ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಈ ಜಾಗೃತಿ ಪಥಸಂಚಲನ ಕೈಗೊಂಡಿತ್ತು. ಗದುಗಿನ ತೋಂಟದಾರ್ಯ ಮಠದ ಆವರಣದಿಂದ ಆರಂಭವಾದ ಪಥಸಂಚಲನ ಮಹೇಂದ್ರಕರ್ ವೃತ್ತ, ಶಹಪೂರ ಪೇಟೆ, ಗಂಗಾಪೂರ ಪೇಟೆ, ವೀರನಾರಾಯಣ ದೇವಸ್ಥಾನ, ಸರಾಫ್ ಬಜಾರ್, ಜುಮ್ಮಾ ಮಸೀದಿ, ತಿಲಕ್ ಪಾರ್ಕ್, ಬಸವೇಶ್ವರ ವೃತ್ತ ಮಾಗರ್ವಾಗಿ ಗ್ರೇನ್ ಮಾರುಕಟ್ಟೆ ಪ್ರದೇಶಕ್ಕೆ ಬಂದು ಸಮಾರೋಪಗೊಂಡಿತು.