ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನಮ್ಮ ಪಾಲು ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ ನಾವು ಕಾಲುವೆ ಕಟ್ಟಿದರೆ, ನೀರು ಹೋಗದಂತೆ ಗೋಡೆ ಕಟ್ಟಿದ್ದಕ್ಕೋ? ಒಂದು ಹನಿ ಕುಡಿಯುವ ನೀರು ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದ ಸೋನಿಯಾ ಗಾಂಧಿ ಹೇಳಿಕೆಗೋ? 2006ರಲ್ಲಿ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೋಗಿದ್ದಕ್ಕೋ? ಮನಮೋಹನ್ ಸಿಂಗ್ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸಲಾರದೇ ಟ್ರಿಬುನಲ್ಗೆ ಕಳಿಸಿದ್ದಕ್ಕೋ? ಅಥವಾ ರೈತರ ಮೇಲೆ ಲಾಠಿಜಾರ್ಜ್ ಮಾಡಿಸಿದ್ದಕ್ಕೋ? ಇವಿಷ್ಟರಲ್ಲಿ ಹೋರಾಟ ಯಾವುದಕ್ಕಾಗಿ’ ಎಂದು ಲೇವಡಿ ಮಾಡಿದರು.