‘ಒಬ್ಬ ಯೋಗಿಯ ಜತೆಗೆ ನಡೆಸುವ ಮಾತುಕತೆ, ಚರ್ಚೆ, ಸಂವಾದವು 10 ಪುಸ್ತಕಗಳ ಓದಿಗೆ ಸಮ. ಸಾಧನೆಯ ಹಾದಿಯಲ್ಲಿ ನೂರಾರು ಸವಾಲುಗಳು ಎದುರಾಗುತ್ತವೆ. ಆದರೆ, ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಭಾವನೆ ಮನುಷ್ಯನಲ್ಲಿದ್ದರೆ ಎಂತಹ ಸಾಧನೆಯನ್ನೂ ಮಾಡಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೀಳರಿಮೆ ತೊಡೆದು, ಸ್ವಾಭಿಮಾನ, ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನುಗ್ಗಬೇಕು. ಉತ್ತಮ ವ್ಯಕ್ತಿತ್ವದ ಒಡೆಯರಾಗಿ ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು’ ಎಂದು ರವಿ ಚನ್ನಣ್ಣವರ ಹೇಳಿದರು.