‘ಪ್ರಾಣಿ, ಪಕ್ಷಿಗಳಷ್ಟೇ ವನ್ಯಸಂಪತ್ತಲ್ಲ. ಪ್ರತಿಯೊಂದು ಸಣ್ಣಪುಟ್ಟ ಸಸ್ಯ ಪ್ರಭೇದಗಳು ಕೂಡ ಅರಣ್ಯ ಸಂಪತ್ತಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು. ಈ ಬಾರಿಯ ವನ್ಯಜೀವಿ ಸಪ್ತಾಹದ ಘೋಷವಾಕ್ಯ ‘ಭವಿಷ್ಯಕ್ಕಾಗಿ ರಣಹದ್ದುಗಳು’. ರಣಹದ್ದುಗಳ ಸಂತತಿ ಅಳಿವಿನಂಚಿಗೆ ಬರಲು ಮಾನವನೇ ಪರೋಕ್ಷವಾಗಿ ಕಾರಣನಾಗಿದ್ದಾನೆ’ ಎಂದು ಹೇಳಿದರು.