಗೆ ರೋಗ (ಭತ್ತದ ಪೈರು ತೆನೆಬಿಟ್ಟ ತಕ್ಷಣ ಹುಳುಗಳು ಬೆಳೆಯುವ ತೆನೆಯನ್ನು ಕತ್ತರಿಸಿ ಹಾಕುವ ರೋಗ) ಕಾಣಿಸಿಕೊಂಡಿತು. ಜೊತೆಗೆ ಬೆಂಕಿರೋಗ, ಕೊಳೆರೋಗಗಳು ಕಾಣಿಸಿಕೊಂಡವು. ಇದರಿಂದಾಗಿ ಭತ್ತದ ಇಳುವರಿಯ ಪ್ರಮಾಣ ತುಂಬಾ ಕಡಿಮೆಯಾಯಿತು ಎಂದು ರೈತರು ತಿಳಿಸಿದ್ದಾರೆ.</p><p>ಪ್ರತೀವರ್ಷ ರೈತರು ಎಕರೆ ಜಮೀನಿನಲ್ಲಿ 40-45 ಚೀಲ (75ಕೆ.ಜಿ. ಭರ್ತಿ) ಭತ್ತ ಬೆಳೆಯುತ್ತಿದ್ದರು. ವಿವಿಧ ರೋಗಗಳ ಕಾರಣದಿಂದ ಪ್ರಸ್ತುತ ವರ್ಷ ಎಕರೆ ಜಮೀನಿಗೆ 30-35ಚೀಲ ಮಾತ್ರ ಬೆಳೆಯಲು ಸಾದ್ಯವಾಯಿತು. ರೋಗಗಳ ಕಾರಣದಿಂದ ರೈತರು ಎಕರೆಗೆ ಹತ್ತು ಚೀಲ ಬೆಳೆ ನಷ್ಟ ಅನುಭವಿಸುವಂತಾಯಿತು.</p><p>ಬೆಣ್ಣಿಹಳ್ಳಿಯಿಂದ ಹಮ್ಮಿಗಿವರೆಗಿನ ರಾಜ್ಯ ಹೆದ್ದಾರಿ ಹಾಗೂ ಕಿರುರಸ್ತೆಗಳ ಇಕ್ಕೆಲಗಳಲ್ಲಿ ರೈತರು ಭತ್ತದ ಒಕ್ಕಲು ಮಾಡುತ್ತಿದ್ದು, ರಸ್ತೆಯುದ್ದಕ್ಕೂ ಆಳೆತ್ತರದ ಭತ್ತದ ರಾಶಿಗಳು ಕಂಡುಬರುತ್ತಲಿವೆ. ಇಲ್ಲಿ ಬೆಳೆದ ಭತ್ತವನ್ನು ದಾವಣಗೇರಿ, ಕೊಪ್ಪಳ, ಗಂಗಾವತಿ ಮೊದಲಾದ ಭಾಗಗಳ ವ್ಯಾಪಾರಸ್ಥರು ರೈತರ ಬಳಿಗೆ ಬಂದು ಖರೀದಿಸುತ್ತಿದ್ದಾರೆ.</p><p>75 ಕೆ.ಜಿ. ಭತ್ತದ ಚೀಲವು ಪ್ರಸ್ತುತ ₹1,800ರಿಂದ ₹1,840ಕ್ಕೆ ಮಾರಾಟವಾಗುತ್ತಿದ್ದು, ಕಳೆದ ವರ್ಷದ ಬೆಲೆಗೂ ಈ ವರ್ಷದ ಬೆಲೆಗೂ ಹೆಚ್ಚು ವ್ಯತ್ಯಾಸವಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬೆಲೆ ದೊರೆಯಬಹುದು ಎಂದು ರೈತರು ಭಾವಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಅನ್ಯದಾರಿ ಕಾಣದೆ ರೈತರು ಬಂದಷ್ಟು ಬೆಲೆಗೆ ಭತ್ತ ಮಾರುತ್ತಿದ್ದಾರೆ.</p><p>--- HIGHLIGHT ---</p><p>ಹಲವು ಕಾರಣಗಳಿಂದ ಭತ್ತದ ಇಳುವರಿ ಹಾಗೂ ಬೆಲೆ ಕುಸಿತವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ. ರಫ್ತು ಪ್ರಮಾಣ ಹೆಚ್ಚಿಸುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಂಡರೆ ರೈತರಿಗೆ ಒಳಿತಾಗುತ್ತದೆ</p><p>ಈಶಪ್ಪ ಶಟ್ಟರ, ರೈತ, ಶಿಂಗಟಾಲೂರ</p><p>-----------------</p><p>[SIDEBAR/BOX]</p><p>ಯುದ್ಧ: ಬೆಲೆ ಕುಸಿತದ ಆತಂಕ</p><p>ಮುಂಡರಗಿ ತಾಲ್ಲೂಕಿನಾದ್ಯಂತ ಭತ್ತದ ಕೊಯ್ಲು ಹಾಗೂ ಒಕ್ಕಲು ಇದೀಗ ಆರಂಭವಾಗಿದ್ದು, ರೈತರು ಅಪಾರ ಪ್ರಮಾಣದ ಭತ್ತ ಬೆಳೆದಿದ್ದಾರೆ. ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದ ಭತ್ತ ಸೇರಿದಂತೆ ರೈತರು ಬೆಳೆದ ಆಹಾರೋತ್ಪನ್ನಗಳ ರಫ್ತು ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.</p><p>ಮುಂಬರುವ ದಿನಗಳಲ್ಲಿ ಭತ್ತದ ಕೊಯ್ಲು ಹಾಗೂ ಒಕ್ಕಲು ವೇಗ ಪಡೆದುಕೊಳ್ಳಲಿದ್ದು, ಮುಂದೆ ದರ ಕಡಿಮೆಯಾಗಬಹುದು ಎಂದು ರೈತರು ಆತಂಕಗೊಂಡಿದ್ದಾರೆ.</p><p>[END BOX]</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>[Photo: ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಬದಿ ಭತ್ತದ ಒಕ್ಕಲಿನಲ್ಲಿ ನಿರತರಾಗಿರುವ ರೈತರು]</p><p>--------------------------------</p><p>ಮುಂಡರಗಿ: ತಾಲ್ಲೂಕಿನಾದ್ಯಂತ ಬೇಸಿಗೆ ಹಂಗಾಮಿನ ಭತ್ತದ ಕೊಯ್ಲು ಹಾಗೂ ಒಕ್ಕಲು ಭರದಿಂದ ಸಾಗಿದ್ದು, ಇಳುವರಿ ಕುಸಿತ ಹಾಗೂ ನಿರೀಕ್ಷಿತ ಬೆಲೆ ದೊರೆಯದೆ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.</p><p>ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಶಿಂಗಟಾಲೂರ, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ, ಮುಂಡವಾಡ ಸೇರಿದಂತೆ ಮೊದಲಾದ ಗ್ರಾಮಗಳ ರೈತರು ಸುಮಾರು 1,200 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಗಳ ಭತ್ತ ಬೆಳೆದಿದ್ದಾರೆ.</p><p>ಸಾಮಾನ್ಯವಾಗಿ ಬೇಸಿಗೆಯಲ್ಲಿ ತುಂಗಭದ್ರಾ ನದಿ ಬತ್ತಿ ಹೋಗುತ್ತದೆ. ಜೊತೆಗೆ ಈ ವರ್ಷ ಹೊಸಪೇಟೆ ಬಳಿಯ ಟಿಬಿ ಡ್ಯಾಂಗೆ ನೂತನ ಕ್ರೆಸ್ಟ್ ಗೇಟುಗಳ ಅಳವಡಿಕೆ ಕಾರ್ಯ ಕೈಗೊಂಡಿದ್ದರಿಂದ ನದಿಯಲ್ಲಿ ನೀರಿನ ಆಭಾವ ಉಂಟಾಗಬಹುದು ಎಂದು ರೈತರು ಭಾವಿಸಿದ್ದರು. ಆದರೆ ನದಿಯಲ್ಲಿ ಭತ್ತದ ಪೈರಿಗಾಗುವಷ್ಟು ನೀರು ನಿರಂತರವಾಗಿ ಹರಿದಿದ್ದರಿಂದ ರೈತರು ನಿರಾಯಾಸವಾಗಿ ಭತ್ತ ಬೆಳೆಯುವಂತಾಯಿತು.</p><p>ಪ್ರಸ್ತುತ ಬೇಸಿಗೆ ಹಂಗಾಮಿನ ಆರಂಭದಲ್ಲಿಯೇ ತಾಲ್ಲೂಕಿನಾದ್ಯಂತ ಭತ್ತದ ಪೈರಿಗೆ ಬಿಳಿತೆಗೆ ರೋಗ (ಭತ್ತದ ಪೈರು ತೆನೆಬಿಟ್ಟ ತಕ್ಷಣ ಹುಳುಗಳು ಬೆಳೆಯುವ ತೆನೆಯನ್ನು ಕತ್ತರಿಸಿ ಹಾಕುವ ರೋಗ) ಕಾಣಿಸಿಕೊಂಡಿತು. ಜೊತೆಗೆ ಬೆಂಕಿರೋಗ, ಕೊಳೆರೋಗಗಳು ಕಾಣಿಸಿಕೊಂಡವು. ಇದರಿಂದಾಗಿ ಭತ್ತದ ಇಳುವರಿಯ ಪ್ರಮಾಣ ತುಂಬಾ ಕಡಿಮೆಯಾಯಿತು ಎಂದು ರೈತರು ತಿಳಿಸಿದ್ದಾರೆ.</p><p>ಪ್ರತೀವರ್ಷ ರೈತರು ಎಕರೆ ಜಮೀನಿನಲ್ಲಿ 40-45 ಚೀಲ (75ಕೆ.