<p><strong>ನರೇಗಲ್</strong>: ಪಟ್ಟಣ್ಣದ ಅಗತ್ಯ ಮೂಲ ಸೌಲಭ್ಯ ಪಡೆಯಲು ಶಾಸಕ-ಸಂಸದರ ಜೊತೆಗೆ ಸಂವಾದ ನಡೆಸಲು ಪಟ್ಟಣದ ಸಂತೆ ಬಜಾರ್ನ ಗಣೇಶ ಗುಡಿಯಲ್ಲಿ ಶುಕ್ರವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ನಿರ್ಧರಿಸಲಾಯಿತು.</p>.<p>ಗದಗ-ವಾಡಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.</p>.<p>‘ಪಟ್ಟಣವು ಅಭಿವೃದ್ಧಿಯ ದೃಷ್ಟಿಯಿಂದ ತೀರ ಹಿಂದುಳಿದಿದೆ. ಹಾಲಕೆರೆಯ ಅನ್ನದಾನ ಸ್ವಾಮೀಜಿ ಅವರಿಂದ ಶೈಕ್ಷಣಿಕವಾಗಿ ಒಂದಿಷ್ಟು ಅಭಿವೃದ್ಧಿ ಕಂಡಿರುವ ಪಟ್ಟಣವು ಉಳಿದ ವಿಷಯದಲ್ಲಿ ಹಿಂದುಳಿದಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಖಂಡಿಸಿದರು.</p>.<p>ಹೋರಾಟ ಸಮಿತಿಯ ಸದಸ್ಯ ಆರ್.ಕೆ. ಗಚ್ಚಿನಮಠ ಪ್ರಾಸ್ತಾವಿಕ ಮಾತನಾಡಿ, ‘ಪಟ್ಟಣಕ್ಕೆ ಬರಬೇಕಿದ್ದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಹೇಗೆಲ್ಲ ಕಳೆದುಕೊಂಡೆವು. ಅದಕ್ಕೆ ನಮ್ಮೆಲ್ಲರ ನಿರ್ಲಕ್ಷ್ಯವೇ ಕಾರಣ’ ಎಂದು ವಿಷಾದಿಸಿದರು.</p>.<p>ಹೋರಾಟ ಸಮಿತಿ ಸದಸ್ಯ ಅಶೋಕ ಬೇವಿನಕಟ್ಟಿ ಮಾತನಾಡಿ, ಗದಗ-ವಾಡಿ ರೈಲು ಮಂಜೂರಿಗಾಗಿ ಹೋರಾಟ ಸಮಿತಿ ಏನೆಲ್ಲ ಕ್ರಮಗಳನ್ನು ಕೈಗೊಂಡಿತು ಎಂಬುದರ ವಿವರಣೆ ನೀಡಿದರು.</p>.<p>ಮುಖಂಡ ಬಸವರಾಜ ವಂಕಲಕುಂಟಿ ಮಾತನಾಡಿ, ‘ಪಟ್ಟಣವು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಇದರಿಂದ ಪಟ್ಟಣದ ಆರ್ಥಿಕತೆ ಕುಸಿದಿದೆ’ ಎಂದರು.</p>.<p>ಶಿವಪುತ್ರಪ್ಪ ಸಂಗನಾಳ, ದೊಡ್ಡಯ್ಯ ಅರವಟಗಿಮಠ, ನಿಂಗಪ್ಪ ಹೊನ್ನಾಪುರ, ಉಮೇಶ ಸಂಗನಾಳಮಠ, ಶರಣಪ್ಪ ಧರ್ಮಾಯತ, ವೀರಯ್ಯ ಚೌಕಿಮಠ, ವಿವಿಧ ಸಂಘಟನೆಗಳ ಅಧ್ಯಕ್ಷರು ಸದಸ್ಯರು, ನಿವೃತ್ತ ಸೈನಿಕರ ಸಂಘದ ಸದಸ್ಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260506-23-64868847</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರೇಗಲ್</strong>: