‘ತಾಲ್ಲೂಕಿನ ಶಿರಹಟ್ಟಿ ಪ್ರಾದೇಶಿಕ ಅರಣ್ಯ ವಲಯದ ಕಡಕೋಳ, ಜಲ್ಲಿಗೇರಿ, ಹೊಸೂರು, ಸಗ್ನಳ್ಳಿ, ಕುಸಲಾಪುರ ಅರಣ್ಯ ವ್ಯಾಪ್ತಿಯ ಕಾಡನ್ನು ಸಂರಕ್ಷಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಹೊಸದಾಗಿ ಯೋಚಿಸಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ₹7.51 ಲಕ್ಷದಲ್ಲಿ ಅರಣ್ಯದಲ್ಲೇ ದೊರೆಯುವ ಕಲ್ಲುಗಳನ್ನು ಬಳಕೆ ಮಾಡಿಕೊಂಡು 1.745 ಕಿ.ಮೀ. ಕಲ್ಲು ಗೋಡೆ ನಿರ್ಮಿಸಲಾಗಿದೆ’ ಎಂದು ಶಿರಹಟ್ಟಿ ವಲಯ ಅರಣ್ಯಾಧಿಕಾರಿ ಫಯಾಜ್ ಖಾಜಿ ಮಾಹಿತಿ ನೀಡಿದ್ದಾರೆ.