‘ಮದುವೆಯಾಗಿ ಬಾಳು ಕೊಡುವುದಾಗಿ ಹೇಳಿ ಮಹಾಂತೇಶ ನನ್ನಿಂದ ₹3 ಲಕ್ಷದಷ್ಟು ಹಣ ಸಹಾಯವನ್ನೂ ಪಡೆದಿದ್ದಾನೆ. ಅವನ ಮಾತು ನಂಬಿ ಚಿನ್ನಾಭರಣಗಳನ್ನೂ ಒತ್ತೆ ಇಟ್ಟಿದ್ದೇನೆ. ನಾನೀಗ ತವರು ಮನೆಗೂ ಹೋಗಲಾಗದೇ, ಇತ್ತ ಕೈಯಲ್ಲಿದ್ದ ಹಣ, ಕೆಲಸ ಕಳೆದುಕೊಂಡು ಅತಂತ್ರಳಾಗಿದ್ದೇನೆ. ಪೊಲೀಸರು ಮಹಾಂತೇಶನನ್ನು ಹುಡುಕಿ ತಂದು, ನನಗೆ ಮದುವೆ ಮಾಡಿಸಬೇಕು’ ಎಂದು ಹೇಳಿದರು.