ದೇವಾಲಯದ ಸುತ್ತಲಿನ ಗ್ರಿಲ್ಗಳಿಗೆ ಅಳವಡಿಸಿದ್ದ ಆಲಂಕಾರಿಕ ವಿದ್ಯುತ್ ದೀಪಗಳು ಹಾಳಾಗಿದ್ದು, ರಾತ್ರಿ ಹೊತ್ತು ಕತ್ತಲು ಕವಿಯುತ್ತಿದೆ. ದೇವಾಲಯದ ಕಾವಲಿಗೆ ಕಾವಲುಗಾರ ಇಲ್ಲದ ಪರಿಣಾಮ ಕಿಡಿಗೇಡಿಗಳು ಇಲ್ಲಿನ ಗಿಡಗಳನ್ನು ಕಿತ್ತು ಹಾಳು ಮಾಡಿದ್ದಾರೆ. ಅಷ್ಟೋಂದು ಹಣ ಖರ್ಚು ಮಾಡಿ ನಿರ್ಮಿಸಿದ ಉದ್ಯಾನ ನಿರ್ವಹಣೆ ಕಳೆದುಕೊಂಡಿರುವುದರಿಂದ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆಕೂಡಲೇ ಗಮನಹರಿಸಿ ರಕ್ಷಣೆಗೆ ಮುಂದಾಗಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.