ಪಟ್ಟಣ್ಣದ ಅಗತ್ಯ ಮೂಲ ಸೌಲಭ್ಯ ಪಡೆಯಲು ಶಾಸಕ-ಸಂಸದರ ಜೊತೆಗೆ ಸಂವಾದ ನಡೆಸಲು ಪಟ್ಟಣದ ಸಂತೆ ಬಜಾರ್ನ ಗಣೇಶ ಗುಡಿಯಲ್ಲಿ ಶುಕ್ರವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ನಿರ್ಧರಿಸಲಾಯಿತು.</p>.<p>ಗದಗ-ವಾಡಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.</p>.<p>‘ಪಟ್ಟಣವು ಅಭಿವೃದ್ಧಿಯ ದೃಷ್ಟಿಯಿಂದ ತೀರ ಹಿಂದುಳಿದಿದೆ. ಹಾಲಕೆರೆಯ ಅನ್ನದಾನ ಸ್ವಾಮೀಜಿ ಅವರಿಂದ ಶೈಕ್ಷಣಿಕವಾಗಿ ಒಂದಿಷ್ಟು ಅಭಿವೃದ್ಧಿ ಕಂಡಿರುವ ಪಟ್ಟಣವು ಉಳಿದ ವಿಷಯದಲ್ಲಿ ಹಿಂದುಳಿದಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಖಂಡಿಸಿದರು.</p>.<p>ಹೋರಾಟ ಸಮಿತಿಯ ಸದಸ್ಯ ಆರ್.ಕೆ. ಗಚ್ಚಿನಮಠ ಪ್ರಾಸ್ತಾವಿಕ ಮಾತನಾಡಿ, ‘ಪಟ್ಟಣಕ್ಕೆ ಬರಬೇಕಿದ್ದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಹೇಗೆಲ್ಲ ಕಳೆದುಕೊಂಡೆವು. ಅದಕ್ಕೆ ನಮ್ಮೆಲ್ಲರ ನಿರ್ಲಕ್ಷ್ಯವೇ ಕಾರಣ’ ಎಂದು ವಿಷಾದಿಸಿದರು.</p>.<p>ಹೋರಾಟ ಸಮಿತಿ ಸದಸ್ಯ ಅಶೋಕ ಬೇವಿನಕಟ್ಟಿ ಮಾತನಾಡಿ, ಗದಗ-ವಾಡಿ ರೈಲು ಮಂಜೂರಿಗಾಗಿ ಹೋರಾಟ ಸಮಿತಿ ಏನೆಲ್ಲ ಕ್ರಮಗಳನ್ನು ಕೈಗೊಂಡಿತು ಎಂಬುದರ ವಿವರಣೆ ನೀಡಿದರು.</p>.<p>ಮುಖಂಡ ಬಸವರಾಜ ವಂಕಲಕುಂಟಿ ಮಾತನಾಡಿ, ‘ಪಟ್ಟಣವು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಇದರಿಂದ ಪಟ್ಟಣದ ಆರ್ಥಿಕತೆ ಕುಸಿದಿದೆ’ ಎಂದರು.</p>.<p>ಶಿವಪುತ್ರಪ್ಪ ಸಂಗನಾಳ, ದೊಡ್ಡಯ್ಯ ಅರವಟಗಿಮಠ, ನಿಂಗಪ್ಪ ಹೊನ್ನಾಪುರ, ಉಮೇಶ ಸಂಗನಾಳಮಠ, ಶರಣಪ್ಪ ಧರ್ಮಾಯತ, ವೀರಯ್ಯ ಚೌಕಿಮಠ, ವಿವಿಧ ಸಂಘಟನೆಗಳ ಅಧ್ಯಕ್ಷರು ಸದಸ್ಯರು, ನಿವೃತ್ತ ಸೈನಿಕರ ಸಂಘದ ಸದಸ್ಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260506-23-64868847</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>