<p>ಶಿರಹಟ್ಟಿ: ಜಗದ್ಗುರು ಫಕೀರೇಶ್ವರ ಜಾತ್ರೆಯ ಅಂಗವಾಗಿ ಶುಕ್ರವಾರ ಪುರ ಪ್ರವೇಶ ಮಾಡಿದ ಶ್ರೀಮಠದ 13ನೇ ಪಟ್ಟಾಧ್ಯಕ್ಷ ಫಕೀರ ಸಿದ್ಧರಾಮ ಸ್ವಾಮೀಜಿ ಅವರನ್ನು ಭಕ್ತ ಸಮೂಹ ಅತ್ಯಂತ ಸಡಗರ ಸಂಭ್ರಮದಿಂದ ಬರಮಾಡಿಕೊಂಡಿತು.</p>.<p>ಜಾತ್ರಾ ಮಹೋತ್ಸವದ ಕಳಸಾರೊಹಣ ದಿನದಂದು ಸ್ವಾಮೀಜಿ ಅವರು ಶಿರಹಟ್ಟಿ ನಗರದ ಮಿತಿಯಿಂದ ಹೊರಗಿರುವ ಭಕ್ತರ ಮನೆಗಳಿಗೆ ಭಿಕ್ಷಾಟನೆ ನಡೆಸಿ ರಥೋತ್ಸವ ದಿನದಂದು ಮರಳಿ ಪುರಪ್ರವೇಶ ಮಾಡುವ ಸಂಪ್ರದಾಯವಿದೆ. ಜಾತ್ರೆಯ ಪೂರ್ವ ತಯಾರಿಯನ್ನು ಶ್ರೀಮಠದ ಭಕ್ತ ಸಮೂಹವೇ ನೋಡಿಕೊಳ್ಳುತ್ತದೆ.</p>.<p>ಸಂಪ್ರದಾಯದಂತೆ ಮೇಗೇರಿ ಓಣಿಯ ಅಜ್ಜಾರ ಕಟ್ಟಿಯಲ್ಲಿ ಸಿದ್ಧರಾಮ ಸ್ವಾಮೀಜಿಗಳಿಗೆ ವಿಶೇಷ ಉಡುಪುಗಳನ್ನು ತೊಡಿಸಿದ ಬಳಿಕ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಹಣ್ಣುಕಾಯಿ ನೈವೇದ್ಯ ಅರ್ಪಿಸಿದರು. ನಂದಿಕೋಲು ಕುಣಿತ, ಜಾಂಜ್ ಮೇಳ, ಕೋಲಾಟ, ಡೊಳ್ಳು ಕುಣಿತ, ಜಲ್ಲಿಕಟ್ಟು ಹೋರಿಗಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು. ಜಾತ್ರಾ ಮಹೊತ್ಸವದಲ್ಲಿ ಎಲ್ಲ ಸಮುದಾಯದವರು ಭಾಗವಹಿಸಿದ್ದು ಕರ್ತೃಗಳ ಭಾವೈಕ್ಯತೆಯ ಸಂದೇಶಕ್ಕೆ ಹಿಡಿದ ಕನ್ನಡಿಯಾಗಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-23-1728165156</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಹಟ್ಟಿ: ಜಗದ್ಗುರು ಫಕೀರೇಶ್ವರ ಜಾತ್ರೆಯ ಅಂಗವಾಗಿ ಶುಕ್ರವಾರ ಪುರ ಪ್ರವೇಶ ಮಾಡಿದ ಶ್ರೀಮಠದ 13ನೇ ಪಟ್ಟಾಧ್ಯಕ್ಷ ಫಕೀರ ಸಿದ್ಧರಾಮ ಸ್ವಾಮೀಜಿ ಅವರನ್ನು ಭಕ್ತ ಸಮೂಹ ಅತ್ಯಂತ ಸಡಗರ ಸಂಭ್ರಮದಿಂದ ಬರಮಾಡಿಕೊಂಡಿತು.</p>.<p>ಜಾತ್ರಾ ಮಹೋತ್ಸವದ ಕಳಸಾರೊಹಣ ದಿನದಂದು ಸ್ವಾಮೀಜಿ ಅವರು ಶಿರಹಟ್ಟಿ ನಗರದ ಮಿತಿಯಿಂದ ಹೊರಗಿರುವ ಭಕ್ತರ ಮನೆಗಳಿಗೆ ಭಿಕ್ಷಾಟನೆ ನಡೆಸಿ ರಥೋತ್ಸವ ದಿನದಂದು ಮರಳಿ ಪುರಪ್ರವೇಶ ಮಾಡುವ ಸಂಪ್ರದಾಯವಿದೆ. ಜಾತ್ರೆಯ ಪೂರ್ವ ತಯಾರಿಯನ್ನು ಶ್ರೀಮಠದ ಭಕ್ತ ಸಮೂಹವೇ ನೋಡಿಕೊಳ್ಳುತ್ತದೆ.</p>.<p>ಸಂಪ್ರದಾಯದಂತೆ ಮೇಗೇರಿ ಓಣಿಯ ಅಜ್ಜಾರ ಕಟ್ಟಿಯಲ್ಲಿ ಸಿದ್ಧರಾಮ ಸ್ವಾಮೀಜಿಗಳಿಗೆ ವಿಶೇಷ ಉಡುಪುಗಳನ್ನು ತೊಡಿಸಿದ ಬಳಿಕ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಹಣ್ಣುಕಾಯಿ ನೈವೇದ್ಯ ಅರ್ಪಿಸಿದರು. ನಂದಿಕೋಲು ಕುಣಿತ, ಜಾಂಜ್ ಮೇಳ, ಕೋಲಾಟ, ಡೊಳ್ಳು ಕುಣಿತ, ಜಲ್ಲಿಕಟ್ಟು ಹೋರಿಗಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು. ಜಾತ್ರಾ ಮಹೊತ್ಸವದಲ್ಲಿ ಎಲ್ಲ ಸಮುದಾಯದವರು ಭಾಗವಹಿಸಿದ್ದು ಕರ್ತೃಗಳ ಭಾವೈಕ್ಯತೆಯ ಸಂದೇಶಕ್ಕೆ ಹಿಡಿದ ಕನ್ನಡಿಯಾಗಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-23-1728165156</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>