<p>ಮುಂಡರಗಿ: ಭಾರಿ ಮಳೆ, ಗಾಳಿ ಬೀಸಿದ ಪರಿಣಾಮ ಪಟ್ಟಣದ ಜಾಗೃತ ವೃತ್ತದಲ್ಲಿ ಖಾಸಗಿ ಕಂಪನಿಯು ಸ್ಥಾಪಿಸಿದ್ದ ಭಾರಿ ಗಾತ್ರದ ಮೊಬೈಲ್ ಟವರ್ ಧರೆಗುರುಳಿರುವ ಘಟನೆ ಸೋಮವಾರ ಸಂಜೆ ನಡೆದಿದೆ.</p>.<p>ಸಂಜೆ 5ಗಂಟೆಗೆ ಪಟ್ಟಣದಲ್ಲಿ ಭಾರಿ ಮಳೆ, ಗಾಳಿ ಆರಂಭವಾಯಿತು. ರಭಸದಿಂದ ಬೀಸಿದ ಭಾರಿ ಗಾಳಿಯ ಹೊಡೆತಕ್ಕೆ ಜಾಗೃತ ವೃತ್ತದ ಮೂರು ಅಂತಸ್ತಿನ ಕಟ್ಟಡದಲ್ಲಿ ಸ್ಥಾಪಿಸಿದ್ದ ಕಬ್ಬುಣದ ಭಾರಿ ಗಾತ್ರದ ಮೊಬೈಲ್ ಟವರ್ ಬುನಾದಿ ಸಮೇತ ಧರೆಗುರುಳಿದೆ.</p>.<p>ಟವರ್ ಬಿದ್ದ ರಭಸಕ್ಕೆ ವೃತ್ತದ ನಾಲ್ಕು ದಿಕ್ಕುಗಳಲ್ಲಿದ್ದ ಹಲವು ವಿದ್ಯುತ್ ಹಾಗೂ ಟೆಲಿಫೋನ್ ಕಂಬಗಳು, ಸಂಪೂರ್ಣವಾಗಿ ಧರೆಗುರುಳಿವೆ. ಅಕ್ಕಪಕ್ಕದ ಕೆಲವು ಅಂಗಡಿಗಳು ಜಖಂಗೊಂಡಿವೆ.</p>.<p>ಏಕಕಾಲದಲ್ಲಿಯೇ ಭಾರಿ ಗಾಳಿ ಬೀಸಿದ್ದರಿಂದ ಹಾಗೂ ರಭಸದಿಂದ ಮಳೆ ಸುರಿದದ್ದರಿಂದ ಜನ ಸಂಚಾರ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಆ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಯಿತು.</p>.<p>ಜಾಗೃತ ವೃತ್ತದಲ್ಲಿ ನಾಲ್ಕು ಮುಖ್ಯ ರಸ್ತೆಗಳು ಸೇರುತ್ತಿದ್ದು, ವೃತ್ತವು ಸದಾ ಜನ ಜಂಗುಳಿಯಿಂದ ಕೂಡಿರುತ್ತದೆ. ಮೊಬೈಲ್ ಟವರ್ ಧರೆಗುರುಳಿದ್ದರಿಂದ ಸಂಚಾರವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.</p>.<p>ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿದ್ಧರಾಜು ಕಟ್ಟಿಮನಿ, ಹೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶೀಘ್ರ ಧರೆಗುರುಳಿದ ಟವರ್ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.</p>.<p>ಪಟ್ಟಣದ ವಿವಿಧ ಭಾಗಗಳಲ್ಲಿ ಗಿಡ, ಮರಗಳು ಧರೆಗುರುಳಿವೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-23-402072302</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಡರಗಿ: ಭಾರಿ ಮಳೆ, ಗಾಳಿ ಬೀಸಿದ ಪರಿಣಾಮ ಪಟ್ಟಣದ ಜಾಗೃತ ವೃತ್ತದಲ್ಲಿ ಖಾಸಗಿ ಕಂಪನಿಯು ಸ್ಥಾಪಿಸಿದ್ದ ಭಾರಿ ಗಾತ್ರದ ಮೊಬೈಲ್ ಟವರ್ ಧರೆಗುರುಳಿರುವ ಘಟನೆ ಸೋಮವಾರ ಸಂಜೆ ನಡೆದಿದೆ.</p>.<p>ಸಂಜೆ 5ಗಂಟೆಗೆ ಪಟ್ಟಣದಲ್ಲಿ ಭಾರಿ ಮಳೆ, ಗಾಳಿ ಆರಂಭವಾಯಿತು. ರಭಸದಿಂದ ಬೀಸಿದ ಭಾರಿ ಗಾಳಿಯ ಹೊಡೆತಕ್ಕೆ ಜಾಗೃತ ವೃತ್ತದ ಮೂರು ಅಂತಸ್ತಿನ ಕಟ್ಟಡದಲ್ಲಿ ಸ್ಥಾಪಿಸಿದ್ದ ಕಬ್ಬುಣದ ಭಾರಿ ಗಾತ್ರದ ಮೊಬೈಲ್ ಟವರ್ ಬುನಾದಿ ಸಮೇತ ಧರೆಗುರುಳಿದೆ.</p>.<p>ಟವರ್ ಬಿದ್ದ ರಭಸಕ್ಕೆ ವೃತ್ತದ ನಾಲ್ಕು ದಿಕ್ಕುಗಳಲ್ಲಿದ್ದ ಹಲವು ವಿದ್ಯುತ್ ಹಾಗೂ ಟೆಲಿಫೋನ್ ಕಂಬಗಳು, ಸಂಪೂರ್ಣವಾಗಿ ಧರೆಗುರುಳಿವೆ. ಅಕ್ಕಪಕ್ಕದ ಕೆಲವು ಅಂಗಡಿಗಳು ಜಖಂಗೊಂಡಿವೆ.</p>.<p>ಏಕಕಾಲದಲ್ಲಿಯೇ ಭಾರಿ ಗಾಳಿ ಬೀಸಿದ್ದರಿಂದ ಹಾಗೂ ರಭಸದಿಂದ ಮಳೆ ಸುರಿದದ್ದರಿಂದ ಜನ ಸಂಚಾರ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಆ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಯಿತು.</p>.<p>ಜಾಗೃತ ವೃತ್ತದಲ್ಲಿ ನಾಲ್ಕು ಮುಖ್ಯ ರಸ್ತೆಗಳು ಸೇರುತ್ತಿದ್ದು, ವೃತ್ತವು ಸದಾ ಜನ ಜಂಗುಳಿಯಿಂದ ಕೂಡಿರುತ್ತದೆ. ಮೊಬೈಲ್ ಟವರ್ ಧರೆಗುರುಳಿದ್ದರಿಂದ ಸಂಚಾರವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.</p>.<p>ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿದ್ಧರಾಜು ಕಟ್ಟಿಮನಿ, ಹೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶೀಘ್ರ ಧರೆಗುರುಳಿದ ಟವರ್ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.</p>.<p>ಪಟ್ಟಣದ ವಿವಿಧ ಭಾಗಗಳಲ್ಲಿ ಗಿಡ, ಮರಗಳು ಧರೆಗುರುಳಿವೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-23-402072302</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>