‘ರಾಯರು ಸದಾ ಹಸನ್ಮುಖಿಗಳಾಗಿದ್ದರು. ಜಿಲ್ಲೆಯ ಪತ್ರಿಕಾ ವಿತರಕರ ಸಂಘದ ಬೆನ್ನೆಲುಬಾಗಿದ್ದ ಅವರು, ಸಂಘದ ಸ್ಥಾಪನೆಗೂ ಕಾರಣರಾಗಿದ್ದರು, ಪತ್ರಿಕೆ ವ್ಯವಹಾರದಲ್ಲಿ ಮಾತ್ರವಲ್ಲ, ಕಷ್ಟದ ಕಾಲದಲ್ಲೂ ಅವರು ತುಂಬು ಹೃದಯದಿಂದ ಸಹಕರಿಸುವ ವ್ಯಕ್ತಿಯಾಗಿದ್ದರು’ ಎಂದು ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಕರ ಕುದರಿಮೋತಿ ಸ್ಮರಿಸಿದರು.