ಆದರೆ ದೇವೇಗೌಡರು ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೇ ಕಾಂಗ್ರೆಸ್ಸಿನ ಮುಖ್ಯಮಂತ್ರಿಯನ್ನು ನೀಚ ಎಂದು ಜರಿದಿದ್ದರೂ ಆ ಬಗ್ಗೆ ತುಟಿಕ್ ಪಿಟಿಕ್ ಅನ್ನಲಿಲ್ಲ. 38 ಶಾಸಕರನ್ನು ಇಟ್ಟುಕೊಂಡಿರುವ ಗೌಡರ ಪಕ್ಷಕ್ಕೆ ಈಗ ತಲೆಬಾಗಿ, ಮಂಡಿಯೂರಿ, ಮಣೆ ಹಾಕಿ ಅವರ ಕುಮಾರನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಗೌಡರು ‘ನನಗೆ ಈಗ ಅತೀವ ತೃಪ್ತಿಯಾಗಿದೆ’ ಎಂದು ಉದ್ಗರಿಸುವಂತೆ ಮಾಡಿದ್ದಾರೆ.