ಯುವಕರ ಪ್ರತಿದೂರು: ‘ನಾವು ಮನೆಗೆ ವಾಪಸಾಗುತ್ತಿದ್ದ ವೇಳೆ ಆದ್ಯಪಾಡಿ ರಸ್ತೆಯ ನಿರ್ಜನ ರಸ್ತೆಯಲ್ಲಿ ಕಾರೊಂದು ನಿಂತಿತ್ತು. ಅದರಲ್ಲಿ ಯಾರಿದ್ದಾರೆ ಎಂದು ನೋಡಲು ಪ್ರಯತ್ನಿಸಿದೆವು. ಆಗ ಚಾಲಕನ ಸೀಟಿನಲ್ಲಿದ್ದ ಯುವಕ ಗಾಬರಿಯಿಂದ ಕಾರು ಚಲಾಯಿಸಿಕೊಂಡು ಮುಂದಕ್ಕೆ ಹೋಗಲು ಯತ್ನಿಸಿದ್ದಾರೆ. ಆ ಸಮಯದಲ್ಲಿ ಕಾರು ಒಂದು ಬೈಕ್ಗೆ ಡಿಕ್ಕಿಯಾಗಿದೆ. ಬೈಕ್ಗೆ ಹಾನಿಯಾಗಿರುವುದರಿಂದ ನಷ್ಟದ ಮೊತ್ತ ನೀಡುವಂತೆ ಕೇಳಿದೆವು. ನಗದು ಇಲ್ಲ ಎಂದು ಹೇಳಿದ ಯುವತಿ ಎಟಿಎಂ ಕಾರ್ಡ್ ನೀಡಿ, ಪಿನ್ ಸಂಖ್ಯೆ ನೀಡಿದ್ದರು’ ಎಂದು ಯುವಕರು ಪ್ರತಿದೂರಿನಲ್ಲಿ ತಿಳಿಸಿದ್ದಾರೆ.