ಜಿ. ಭರ್ತಿ) ಭತ್ತ ಬೆಳೆಯುತ್ತಿದ್ದರು. ವಿವಿಧ ರೋಗಗಳ ಕಾರಣದಿಂದ ಪ್ರಸ್ತುತ ವರ್ಷ ಎಕರೆ ಜಮೀನಿಗೆ 30-35ಚೀಲ ಮಾತ್ರ ಬೆಳೆಯಲು ಸಾದ್ಯವಾಯಿತು. ರೋಗಗಳ ಕಾರಣದಿಂದ ರೈತರು ಎಕರೆಗೆ ಹತ್ತು ಚೀಲ ಬೆಳೆ ನಷ್ಟ ಅನುಭವಿಸುವಂತಾಯಿತು.</p><p>ಬೆಣ್ಣಿಹಳ್ಳಿಯಿಂದ ಹಮ್ಮಿಗಿವರೆಗಿನ ರಾಜ್ಯ ಹೆದ್ದಾರಿ ಹಾಗೂ ಕಿರುರಸ್ತೆಗಳ ಇಕ್ಕೆಲಗಳಲ್ಲಿ ರೈತರು ಭತ್ತದ ಒಕ್ಕಲು ಮಾಡುತ್ತಿದ್ದು, ರಸ್ತೆಯುದ್ದಕ್ಕೂ ಆಳೆತ್ತರದ ಭತ್ತದ ರಾಶಿಗಳು ಕಂಡುಬರುತ್ತಲಿವೆ. ಇಲ್ಲಿ ಬೆಳೆದ ಭತ್ತವನ್ನು ದಾವಣಗೇರಿ, ಕೊಪ್ಪಳ, ಗಂಗಾವತಿ ಮೊದಲಾದ ಭಾಗಗಳ ವ್ಯಾಪಾರಸ್ಥರು ರೈತರ ಬಳಿಗೆ ಬಂದು ಖರೀದಿಸುತ್ತಿದ್ದಾರೆ.</p><p>75 ಕೆ.ಜಿ. ಭತ್ತದ ಚೀಲವು ಪ್ರಸ್ತುತ ₹1,800ರಿಂದ ₹1,840ಕ್ಕೆ ಮಾರಾಟವಾಗುತ್ತಿದ್ದು, ಕಳೆದ ವರ್ಷದ ಬೆಲೆಗೂ ಈ ವರ್ಷದ ಬೆಲೆಗೂ ಹೆಚ್ಚು ವ್ಯತ್ಯಾಸವಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬೆಲೆ ದೊರೆಯಬಹುದು ಎಂದು ರೈತರು ಭಾವಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಅನ್ಯದಾರಿ ಕಾಣದೆ ರೈತರು ಬಂದಷ್ಟು ಬೆಲೆಗೆ ಭತ್ತ ಮಾರುತ್ತಿದ್ದಾರೆ.</p><p>--- HIGHLIGHT ---</p><p>ಹಲವು ಕಾರಣಗಳಿಂದ ಭತ್ತದ ಇಳುವರಿ ಹಾಗೂ ಬೆಲೆ ಕುಸಿತವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ. ರಫ್ತು ಪ್ರಮಾಣ ಹೆಚ್ಚಿಸುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಂಡರೆ ರೈತರಿಗೆ ಒಳಿತಾಗುತ್ತದೆ</p><p>ಈಶಪ್ಪ ಶಟ್ಟರ, ರೈತ, ಶಿಂಗಟಾಲೂರ</p><p>-----------------</p><p>[SIDEBAR/BOX]</p><p>ಯುದ್ಧ: ಬೆಲೆ ಕುಸಿತದ ಆತಂಕ</p><p>ಮುಂಡರಗಿ ತಾಲ್ಲೂಕಿನಾದ್ಯಂತ ಭತ್ತದ ಕೊಯ್ಲು ಹಾಗೂ ಒಕ್ಕಲು ಇದೀಗ ಆರಂಭವಾಗಿದ್ದು, ರೈತರು ಅಪಾರ ಪ್ರಮಾಣದ ಭತ್ತ ಬೆಳೆದಿದ್ದಾರೆ. ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದ ಭತ್ತ ಸೇರಿದಂತೆ ರೈತರು ಬೆಳೆದ ಆಹಾರೋತ್ಪನ್ನಗಳ ರಫ್ತು ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.</p><p>ಮುಂಬರುವ ದಿನಗಳಲ್ಲಿ ಭತ್ತದ ಕೊಯ್ಲು ಹಾಗೂ ಒಕ್ಕಲು ವೇಗ ಪಡೆದುಕೊಳ್ಳಲಿದ್ದು, ಮುಂದೆ ದರ ಕಡಿಮೆಯಾಗಬಹುದು ಎಂದು ರೈತರು ಆತಂಕಗೊಂಡಿದ್ದಾರೆ.</p><p>[END BOX]</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>