ಗದಗ ತಾಲ್ಲೂಕಿನ ಮದಗಾನೂರ ಗ್ರಾಮದ ಬಳಿಯಿರುವ ಸೌಳಹಳ್ಳ ಹಾಗೂ ಸಿಹಿಹಳ್ಳ ಉಕ್ಕಿ ಹರಿದು ಊರೊಳಗೆ ನೀರು ನುಗ್ಗಿದ ಪರಿಣಾಮ ಊರ ಜನರೆಲ್ಲರೂ ಇಡೀ ರಾತ್ರಿ ಪರದಾಡಿದರು. ಬೆಟಗೇರಿಯ ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ, ಅಂಬೇಡ್ಕರ್ ನಗರ, ಮಂಜುನಾಥ ನಗರ, ಭಜಂತ್ರಿ ಓಣಿ, ಗಂಗಿಮಡಿ, ಖಾದಿ ನಗರ, ಎಸ್.ಎಂ.ಕೃಷ್ಣ ನಗರದ ಮೊದಲಾದ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ಸಂಕಷ್ಟ ಅನುಭವಿಸಿದರು.