ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ತೆರಳುವ ತಿರುವುಗಳಲ್ಲಿ ಸೂಚನಾ ಫಲಕಗಳಲ್ಲಿದ ಕಾರಣ ವಾಹನ ಸವಾರರಿಗೆ ದಿಕ್ಕು ತಪ್ಪುತ್ತಿದೆ. ಅಲ್ಲದೇ ಅವಘಡಗಳು ಸಂಭವಿಸುತ್ತಿವೆ. ಲೋಕೋಪಯೋಗಿ ಇಲಾಖೆ ಮೈಲುಗಲ್ಲು ಹಾಗೂ ಸೂಚನಾ ಫಲಕಗಳನ್ನು ಸಮರ್ಪಕವಾಗಿ ನಿರ್ಮಿಸಬೇಕಿದೆ
ಬಸವರಾಜ ಕಾಳೆ ತಾಲ್ಲೂಕು ಅಧ್ಯಕ್ಷರು ಭೀಮ ಆರ್ಮಿ ಸಂಘಟನೆ
ನಾನು ಇತ್ತಿಚೇಗೆ ವರ್ಗಾವಣೆಯಾಗಿ ಬಂದಿದ್ದು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಸಮರ್ಪಕ ರೀತಿಯಲ್ಲಿ ಮೈಲುಗಲ್ಲುಗಳು ಹಾಗೂ ಸೂಚನಾ ಫಲಕಗಳ ಅಳವಡಿಕೆಗೆ ಹಾಗೂ ರಸ್ತೆ ಬದಿಯ ಮುಳ್ಳುಕಂಟಿಗಳ ತೆರವಿಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುತ್ತೆನೆ.
ಜಿ.ಎಸ್.ಪಾಟೀಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ರೋಣ