<p>ನರಗುಂದ: ‘ಕೈಗಾರಿಕಾ ತರಬೇತುದಾರರಿಗೆ ಶಿಶುಕ್ಷು ತರಬೇತಿ ಕಡ್ಡಾಯವಾಗಿದ್ದು, ಅದನ್ನು ಪೂರ್ಣಗೊಳಿಸಬೇಕು’ ಎಂದು ಗದಗನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಬಸವರಾಜ ಮಲ್ಲೂರ ಹೇಳಿದರು.</p>.<p>ತಾಲ್ಲೂಕಿನ ಶಿರೋಳದ ತೋಂಟದಾರ್ಯ ವಿದ್ಯಾಪೀಠದ, ಶಿರೋಳ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಬೆಂಗಳೂರಿನ ದ್ವೀಚಕ್ರ ವಾಹನ ಬಿಡಿಭಾಗಗಳ ತಯಾರಕ ಸನ್ಸೇರಾ ಕಂಪನಿ ಆಶ್ರಯದಲ್ಲಿ ನಡೆದ ಶಿಶುಕ್ಷು ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವಿಭಾಗೀಯ ಕಚೇರಿಯಿಂದ ಪ್ರತಿವಾರ ನಡೆಸುವ ಅಪ್ರೆಂಟಿಸ್ ತರಬೇತಿ ಕುರಿತು ಅರಿವು ಮೂಡಿಸುವ ಸಲುವಾಗಿ ಗೂಗಲ್ ಮೀಟ್ ಏರ್ಪಡಿಸಲಾಗುತ್ತದೆ. ಇದರಲ್ಲಿ ಎಲ್ಲ ತರಬೇತುದಾರರು ಕಡ್ಡಾಯವಾಗಿ ಭಾಗಿಯಾಗಿ ಶಿಶುಕ್ಷು ತರಬೇತಿ ಬಗ್ಗೆ ತಿಳಿದುಕೊಳ್ಳಬೇಕು’ ಎಂದರು.</p>.<p>ಸನ್ಸೇರಾ ಕಂಪೆನಿ ಸಂಪನ್ಮೂಲ ಅಧಿಕಾರಿ ಸುನೀಲ್ ಶೆಟ್ಟಿ ಮತ್ತು ಜಗದೀಶ ಎಸ್. ತರಬೇತುದಾರರಿಗೆ ಶಿಶುಕ್ಷು ಸಂದರ್ಶನ ಮಾಡಿದರು.</p>.<p>ಸುರೇಬಾನದ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಆನಂದ ಗಡೇದೆ 14 ತರಬೇತುದಾರರೊಂದಿಗೆ ಭಾಗವಹಿಸಿದ್ದರು. ಶಿರೋಳದಿಂದ 64 ತರಬೇತುದಾರರು ಸೇರಿದಂತೆ ಒಟ್ಟು 84 ತರಬೇತುದಾರರು ಸಂದರ್ಶನ ಎದುರಿಸಿದರು. 63 ತರಬೇತುದಾರರನ್ನು ಶಿಶುಕ್ಷು ತರಬೇತಿಗೆ ಆಯ್ಕೆ ಮಾಡಲಾಯಿತು.</p>.<p>ಪ್ಲೇಸ್ಮೆಂಟ್ ಅಧಿಕಾರಿ ಎಸ್.ವಿ. ಕುಪ್ಪಸ್ತ, ಶ್ರೀಧರ ಬೇವಿನಕಟ್ಟಿ, ವೀರನಗೌಡ, ಪ್ರಭುಲಿಂಗ ಶಿರಿಯಣ್ಣವರ, ಭೂಪತಿ ಧೋತರದ, ಪ್ರೀತಿ ಚಿಕ್ಕಮಠ, ಕಾಳಮ್ಮ ಕಮ್ಮಾರ, ಚಂದ್ರಕಾಂತ ಕಾಡದೇವರಮಠ, ಗಂಗಾಧರ ಫಾರಗೆ ಇದ್ದರು. ಪ್ರಾಚಾರ್ಯ ಬಸವರಾಜ ಸಾಲಿಮಠ ಮಾತನಾಡಿದರು. ಎಸ್.