ಧರ್ಮಸ್ಥಳ ಕ್ಷೇತ್ರದ ವತಿಯಿಂದ 10 ಟನ್ ಅಕ್ಕಿ, ಬೆಳಗಾಂ ಜಿಲ್ಲೆಯ ಗೋಕಾಕ್ ಜೈನ ಸಮಾಜದಿಂದ 5 ಟನ್ ಆಹಾರ ಧಾನ್ಯ, ಬೋರ್ಗಾಂವ್ನ ರಾವ್ಸಾಹೇಬ್ ಪಾಟೀಲ ಮತ್ತು ಸಮಾಜದವರಿಂದ 9 ಟನ್ ಎಣ್ಣೆ, ಚಿಕ್ಕೋಡಿ ತಾಲ್ಲೂಕಿನ ಜೈನ ಸಮಾಜದಿಂದ ಗೋಧಿ, ಎಣ್ಣೆ, ಬೇಳೆ ಕಾಳುಗಳು, 56 ಟನ್ ಆಹಾರ ಧಾನ್ಯ, ಮಹಾರಾಷ್ಟ್ರದ ಸಾಂಗ್ಲಿ ಸನ್ಮತಿ ಸಂಸ್ಕೃತ ಮಂಚ್ನ ಜೋಳ 2 ಟನ್, ಗೋಧಿ 3 ಟನ್, ಸಕ್ಕರೆ 4 ಟನ್, ಎಣ್ಣೆ 1.5 ಟನ್, ತುಮಕೂರು ಜಿಲ್ಲೆ ತಂಡಗ ಜೈನ ಸಮಾಜದಿಂದ 1500 ತೆಂಗಿನಕಾಯಿ ಸೇರಿ 100.5 ಟನ್ ಆಹಾರ ಧಾನ್ಯಗಳನ್ನು ಕ್ಷೇತ್ರಕ್ಕೆ ದೇಣಿಗೆ ನೀಡಲಾಗಿದೆ. ಕ್ಷೇತ್ರದ ವತಿಯಿಂದ ಕಾರ್ಕಳದ ಶಾಸಕ ಸುನಿಲ್ಕುಮಾರ್, ಪ್ರೇಮ್ಕುಮಾರ್, ಸುಭಾಷ್ಚಂದ್ರ, ಮೇಗಣ್ಣನವರ್, ರಾವ್ಸಾಹೇಬ್ ಅವರನ್ನು ಸನ್ಮಾನಿಸಲಾಯಿತು.