ಪರಿಹಾರಕ್ಕೆ ಆಗ್ರಹ: ಹೆಚ್ಚಿನ ಮಳೆಗೆ ಕಂಠಿಶೇಂಗಾ, ಬಿಟಿ ಹತ್ತಿ, ಗೋವಿನಜೋಳದ ಬೆಳೆಗಳು ಸಂಪೂರ್ಣ ಹಾಳಾಗಿ ರೈತರಿಗೆ ನಷ್ಟ ಉಂಟಾಗಿದೆ. ಕಾರಣ ಸರ್ಕಾರ ಸೂಕ್ತ ಪರಿಹಾರ ನೀಡುವುದರ ಜೊತೆಗೆ ವಿಮಾ ಕಂಪನಿಯಿಂದ ವಿಮೆ ಪರಿಹಾರ ಬರುವಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ನ ಮುಖಂಡ ಸಮೀಪದ ರಾಮಗಿರಿಯ ಸೋಮಣ್ಣ ಬೆಟಗೇರಿ ಒತ್ತಾಯಿಸಿದರು.