ಬಿ. ಗೊರವರ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-23-1013894272</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನರಗುಂದ: ‘ಕೈಗಾರಿಕಾ ತರಬೇತುದಾರರಿಗೆ ಶಿಶುಕ್ಷು ತರಬೇತಿ ಕಡ್ಡಾಯವಾಗಿದ್ದು, ಅದನ್ನು ಪೂರ್ಣಗೊಳಿಸಬೇಕು’ ಎಂದು ಗದಗನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಬಸವರಾಜ ಮಲ್ಲೂರ ಹೇಳಿದರು.</p>.<p>ತಾಲ್ಲೂಕಿನ ಶಿರೋಳದ ತೋಂಟದಾರ್ಯ ವಿದ್ಯಾಪೀಠದ, ಶಿರೋಳ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಬೆಂಗಳೂರಿನ ದ್ವೀಚಕ್ರ ವಾಹನ ಬಿಡಿಭಾಗಗಳ ತಯಾರಕ ಸನ್ಸೇರಾ ಕಂಪನಿ ಆಶ್ರಯದಲ್ಲಿ ನಡೆದ ಶಿಶುಕ್ಷು ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವಿಭಾಗೀಯ ಕಚೇರಿಯಿಂದ ಪ್ರತಿವಾರ ನಡೆಸುವ ಅಪ್ರೆಂಟಿಸ್ ತರಬೇತಿ ಕುರಿತು ಅರಿವು ಮೂಡಿಸುವ ಸಲುವಾಗಿ ಗೂಗಲ್ ಮೀಟ್ ಏರ್ಪಡಿಸಲಾಗುತ್ತದೆ. ಇದರಲ್ಲಿ ಎಲ್ಲ ತರಬೇತುದಾರರು ಕಡ್ಡಾಯವಾಗಿ ಭಾಗಿಯಾಗಿ ಶಿಶುಕ್ಷು ತರಬೇತಿ ಬಗ್ಗೆ ತಿಳಿದುಕೊಳ್ಳಬೇಕು’ ಎಂದರು.</p>.<p>ಸನ್ಸೇರಾ ಕಂಪೆನಿ ಸಂಪನ್ಮೂಲ ಅಧಿಕಾರಿ ಸುನೀಲ್ ಶೆಟ್ಟಿ ಮತ್ತು ಜಗದೀಶ ಎಸ್. ತರಬೇತುದಾರರಿಗೆ ಶಿಶುಕ್ಷು ಸಂದರ್ಶನ ಮಾಡಿದರು.</p>.<p>ಸುರೇಬಾನದ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಆನಂದ ಗಡೇದೆ 14 ತರಬೇತುದಾರರೊಂದಿಗೆ ಭಾಗವಹಿಸಿದ್ದರು. ಶಿರೋಳದಿಂದ 64 ತರಬೇತುದಾರರು ಸೇರಿದಂತೆ ಒಟ್ಟು 84 ತರಬೇತುದಾರರು ಸಂದರ್ಶನ ಎದುರಿಸಿದರು. 63 ತರಬೇತುದಾರರನ್ನು ಶಿಶುಕ್ಷು ತರಬೇತಿಗೆ ಆಯ್ಕೆ ಮಾಡಲಾಯಿತು.</p>.<p>ಪ್ಲೇಸ್ಮೆಂಟ್ ಅಧಿಕಾರಿ ಎಸ್.ವಿ. ಕುಪ್ಪಸ್ತ, ಶ್ರೀಧರ ಬೇವಿನಕಟ್ಟಿ, ವೀರನಗೌಡ, ಪ್ರಭುಲಿಂಗ ಶಿರಿಯಣ್ಣವರ, ಭೂಪತಿ ಧೋತರದ, ಪ್ರೀತಿ ಚಿಕ್ಕಮಠ, ಕಾಳಮ್ಮ ಕಮ್ಮಾರ, ಚಂದ್ರಕಾಂತ ಕಾಡದೇವರಮಠ, ಗಂಗಾಧರ ಫಾರಗೆ ಇದ್ದರು. ಪ್ರಾಚಾರ್ಯ ಬಸವರಾಜ ಸಾಲಿಮಠ ಮಾತನಾಡಿದರು. ಎಸ್.ಬಿ. ಗೊರವರ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-23-1013894272</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>